ವಿಪುಲ್ ಶಾ kiss ಕೊಡಲು ಯತ್ನಿಸಿದ್ದರು; sex ಬಯಸಿದ್ದರು: ಅಲ್ನಾಜ್
Team Udayavani, Oct 20, 2018, 11:31 AM IST
ಹೊಸದಿಲ್ಲಿ : ‘ನಿರ್ದೇಶಕ ವಿಪುಲ್ ಶಾ ನನಗೆ ಕಿಸ್ ಕೊಡಲು ಯತ್ನಿಸಿದ್ದಲ್ಲದೆ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ’ ಎಂದು ನೆಟ್ ಫ್ಲಿಕ್ಸ್ ಸರಣಿ ಸೇಕ್ರೆಡ್ ಗೇಮ್ಸ್ ನಲ್ಲಿ ಮುಖ್ಯ ಪಾತ್ರ ವಹಿಸಿದ್ದ ಇರಾನಿನ ನಟಿ ಅಲ್ನಾಜ್ ನರೋಜಿ ಆರೋಪಿಸಿದ್ದಾರೆ. ಆ ಮೂಲಕ “ಮೀ ಟೂ’ ಲೈಂಗಿಕ ಹಗರಣಕ್ಕೆ ವಿಪುಲ್ ಶಾ ಸೇರ್ಪಡೆಗೊಂಡಂತಾಗಿದೆ.
‘ಈಚೆಗೆ ಬಿಡುಗಡೆಗೊಂಡಿರುವ ನಮಸ್ತೇ ಇಂಗ್ಲಂಡ್ ಚಿತ್ರದ ಆಡಿಶನ್ ವೇಲೆ ವಿಪುಲ್ ಶಾ ನನ್ನಲ್ಲಿ ಲೈಂಗಿಕಾಸಕ್ತಿಯನ್ನು ತೋರುವ ರೀತಿಯಲ್ಲಿ ಮುಂದೊತ್ತಿ ಬಂದು ನನಗೆ ಲೈಂಗಿಕ ಕಿರುಕುಳ ನೀಡಿದರು’ ಎಂದು ಅಲ್ನಾಜ್, ಮಿಡ್ ಡೇ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
‘ನನ್ನಿಂದ ಸೆಕ್ಸ್ ಫೇವರ್ ಪಡೆಯುವುದಕ್ಕಾಗಿಯೇ ಆತ (ವಿಪುಲ್ ಶಾ) ಅನೇಕ ಬಾರಿ ನನ್ನಿಂದ ಆಡಿಶನ್ ಮಾಡಿಸಿಕೊಂಡದ್ದಲ್ಲದೆ ಚಿತ್ರಕ್ಕೆ ನಾನು ಸಹಿ ಹಾಕುವುದನ್ನು ಮುಂದೂಡುತ್ತಾ ಬಂದಿದ್ದರು’ ಎಂದು ಅಲ್ನಾಜ್ ಹೇಳಿದ್ದಾರೆ.
“ನಾನು ವಿಪುಲ್ ಅವರನ್ನು ಕಂಡಿದ್ದ ಸಂದರ್ಭದಲ್ಲಿ ಚಿತ್ರವಿನ್ನೂ ನಿರ್ಮಾಣ ಪೂರ್ವ ಹಂತದಲ್ಲಿತ್ತು. ನನ್ನನ್ನು ಎರಡನೇ ಮುಖ್ಯ ಪಾತ್ರದಲ್ಲಿ ಹಾಕಲಾಗುತ್ತದೆ ಎಂದು ಚಿತ್ರದ ಮ್ಯಾನೇಜರ್ ನನಗೆ ಹೇಳಿದರು. ಆಗಲೇ ನಾನು ವಿಪುಲ್ ಶಾ ಅವರನ್ನು ಕಂಡೆ. ಅವರು ಬೇಗನೆ ನನ್ನನ್ನು ಚಿತ್ರಕ್ಕೆ ಸೈನ್ ಅಪ್ ಮಾಡ್ತಾರೆ ಎಂದು ನಾನು ಭಾವಿಸಿಕೊಂಡೆ. ಆದರೆ ಅವರದನ್ನು ಬೇಕೆಂದೇ ವಿಳಂಬಿಸುತ್ತಾ ಹೋದರು…’
“……ಆಗ ನಾನು ಒಂದು ಬಾರಿ ವಿಪುಲ್ ಅವರನ್ನು ಅವರ ಕಚೇರಿಗೆ ಹೋಗಿ ಭೇಟಿ ಮಾಡಿದೆ; ಆಗ ಅವರು ಬೇಕೇಂದೇ ನನ್ನ ಅತ್ಯಂತ ಸನಿಹಕ್ಕೆ ಬಂದು ನನ್ನ ಪ್ರಷ್ಟಕ್ಕೆ ಸಣ್ಣದಾಗಿ ಪೆಟ್ಟು ಕೊಟ್ಟರು. ಇನ್ನೆರಡು ದಿನಗಳಲ್ಲಿ ಚಿತ್ರಕ್ಕೆ ನೀನು ಸಹಿ ಮಾಡಲಿರುವೆ ಎಂದು ವಿಪುಲ್ ಹೇಳಿದರು…’
‘ನನಗೆ ಕಿಸ್ ಕೊಡುವ ಯತ್ನದಲ್ಲಿ ನನ್ನ ನಿಕಟಕ್ಕೆ ಬಂದರು; ಆದರೆ ನಾನು ಹಿಂದೆ ಸರಿದೆ. ನಾನು ಕೇಳಿದೆ : ನೀವೇನು ಮಾಡ್ತಾ ಇದ್ದೀರಿ ? ನಾವೀಗ ಆಫೀಸಿನಲ್ಲಿದ್ದೇವೆ’ ಎಂದು ಹೇಳಿ ನಾನು ಆತನನ್ನು ದೂಡಿದೆ. ಆದರೆ ನಾನು ತುಂಬ್ರಾ ಕ್ರೂಡ್ ಆಗಿ ಬಿಹೇವ್ ಮಾಡದಂತೆ ಎಚ್ಚರಿಕೆ ತೋರಿದೆ; ಏಕೆಂದರೆ ನನಗೆ ಚಿತ್ರದಲ್ಲಿ ನಟಿಸುವ ಅವಕಾಶ ಬೇಕಿತ್ತು’ ಎಂದು ಅಲ್ನಾಜ್ ತನ್ನ ಅನುಭವವನ್ನು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ