ಜನ ಸಾಯುತ್ತಿದ್ದರೆ ನೀವು ಮೋಜು ಮಾಡುತ್ತಿದ್ದಿರಿ: ಸೆಲೆಬ್ರಿಟಿಗಳ ವಿರುದ್ಧ ಸಿದ್ಧಕಿ ಆಕ್ರೋಶ
Team Udayavani, Apr 24, 2021, 9:30 PM IST
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಘೋಷಿಸುತ್ತಿದ್ದಂತೆ ಮಾಲ್ಡಿವ್ಸ್ ಗೆ ಹಾರಿರುವ ಕೆಲವು ತಾರೆಯರ ವಿರುದ್ಧ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಕಿ ಆಕ್ರೋಶ ಹೊರಹಾಕಿದ್ದರು.
ಇಲ್ಲಿ ಜನ ಊಟ ಇಲ್ಲದೇ ಸಾಯುತ್ತಿದ್ದಾರೆ, ನೀವು ಹಣವನ್ನು ಪ್ರವಾಸದಲ್ಲಿ ಉಡಾಯಿಸುತ್ತಿದ್ದೀರ. ಸ್ವಲ್ಪವಾದ್ರೂ ನಾಚಿಕೆ ಬೇಡವೇ ಎಂದು ಖಾರವಾಗಿ ಪ್ರಶ್ನಿಸಿರುವ ಸಿದ್ಧಕಿ, ನಿಮ್ಮನ್ನು ಸ್ಟಾರ್ಗಳೆಂದು ಆರಾಧಿಸುವ ಜನರೇ ಇಂದು ಸಂಕಷ್ಟದಲ್ಲಿದ್ದಾರೆ. ಸಾಧ್ಯವಾದರೆ ಅವರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವೇ ಸುಮ್ಮನಿರಿ. ಇಂಥ ಸಮಯದಲ್ಲಿ ಪ್ರವಾಸದ ಸುಂದರ ಫೋಟೋಗಳನ್ನು ಹಾಕಿ ಮಾನ ಕಳೆದುಕೊಳ್ಳಬೇಡಿ ಎಂದು ಗುಡುಗಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಬಾಲಿವುಡ್ನ ಲವ್ಬರ್ಡ್ಸ್ ರಣವೀರ್ ಕಪೂರ್- ಆಲಿಯಾ ಭಟ್ ಕೊರೋನಾದಿಂದ ಗುಣಮುಖರಾಗುತ್ತಲೇ ಮಾಲ್ಡೀವ್ಸ್ಗೆ ಹಾರಿದ್ದರು. ನಟಿಮಣಿಯರಾದ ಜಾಹ್ನವಿ ಕಪೂರ್, ಶ್ರದ್ಧಾ ಕಪೂರ್, ದಿಶಾ ಪಟಾಣಿ ಕೂಡ ಬೀಚ್ನಲ್ಲಿ ಬಿಕಿನಿ ತೊಟ್ಟು ಮಿಂಚುತ್ತಿರುವ ಫೋಟೋಗಳನ್ನು ಅಪಲೋಡ್ ಮಾಡಿದ್ದರು.
ಇನ್ನು ಮುಂಬೈನಲ್ಲಿ ಕೋವಿಡ್ ಸೋಂಕು ಕೈ ಮೀರಿ ವ್ಯಾಪಿಸುತ್ತಿದೆ. ಒಂದು ಕಡೆ ಚೀನಿ ವೈರಸ್ ಅಬ್ಬರ ಹೆಚ್ಚಾಗಿದ್ದರೆ, ಮತ್ತೊಂದೆಡೆ ಆಸ್ಪತ್ರೆಗಲ್ಲಿ ಬೆಡ್ ಹಾಗೂ ಆಕ್ಸಿಜನ್ಗಳ ಅಭಾವ ಎದುರಾಗಿದೆ. ಕೋವಿಡ್ ಸರಪಳಿ ತುಂಡರಿಸಲು ಮಹಾ ಸರ್ಕಾರ ಹರಸಾಹಸ ಪಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು