Bollywood: ಅಡ್ವಾನ್ಸ್ ಬುಕಿಂಗ್ ನಲ್ಲೇ 6.40 ಕೋಟಿ ರೂ.ಗಳಿಸಿದ ರಣ್ಬೀರ್ ʼಅನಿಮಲ್ʼ
Team Udayavani, Nov 27, 2023, 3:27 PM IST
ಮುಂಬಯಿ: ರಣ್ಬೀರ್ ಕಪೂರ್ – ರಶ್ಮಿಕಾ ಮಂದಣ್ಣ ಅವರ ಪ್ಯಾನ್ ಇಂಡಿಯಾ ʼಅನಿಮಲ್ʼ ರಿಲೀಸ್ ಡೇಟ್ ಸಮೀಪಿಸುತ್ತಿದ್ದಂತೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಅಡ್ವಾನ್ಸ್ ಬುಕಿಂಗ್ ನಲ್ಲಿ ಸಿನಿಮಾ ದಾಖಲೆಯತ್ತ ಸಾಗುತ್ತಿದೆ.
‘ಅರ್ಜುನ್ ರೆಡ್ಡಿʼ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಆ್ಯಕ್ಷನ್ ಕಟ್ ಹೇಳಿರುವ ʼಅನಿಮಲ್ʼ ಸಿನಿಮಾದಲ್ಲಿ ರಣ್ಬೀರ್ ಕಪೂರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿದ್ದು, ಅದರಲ್ಲಿ ರಣ್ಬೀರ್ ಕಪೂರ್ ಮನೆ ಮಗನಾಗಿ ಹಾಗೂ ಮಾಸ್ ಅವತಾರದ ಹೀರೋ ಆಗಿ ಕಾಣಿಸಿಕೊಂಡಿದ್ದು,ಟ್ರೇಲರ್ ನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ʼಅನಿಮಲ್ʼ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದೆ. ಈಗಾಗಲೇ ಕೆಲ ಹೈಫೈ ಸಿಟಿಗಳಲ್ಲಿ ಟಿಕೆಟ್ ದರ 2000 ರೂ.ದಾಟಿದೆ. ಇದಲ್ಲದೆ ಅಡ್ವಾನ್ಸ್ ಬುಕಿಂಗ್ ನಲ್ಲೇ ʼಅನಿಮಲ್ʼ ಭರ್ಜರಿ ಗಳಿಕೆ ಕಂಡಿದೆ.
ಸಿನಿಮಾ ಮೊದಲ ದಿನ 50 ಕೋಟಿಯ ಗಳಿಕೆಯ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಹೀಗೆ ಆದರೆ ಇದು ಸಂದೀಪ್ ಹಾಗೂ ರಣ್ಬೀರ್ ಸಿನಿ ಕೆರಿಯರ್ ನಲ್ಲಿ ಹೊಸ ದಾಖಲೆ ಬರೆಯಲಿದೆ. ಕೆಲ ಟ್ರೇಡ್ ವರದಿಗಳ ಪ್ರಕಾರ ಇದುವರೆಗೆ ದೇಶೀಯ ಮಾರುಕಟ್ಟೆಯಲ್ಲಿ 6,036 ಪ್ರದರ್ಶನಗಳಿಗೆ ʼಅನಿಮಲ್ʼ ಸಿನಿಮಾದ 2,09,986 ಲಕ್ಷ ಟಿಕೆಟ್ ಗಳು ಮಾರಾಟವಾಗಿದೆ. ಇದರಿಂದ ಸಿನಿಮಾ ಈವರೆಗೆ 6.42 ಕೋಟಿ ರೂ.ಗಳಿಸಿದೆ ಎಂದು ವರದಿ ತಿಳಿಸಿದೆ.
ಇದರಲ್ಲಿ ಹಿಂದಿ ಆವೃತ್ತಿಯಲ್ಲಿ 1,76,192 ಟಿಕೆಟ್ಗಳು ಮಾರಾಟವಾಗಿದ್ದು, ಗಳಿಸಿ 5.87 ಕೋಟಿ ರೂ.ಗಳಿಸಿದೆ. ತೆಲುಗು ಆವೃತ್ತಿಯಲ್ಲಿ 33,453 ಟಿಕೆಟ್ಗಳು ಸೇಲ್ ಆಗಿ, 54 ಲಕ್ಷ ರೂ. ಗಳಿಸಿದೆ. ತಮಿಳು ಆವೃತ್ತಿಯಲ್ಲಿ 341 ಟಿಕೆಟ್ಗಳು ಮಾರಾಟವಾಗಿ 32,740 ರೂ.ಗಳಿಸಿದೆ.
ʼಕಬೀರ್ ಸಿಂಗ್ʼ (ಅರ್ಜುನ್ ರೆಡ್ಡಿ ರಿಮೇಕ್) ಬಳಿಕ ಸಂದೀಪ್ ವಂಗಾ ಅವರು ಬಾಲಿವುಡ್ ನಲ್ಲಿ ಮಾಡಿರುವ ಎರಡನೇ ಸಿನಿಮಾ ʼಅನಿಮಲ್ʼ ಆಗಿದೆ. ಡಿ.1 ರಂದು ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್ʼ ಸಿನಿಮಾದೊಂದಿಗೆ ʼಅನಿಮಲ್ʼ ಸಿನಿಮಾ ರಿಲೀಸ್ ಆಗಲಿದೆ.
ರಣ್ಬೀರ್, ರಶ್ಮಿಕಾ, ಅನಿಲ್ ಕಪೂರ್ , ಬಾಬಿ ಡಿಯೋಲ್ ಸೇರಿದಂತೆ ಇತರೆ ಪ್ರಮುಖರು ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ