ಸಕಲೇಶಪುರದಲ್ಲಿ60 ಕೋತಿಗಳ ಮಾರಣ ಹೋಮ:ಅಮಾನವೀಯ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಬಾಲಿವುಡ್ ನಟ
Team Udayavani, Jul 30, 2021, 1:40 PM IST
ಮುಂಬೈ : ಕರ್ನಾಟಕದಲ್ಲಿ ನಡೆದ ಮಂಗಗಳ ಮಾರಣ ಹೋಮದ ಘಟನೆ ವಿರುದ್ಧ ಕೆರಳಿರುವ ಬಾಲಿವುಡ್ ನಟ ರಣದೀಪ್ ಹೂಡ ಈ ಅಮಾನವೀಯತೆಗೆ ಕಾರಣವಾದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಹಾಸನದ ಸಕಲೇಶಪುರದಲ್ಲಿ ಕೋತಿಗಳಿಗೆ ವಿಷ ಹಾಕಲಾಗಿದೆ. ಇದರಿಂದ 60 ಕ್ಕೂ ಹೆಚ್ಚು ಮಂಗಗಳು ಸಾವನ್ನಪ್ಪಿವೆ. ಕೋತಿಗಳ ಮೃತ ದೇಹಗಳನ್ನು ರಸ್ತೆಯಲ್ಲಿ ಬಿಸಾಡಿ ಅಮಾನವೀಯತೆ ತೋರಲಾಗಿದೆ. ಈ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಟ ರಣದೀಪ್ ಹೂಡಾ, ”ಇದು ಅತ್ಯಂತ ಹೇಯವಾದ ಘಟನೆ. 60ಕ್ಕೂ ಹೆಚ್ಚು ಕೋತಿಗಳಿಗೆ ವಿಷವಿಕ್ಕಿ ಅವುಗಳನ್ನು ಚೀಲದಲ್ಲಿ ತುಂಬಿ ಸಕಲೇಶಪುರದ ಬೇಗೂರು ಬಳಿ ರಸ್ತೆಯಲ್ಲಿ ಬಿಸಾಡಲಾಗಿದೆ” ಎಂದಿದ್ದಾರೆ ರಣದೀಪ್ ಹೂಡ.
ಈ ಹೇಯ ಕೃತ್ಯ ಮಾಡಿರುವವರಿಗೆ ಸೂಕ್ತ ಶಿಕ್ಷೆ ನೀಡಿ ಎಂದು ರಣದೀಪ್ ಹೂಡ ಮನವಿ ಮಾಡಿದ್ದು, ತಮ್ಮ ಟ್ವೀಟ್ ಅನ್ನು ಕರ್ನಾಟಕ ಮುಖ್ಯಮಂತ್ರಿಗಳಿಗೆ, ರಾಜ್ಯ ಅರಣ್ಯ ಇಲಾಖೆಗೆ, ಕೇಂದ್ರ ಅರಣ್ಯ ಮಂತ್ರಿಗೆ ಟ್ಯಾಗ್ ಮಾಡಿದ್ದಾರೆ.
ಇನ್ನು ಈ ಘಟನೆ ಬುಧವಾರ( ಜು.28) ನಡೆದಿದ್ದು 60 ಕೋತಿಗಳಿಗೆ ಯಾರೊ ಕಿಡಿಗೇಡಿಗಳು ವಿಷವಿಕ್ಕಿ ಮೂಟೆಗಳಲ್ಲಿ ತುಂಬಿ ಬೇಗೂರು ಬಳಿಯ ರಸ್ತೆಯಲ್ಲಿ ಬಿಸಾಡಿದ್ದಾರೆ, ಸ್ಥಳೀಯರ ಸಹಾಯದೊಂದಿಗೆ ಅಧಿಕಾರಿಗಳು 14 ಕೋತಿಗಳನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಪ್ರಕರಣ ಸಹ ದಾಖಲಾಗಿದೆ.
In an absolutely heinous act, more than 60 monkeys were poisoned, tied in bags and thrown on Sakleshpur Begur Crossroad in Hassan District, Karnataka. @moefcc @byadavbjp @aranya_kfd @CMofKarnataka pic.twitter.com/VqHv0Oew8v
— Randeep Hooda (@RandeepHooda) July 29, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ