ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನು ಪೂರ್ತಿಗೊಳಿಸಿದ Shah Rukh Khan

ಮನೆಗೆ ಬಂದು ಊಟ ಸೇವಿಸುತ್ತೇನೆ.. ಆರ್ಥಿಕವಾಗಿ ನೆರವಿಗೆ ನಿಂತ ನಟ

Team Udayavani, May 23, 2023, 3:54 PM IST

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನು ಪೂರ್ತಿಗೊಳಿಸಿದ Shah Rukh Khan

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನು ಪೂರ್ತಿಗೊಳಿಸಿದ Shah Rukh Khan

ಕೋಲ್ಕತ್ತಾ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಅಪಾರ ಅಭಿಮಾನಿಗಳಲ್ಲಿ ಒಬ್ಬರಾಗಿರುವ, ಮಾರಣಾಂತಿಕ ಕ್ಯಾನ್ಸರ್‌ ನಿಂದ ಬಳಲುತ್ತಿರುವ  ಶಿವಾನಿ ಚಕ್ರವರ್ತಿ ಎಂಬ ವೃದ್ಧೆಯ ಕೊನೆಯ ಆಸೆಯನ್ನು ಶಾರುಖ್‌ ಅವರು ಪೂರ್ತಿಗೊಳಿಸಿದ್ದಾರೆ.

ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ‌ ಜಿಲ್ಲೆಯ 60 ವರ್ಷದ ವೃದ್ಧೆ ಶಿವಾನಿ ಚಕ್ರವರ್ತಿ ಕಿಂಗ್‌ ಖಾನ್‌ ಅವರ ಬಹುದೊಡ್ಡ ಅಭಿಮಾನಿ. ಅವರಿಗೆ ನಡೆಯಲು ಆಗದೇ ಇದ್ದರೂ,  ನಿತ್ಯ ಶಾರುಖ್‌ ಅವರ ಧ್ಯಾನವನ್ನೇ ಮಾಡಿಕೊಂಡು, ಅವರನ್ನು ಒಮ್ಮೆಯಾದರೂ ಭೇಟಿ ಆಗಬೇಕೆಂದುಕೊಂಡಿದ್ದರು.

ಹೌದು ಶಿವಾನಿ ಚಕ್ರವರ್ತಿ ಶಾರುಖ್‌ ಖಾನ್‌ ಅವರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾವನ್ನು ನೋಡಿದ್ದಾರೆ. ಎದ್ದು ನಡೆಯಲು ಕಷ್ಟವಾದರೂ ಇತ್ತೀಚೆಗೆ ತೆರೆಕಂಡ  ʼಪಠಾಣ್‌ʼ ಸಿನಿಮಾವನ್ನು ಥಿಯೇಟರ್‌ ಗೆ ಹೋಗಿ ನೋಡಿದ್ದಾರೆ. 2000 ಇಸವಿಯಿಂದ ಇದುವರಗೆ ಬಂದ ಅವರ ಎಲ್ಲಾ ಸಿನಿಮಾದ ಪೋಸ್ಟರ್‌ ಗಳನ್ನು ತನ್ನ ಬೆಡ್‌ ರೂಮ್‌ ನ ಗೋಡೆಗಳಲ್ಲಿ ಅಂಟಿಸಿ ಇಟ್ಟಿದ್ದಾರೆ. ಶಾರುಖ್‌ ಖಾನ್‌ ಅವರು ಕೆಕೆಆರ್‌ ತಂಡವನ್ನು ಖರೀದಿಸಿದಾಗಿನಿಂದ ಅವರು ಐಪಿಎಲ್‌ ನಲ್ಲಿ ಕೆಕೆಆರ್‌ ತಂಡವನ್ನು ಸರ್ಪೋಟ್‌ ಮಾಡುವುದು ಮಾತ್ರವಲ್ಲದೆ, ಕೆಕೆಆರ್‌ ನ ಎಲ್ಲಾ ಪಂದ್ಯವನ್ನು ಶಾರುಖ್‌ ಗಾಗಿ ನೋಡಿದ್ದಾರೆ.

ಇದನ್ನೂ ಓದಿ:ಬಡತನ: ಮಕ್ಕಳ ಕಾಲಿಗೆ ಚಪ್ಪಲಿಯಂತೆ ಪ್ಲ್ಯಾಸ್ಟಿಕ್‌ ಸುತ್ತಿ ಕೆಲಸಕ್ಕಾಗಿ ಬೀದಿ ಅಲೆದ ತಾಯಿ.!

“ನಾನು ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ. ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದಾರೆ. ನನ್ನ ಜೀವನದ ಕೊನೆ ಆಸೆ ಎಂದರೆ ಅದು ಶಾರುಖ್‌ ಅವರನ್ನು ಮುಖತಃ ಭೇಟಿ ಆಗಬೇಕು” ಎಂದು ಶಿವಾನಿ ಚಕ್ರವರ್ತಿ ಹೇಳಿದ್ದರು.

ಈ ಸಂಬಂಧ ಶಿವಾನಿ ಅವರ ಮಗಳು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟನ್ನು ಹಾಕಿಕೊಂಡಿದ್ದರು. ಇದೀಗ ಈ ಪೋಸ್ಟ್‌ ಗಳು ಶಾರುಖ್‌ ಅವರ ಗಮನಕ್ಕೆ ಬಂದಿದ್ದು, ಮಾರಣಾಂತಿಕ ಕ್ಯಾನ್ಸರ್‌ ನಿಂದ ಬಳಲುತ್ತಿರುವ  ಶಿವಾನಿ ಚಕ್ರವರ್ತಿ ಶಾರುಖ್‌ ಖಾನ್‌ ಅವರು ವಿಡಿಯೋ ಕಾಲ್‌ ಮಾಡಿ ಮಾತನಾಡಿದ್ದಾರೆ.

ಈ ಬಗ್ಗೆ ಶಿವಾನಿ ಅವರ ಮಗಳು ʼಇಂಡಿಯಾ ಟುಡೇʼ ಜೊತೆ ಮಾತನಾಡಿದ್ದಾರೆ. “ನನ್ನ ತಾಯಿ ಜೊತೆಗೆ ವಿಡಿಯೋ ಕಾಲ್‌ ನಲ್ಲಿ ಸುಮಾರು 40 ನಿಮಿಷ ಶಾರುಖ್‌ ಖಾನ್‌ ಅವರು ಮಾತನಾಡಿದ್ದಾರೆ. ಅವರು ಅಮ್ಮನ ಕಾಯಿಲೆ ಬೇಗ ಗುಣವಾಗಲಿವೆಂದು ವಿಡಿಯೋ ಕಾಲ್‌ ನಲ್ಲೇ ದುಃಆ ( ಪ್ರಾರ್ಥನೆ) ಯನ್ನು ಮಾಡಿದ್ದಾರೆ. ನಮ್ಮ ಮನೆಗೆ ಹಾಗೂ ನನ್ನ ಮದುವೆಯ ಸಂದರ್ಭದಲ್ಲಿ ಅವರು ಬಂದು ನಮ್ಮ ಮನೆಯಲ್ಲಿ ಊಟ ಮಾಡುತ್ತಾರೆ ಎಂದಿದ್ದಾರೆ. ನನ್ನ ತಾಯಿ ಕ್ಯಾನ್ಸರ್‌ ನಿಂದ ಹೋರಾಡಲು ಆರ್ಥಿಕವಾಗಿ ಅವರಿಗೆ ಸಹಾಯ ಮಾಡುವುದಾಗಿ ಶಾರುಖ್‌ ಅವರು ಹೇಳಿದ್ದಾರೆ ಎಂದು ಶಿವಾನಿ ಅವರ ಮಗಳು ಹೇಳಿದ್ದಾರೆ.

ಸದ್ಯ ಶಾರುಖ್‌ ಖಾನ್‌ ರಾಜ್‌ ಕುಮಾರ್‌ ಹಿರಾನಿ ಅವರ ʼ ಡಂಕಿʼ ಸಿನಿಮಾದ ಶೂಟ್‌ ನಲ್ಲಿ ಬ್ಯುಸಿಯಾಗಿದ್ದಾರೆ.

 

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.