ಗೋವಾ ಚಿತ್ರೋತ್ಸವ: ಕಿರುಚಿತ್ರ ನಿರ್ದೇಶಕರಿಗೆ ಸುವರ್ಣಾವಕಾಶ ಮಿನಿಮೂವಿ ಮಾಡಿ ಬಹುಮಾನ ಗೆಲ್ಲಿ

ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಸುವರ್ಣ ಸಂಭ್ರಮ

Team Udayavani, Nov 13, 2019, 10:52 PM IST

Movie-Shooting-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (IFFI) ತನ್ನ ಸುವರ್ಣ ಮಹೋತ್ಸವದ ವರ್ಷದಲ್ಲಿ ಆರಂಭಿಸಿರುವ ಹೊಸತೆಂದರೆ ‘ಮಿನಿ ಮೂವಿ ಮಾಡಿ ಬಹುಮಾನ ಗೆಲ್ಲಿ‘.
ಮಿನಿ ಮೂವಿ ಮೇನಿಯಾ – ಕಿರುಚಿತ್ರ ಸ್ಪರ್ಧೆಗೆ ಈಗಾಗಲೇ ನೋಂದಣಿ ಆರಂಭವಾಗಿದೆ. ಇಫಿ ಸಮಿತಿ ಉತ್ಸವದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಕಟಿಸಲಿದೆ. ಆ ಬಳಿಕ 72 ಗಂಟೆಗಳಲ್ಲಿ ಕಿರುಚಿತ್ರ ನಿರ್ಮಿಸಿ ಸಲ್ಲಿಸಬೇಕು. ಈ ಪೈಕಿ ಗೋವಾ ವಿಭಾಗ ಮತ್ತು ರಾಷ್ಟ್ರೀಯ ವಿಭಾಗಗಳೆಂದು ಇರಲಿವೆ.

ಇಫಿ ಸಮಿತಿಯವರು ಹೇಳುವಂತೆ, ಕಿರುಚಿತ್ರ ನಿರ್ಮಾಣವನ್ನು ಪ್ರೋತ್ಸಾಹಿಸುವುದು, ಚಿತ್ರ ನಿರ್ಮಾಣಕಾರರನ್ನು ಪರಸ್ಪರ ಬೆಸೆಯುವುದು ಈ ಸ್ಪರ್ಧೆಯ ಉದ್ದೇಶ. ಇದರೊಂದಿಗೆ ಹೊಸ ತರುಣ ಪ್ರತಿಭೆಗಳನ್ನು ಬೆಳಕಿಗೆ ತರುವ ಮೂಲೋದ್ದೇಶವನ್ನೂ ಹೊಂದಲಾಗಿದೆ.

ಅರ್ಹತೆಗಳು:
ರಾಷ್ಟ್ರೀಯವಿಭಾಗ : ಸಿನಿಮಾ ಮೂಕಿ ಚಿತ್ರವಾಗಿರಬಹುದು ಅಥವಾ ಯಾವುದೇ ಭಾರತೀಯ ಭಾಷೆ ಅಥವಾ ಇಂಗ್ಲಿಷ್ ಭಾಷೆಯ ಸಿನೇಮಾ ಆಗಿರಬಹುದು. ಆದರೆ ಅದನ್ನು ಭಾರತೀಯರೇ ಅಥವಾ ಭಾರತದ ಚಿತ್ರ ನಿರ್ಮಾಣ ಕಂಪೆನಿಗಳು, ಸಾಮಾಜಿಕ – ಶೈಕ್ಷಣಿಕ ಸಂಸ್ಥೆಗಳು ಅಥವಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ತಮ್ಮ ರಾಷ್ಟ್ರೀಯತೆಯನ್ನು ಖಚಿತಪಡಿಸುವ ಯಾವುದೇ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಗೋವಾ ವಿಭಾಗ: ಈ ವಿಭಾಗದಡಿ ಗೋವಾದವರು, ಗೋವಾದ ಸಂಸ್ಥೆಗಳು ಸಿನಿಮಾವನ್ನು ಸಲ್ಲಿಸಬಹುದು. ಜತೆಗೆ ಸಿನಿಮಾದಲ್ಲಿ ಬಳಸಲಾಗುವ ಕಲಾವಿದರು ಮತ್ತು ಪರಿಣಿತರೂ ಗೋವಾದವರೇ ಆಗಿರಬೇಕು. ಇಲ್ಲಿಯೂ ಸರಕಾರ ನೀಡಿದ ಯಾವುದಾದರೂ ದಾಖಲೆಗಳನ್ನು ಸಲ್ಲಿಸಬೇಕು. ಗೋವಾದವರು ಎರಡೂ ವಿಭಾಗಗಳಲ್ಲಿ ಭಾಗವಹಿಸಬಹುದು.

ಇಂಗ್ಲಿಷ್ ಹೊರತುಪಡಿಸಿದಂತೆ ಉಳಿದೆಲ್ಲಾ ಚಿತ್ರಗಳು ಇಂಗ್ಲಿಷ್ ಸಬ್ ಟೈಟಲ್ಸ್ ಗಳನ್ನು ಹೊಂದಿರಬೇಕು. ಹೆಸರು ನೋಂದಾಯಿಸಲು ಇದೇ ನವೆಂಬರ್ 15 ಕೊನೆಯ ದಿನ. ಹೆಸರು ನೋಂದಣಿ ಉಚಿತವಾಗಿದ್ದು, ಸಿನಿಮಾ ಸಲ್ಲಿಕೆಗೆ ಒಂದು ಸಾವಿರ ರೂ. ಶುಲ್ಕ ಪಾವತಿಸಬೇಕು.

ಬಹುಮಾನಗಳ ವಿವರ
– ಅತ್ಯುತ್ತಮ ಚಿತ್ರ – ಪ್ರಥಮ ಒಂದು ಲಕ್ಷ ರೂ, ದ್ವಿತೀಯ 50 ಸಾವಿರ ರೂ.,
– ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಥೆ – ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಸಿನಿ ಛಾಯಾಗ್ರಾಹಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಧ್ವನಿ ಮುದ್ರಣ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ನಟ – ನಟಿ ವಿಭಾಗಗಳಲ್ಲಿ ಪ್ರಥಮ (25 ಸಾವಿರ ರೂ) ಹಾಗೂ ದ್ವಿತೀಯ (20) ಸಾವಿರ ರೂ, ಬಹುಮಾನಗಳಿವೆ.

ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಸಂಬಂಧ ವಿವರಗಳಿಗೆ ಸಂಪರ್ಕಿಸಿ: https://iffigoa.org/mini-movie-mania-short-film-competition-iffi-2019/

ಸಿನಿಮಾ ಸಲ್ಲಿಕೆಗೆ : https://docs.google.com/forms/d/e/1FAIpQLSd2vGr6qSm7qnvx90gbhgb7p01tM0rl3DPvCSReMSdWZnB4fg/viewform

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.