SRK ‘ಜವಾನ್’ ಹಾಡಿನ ಟೀಸರ್ ಬಿಟ್ಟು, ಟ್ರೇಲರ್ ಸಿದ್ಧವಾಗಿದೆ ಎಂದ ಶಾರುಖ್!
ಚಿತ್ರ ಬಿಡುಗಡೆಗೆ ಕೇವಲ 11 ದಿನಗಳು ಬಾಕಿ !
Team Udayavani, Aug 26, 2023, 7:25 PM IST
ಮುಂಬಯಿ: ಬಹು ನಿರೀಕ್ಷಿತ ಆಕ್ಷನ್ ಚಿತ್ರ “ಜವಾನ್” ಬಿಡುಗಡೆಗೆ ಕೇವಲ 11 ದಿನಗಳು ಉಳಿದಿರುವಾಗ, ಸೂಪರ್ ಸ್ಟಾರ್ ಶಾರುಖ್ ಖಾನ್ ಶನಿವಾರ ಅಭಿಮಾನಿಗಳಿಗೆ ಚಿತ್ರದ ಟ್ರೇಲರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಟ್ಲೀ ನಿರ್ದೇಶನದ ಚಿತ್ರದ ಪ್ರಚಾರಕ್ಕೆ ಶಾರುಖ್ ಮತ್ತೊಂದು ಪ್ರಶ್ನೋತ್ತರ ಸೆಷನ್ #AskSRK ಅನ್ನು ಎಕ್ಸ್ನಲ್ಲಿ ತನ್ನ ಅಭಿಮಾನಿಗಳೊಂದಿಗೆ ನಡೆಸಿದ್ದಾರೆ. ಅಭಿಮಾನಿಗಳೊಂದಿಗಿನ ಚಾಟ್ ಸಮಯದಲ್ಲಿ ಚಿತ್ರದ ಹೊಸ ಹಾಡಿನ ” ನಾಟ್ ರಾಮಯ್ಯ ವಸ್ತಾವಯ್ಯ” ಹಾಡಿನ ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ.
ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್ ಬಗ್ಗೆ ಶಾರುಖ್ ಪ್ರಶ್ನೆಗಳ ಪ್ರವಾಹಕ್ಕೆ ಸಿಲುಕಿದ್ದಾರೆ. ಚಿತ್ರ ತಂಡ ಇಲ್ಲಿಯವರೆಗೆ ಪ್ರಿವ್ಯೂ ಬಿಡುಗಡೆ ಮಾಡಿದೆ, ಇದು ಚಲನಚಿತ್ರದ ಮೊದಲ ನೋಟವನ್ನು ಒದಗಿಸಿದ ಎರಡು ನಿಮಿಷಗಳ ಕ್ಲಿಪ್ ಮತ್ತು ಎರಡು ಹಾಡುಗಳು “ಜಿಂದಾ ಬಂದ” ಮತ್ತು “ಚಲೇಯಾ” ಬಿಡುಗಡೆ ಮಾಡಿದೆ.
Ok guys time to go make the trailer as everyone wants that. @TSeries & @anirudhofficial & @Atlee_dir had wanted to put out song. Will leave a teaser now….& get @AntonyLRuben to work on trailer. Song is….Not …Ramaiya Vastvaiya. Bye for now love u all. #Jawan pic.twitter.com/zb9Zsq9bJr
— Shah Rukh Khan (@iamsrk) August 26, 2023
”ಸರಿ , ಎಲ್ಲರೂ ಬಯಸಿದಂತೆ ಟ್ರೇಲರ್ ಬಿಡುಗಡೆ ಮಾಡಲು ಸಮಯವಿದೆ.ಇದೀಗ ಟೀಸರ್ ಅನ್ನು ಬಿಡುತ್ತೇನೆ….ಸದ್ಯಕ್ಕೆ ಹಾಡು, ನಾಟ್ ರಾಮಯ್ಯ ವಸ್ತಾವಯ್ಯ… ನೀಡುತ್ತಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ” ಎಂದು ಶಾರುಕ್ ಪೋಸ್ಟ್ ಮಾಡಿದ್ದಾರೆ.
‘ಜವಾನ್’ ಚಿತ್ರಕ್ಕೆ ಕೆಲ ಬದಲಾವಣೆಗಳ ಬಳಿಕ ಅಂತಿಮವಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) U/A ಪ್ರಮಾಣಪತ್ರವನ್ನು ನೀಡಿದೆ. ಇತ್ತೀಚಿನ ನವೀಕರಣದ ಪ್ರಕಾರ ಚಿತ್ರ 2 ಗಂಟೆ 49 ನಿಮಿಷಗಳ ಅವಧಿಯದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್