ಆ ಕಾರಣಕ್ಕಾಗಿ “ಬ್ರಹ್ಮಾಸ್ತ್ರ“ ದಲ್ಲಿ ನಟಿಸುವ ಆಫರ್ ತಿರಸ್ಕರಿಸಿದ ಸ್ಟಾರ್ ನಟ
Team Udayavani, Sep 18, 2022, 5:11 PM IST
ಹೈದರಾಬಾದ್: ʼಬ್ರಹ್ಮಾಸ್ತ್ರʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದೆ. ಬಾಲಿವುಡ್ ಗೆ ಬಹು ಸಮಯದ ಬಳಿಕ ದೊಡ್ಡ ಗೆಲುವು ಸಿಕ್ಕಿದೆ. ಚಿತ್ರ ಯಶಸ್ವಿಯಾಗಿ ಸಾಗುತ್ತಿರುವ ಬೆನ್ನಲ್ಲೇ ಸ್ಟಾರ್ ನಟರೊಬ್ಬರು ʼಬ್ರಹ್ಮಾಸ್ತ್ರʼ ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.
2016 ರಲ್ಲಿ ಟೈಗರ್ ಶ್ರಾಫ್ ಅಭಿನಯದ ʼಭಾಗಿʼ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟಿದ್ದ ಟಾಲಿವುಡ್ ಸ್ಟಾರ್ ನಟ ಸುಧೀರ್ ಬಾಬು ಇತ್ತೀಚಿಗೆ ರಿಲೀಸ್ ಆಗಿರುವ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಚಿತ್ರದ ಪ್ರಚಾರದ ವೇಳೆ “ಬ್ರಹ್ಮಾಸ್ತ್ರ” ಚಿತ್ರದ ಬಗ್ಗೆ ಮಾತಾನಾಡಿದ್ದಾರೆ.
“ನನಗೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಲು ಆಫರ್ ಬಂದಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ. ನಾನು ಆ ಸಮಯದಲ್ಲಿ ಬೇರೆಯೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದೆ. ʼಬ್ರಹ್ಮಾಸ್ತ್ರʼ ದಲ್ಲಿ ನನ್ನ ಪಾತ್ರ ಚಾಲೇಜಿಂಗ್ ಆಗಿತ್ತು ಎಂದಿದ್ದಾರೆ.
ಆದರೆ ಸುಧೀರ್ ಅವರು ಯಾವ ಪಾತ್ರದಲ್ಲಿ ನಟಿಸಲಿದ್ದರು ಎಂದು ಹೇಳಿಲ್ಲ. ʼ ಸಮ್ಮೋಹನಂʼ ಚಿತ್ರಕ್ಕಾಗಿ ಅವರು ʼಬ್ರಹ್ಮಾಸ್ತ್ರʼ ಆಫರ್ ತಿರಸ್ಕರಿಸಿದ್ದರು ಎಂದು ವರದಿ ತಿಳಿಸಿದೆ.
ʼಸಮ್ಮೋಹನಂʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಕಮಾಲ್ ಮಾಡಲಿಲ್ಲ. ಇಂದ್ರಗಂಟಿ ಮೋಹನಕೃಷ್ಣ ನಿರ್ದೇಶನದ “ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ” ಸುಧೀರ್ ಬಾಬು ಅವರೊಂದಿಗೆ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್