ಮಾರಣಾಂತಿಕ ಕ್ಯಾನ್ಸರ್‌.. ನಡೆಯಲು ಆಗದ ಸ್ಥಿತಿ: ಶಾರುಖ್ ಖಾನ್ ಭೇಟಿ ಆಗುವುದೇ ಇವರ ಕೊನೆ ಆಸೆ

ಇವರ ರೂಮ್‌ ಇಡೀ ಶಾರುಖ್‌ ಫೋಟೋಗಳ ಕಲರವ

Team Udayavani, May 20, 2023, 5:17 PM IST

tdy-20

ಮುಂಬಯಿ: ಸಿನಿಮಾಗಳು ನಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತವೆ. ಸಿನಿಮಾ ನಟ – ನಟಿಯರನ್ನು ಒಮ್ಮೆಯಾದರೂ ನಾವು ಜೀವನದಲ್ಲಿ ಭೇಟಿ ಆಗಬೇಕೆನ್ನುವ ಅಭಿಮಾನ ಮೂಡುತ್ತದೆ. ಕೆಲವರು ತನ್ನ ಮೆಚ್ಚಿನ ನಟರ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿರುತ್ತಾರೆ. ಅಂಥದ್ದೇ ಒಬ್ಬ ಅಪ್ಟಟ ಅಭಿಮಾನಿಯೊಬ್ಬರ ಸ್ಟೋರಿಯಿದು.

ಶಾರುಖ್ ಖಾನ್‌ ಯಾರಿಗೆ ಗೊತ್ತಿಲ್ಲ ಹೇಳಿ. ವಯಸ್ಸು 57 ದಾಟಿದರೂ ಇಂದಿಗೂ 17 ವರ್ಷದ ಯುವಕನಂತೆ ಫೈಟ್‌, ಆ್ಯಕ್ಟ್‌ ಎರಡನ್ನೂ ಸಮಾನವಾಗಿ ಮಾಡಬಲ್ಲ ಬಾಲಿವುಡ್‌ ನ ಕಿಂಗ್‌ ಖಾನ್‌ ಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅಂಥ ದೊಡ್ಡ ಅಭಿಮಾನಿಗಳ ಸಾಗರದಲ್ಲಿ ಒಂದು ಪುಟ್ಟ ಅಲೆಗಳಂತೆ ಇರುವವರು ಪಶ್ಚಿಮ ಬಂಗಾಳದ ನಾರ್ತ್ 24 ಪರಗಣ‌ ಜಿಲ್ಲೆಯ 60 ವರ್ಷದ ವೃದ್ಧೆ ಶಿವಾನಿ ಚಕ್ರವರ್ತಿಯೂ ಒಬ್ಬರು.

ಶಾರುಖ್‌ ಖಾನ್‌ ಎಂದರೆ ವಿವರಸಲಾಗದ ಅಭಿಮಾನ.. ನಾವು – ನೀವು ಶಾರುಖ್‌ ಖಾನ್‌ ಅಥವಾ ಇತರ ನಟ – ನಟಿಯರ ಅಭಿಮಾನಿಗಳು ಆಗಿರಬಹುದು. ಆದರೆ ಇವರ ಅಭಿಮಾನ ನಮ್ಮ ನಿಮ್ಮಂತೆ ಖಂಡಿತ ಅಲ್ಲ. ಶಿವಾನಿ ಚಕ್ರವರ್ತಿ ಮಾರಣಾಂತಿಕ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ. ಇನ್ನೇನು ಕೆಲ ತಿಂಗಳೇ ಬದುಕುಬಹುದು ಎನ್ನುವ ಸ್ಥಿತಿಯಲ್ಲಿದ್ದಾರೆ. ಆದರೆ ಅವರ ಕೊನೆಯ ಆಸೆ ಶಾರುಖ್‌ ಖಾನ್‌ ರನ್ನು ಭೇಟಿ ಆಗಬೇಕೆನ್ನುವುದು.!

ಹೌದು ಶಿವಾನಿ ಚಕ್ರವರ್ತಿ ಶಾರುಖ್‌ ಖಾನ್‌ ಅವರ ದೊಡ್ಡ ಅಭಿಮಾನಿ. ಅವರ ಎಲ್ಲಾ ಸಿನಿಮಾವನ್ನು ನೋಡಿದ್ದಾರೆ. ಎದ್ದು ನಡೆಯಲು ಕಷ್ಟವಾದರೂ ಇತ್ತೀಚೆಗೆ ತೆರೆಕಂಡ  ʼಪಠಾಣ್‌ʼ ಸಿನಿಮಾವನ್ನು ಥಿಯೇಟರ್‌ ಗೆ ಹೋಗಿ ನೋಡಿದ್ದಾರೆ. 2000 ಇಸವಿಯಿಂದ ಇದುವರಗೆ ಬಂದ ಅವರ ಎಲ್ಲಾ ಸಿನಿಮಾದ ಪೋಸ್ಟರ್‌ ಗಳನ್ನು ತನ್ನ ಬೆಡ್‌ ರೂಮ್‌ ನ ಗೋಡೆಗಳಲ್ಲಿ ಅಂಟಿಸಿ ಇಟ್ಟಿದ್ದಾರೆ. ಶಾರುಖ್‌ ಖಾನ್‌ ಅವರು ಕೆಕೆಆರ್‌ ತಂಡವನ್ನು ಖರೀದಿಸಿದಾಗಿನಿಂದ ಅವರು ಐಪಿಎಲ್‌ ನಲ್ಲಿ ಕೆಕೆಆರ್‌ ತಂಡವನ್ನು ಸರ್ಪೋಟ್‌ ಮಾಡುವುದು ಮಾತ್ರವಲ್ಲದೆ, ಕೆಕೆಆರ್‌ ನ ಎಲ್ಲಾ ಪಂದ್ಯವನ್ನು ಶಾರುಖ್‌ ಗಾಗಿ ನೋಡುತ್ತಾರೆ.

“ನಾನು ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ. ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದಾರೆ.ನನ್ನ ಜೀವನದ ಕೊನೆ ಆಸೆ ಎಂದರೆ ಅದು ಶಾರುಖ್‌ ಅವರನ್ನು ಮುಖತಃ ಭೇಟಿ ಆಗಬೇಕು” ಎಂದು ಶಿವಾನಿ ಚಕ್ರವರ್ತಿ ಹೇಳುತ್ತಾರೆ.

ಶಾರುಖ್‌ ಅವರಿಗೆ ಬಂಗಾಳಿ ಆಹಾರ ಇಷ್ಟ. ನಾನು ಅವರಿಗೆ ಮನೆಯಲ್ಲಿ ಬಂಗಾಳಿ ಅಡುಗೆಯನ್ನು ಮಾಡಿ ಬಡಿಸಬೇಕೆಂದು ಹೇಳುತ್ತಾ ಕಣ್ಣಂಚಿನಲ್ಲಿ ನೀರು ತುಂಬಿ ಮಾತನಾಡಿದರು.

ಶಾರುಖ್‌ ಅವರಿಗೆ ಹೇಳಲು ಬಯಸುವ ಒಂದು ವಿಚಾರ ಏನಾದರೂ ಇದ್ದರೆ ಹೇಳಿ ಎಂದಾಗ ಅವರು, “ನನ್ನ ಮಗಳನ್ನು ಆಶೀರ್ವದಿಸುವಂತೆ ನಾನು ಅವರನ್ನು ಕೇಳಲು ಬಯಸುತ್ತೇನೆ. ನಾನು ಅವನನ್ನು ನೋಡಲು ಬಯಸುತ್ತೇನೆ ಮತ್ತು  ಅವರ ಸರಳತೆಯನ್ನು ನೋಡಲು ಬಯಸುತ್ತೇನೆ.” ಎಂದರು.

ಈಗಾಗಲೇ  ಶಿವಾನಿ ತನ್ನ ಚಿಕಿತ್ಸೆಯ ಭಾಗವಾಗಿ ಹತ್ತು ಕೀಮೋ ಸೆಷನ್‌ಗಳಿಗೆ ಒಳಗಾಗಿದ್ದಾರೆ. ಅವರು ಬೆನ್ನುಹುರಿಯ ಸಮಸ್ಯೆಯಿಂದ ಬಳಲುತ್ತಿದ್ದು, ಬೆನ್ನು ಬಗ್ಗಿದ್ದು ನಡೆಯಲು ಕಷ್ಟವಾಗುತ್ತಿದೆ.

ಶಿವಾನಿ ಅವರ ಮಗಳು ಈ ಕುರಿತು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶಾರುಖ್‌ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಶಾರುಖ್‌ ಅವರ ಅರುಣಾ ಪಿಕೆ ಎಂಬ ಅಭಿಮಾನಿ 2017 ರಲ್ಲಿ ನಿಧನರಾಗಿದ್ದರು.  ಶಾರುಖ್‌ ಅವರನ್ನು ಭೇಟಿಯಾಗಲು ಬಯಸಿದ್ದ ಅವರಿಗೆ ಶಾರುಖ್‌ ವಿಡಿಯೋ ಮೆಸೇಜ್‌ ಹಾಗೂ ಕಾಲ್‌ ಮಾಡಿದ್ದರು. ಆ ವೇಳೆ ಅರುಣಾ ಆಸ್ಪತ್ರೆಯಲ್ಲಿದ್ದರು.

ಟಾಪ್ ನ್ಯೂಸ್

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.