ಬಾಹುಬಲಿ ಬಂದ ಮೇಲೆ ಎಲ್ಲ ಬದಲಾಯ್ತು…
Team Udayavani, Nov 6, 2022, 1:46 PM IST
ಮುಂಬೈ: “ಈ ಹಿಂದೆ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರ ಭಾರತದ ಮಂದಿ ನಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಉತ್ತರದವರ ಅಭಿಪ್ರಾಯವೂ ಬೇರೆಯೇ ಆಗಿದೆ’ ಇದು ಕನ್ನಡದ ಹೆಸರಾಂತ ನಟ ಯಶ್ ಅವರ ಅಭಿಪ್ರಾಯ.
ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಉತ್ತರ ಭಾರತದವರು ನಮ್ಮ ಚಿತ್ರಗಳ ಆ್ಯಕ್ಷನ್ ಬಗ್ಗೆಯೂ ಆಡಿಕೊಳ್ಳುತ್ತಿದ್ದರು. ಇದಕ್ಕೆಲ್ಲಾ ಕಾರಣ, ಆಗಿನ ಡಬ್ಬಿಂಗ್. ಇಲ್ಲಿನ ಚಿತ್ರಗಳು ಕಡಿಮೆ ಹಣಕ್ಕೆ ಮಾರಾಟವಾಗುತ್ತಿದ್ದವು. ಹೀಗಾಗಿಯೇ ಕೆಟ್ಟ ಡಬ್ಬಿಂಗ್, ಕೆಟ್ಟ ಹೆಸರುಗಳಿಂದಾಗಿ ಇಲ್ಲಿನ ಚಿತ್ರಗಳು ಓಡುತ್ತಲೇ ಇರಲಿಲ್ಲ. ಆದರೆ, ಈ ಧೋರಣೆ ಬದಲಾಗಲು ಬಾಹುಬಲಿ ಕಾರಣ. ಇದರ ಸಂಪೂರ್ಣ ಶ್ರೇಯಸ್ಸು ರಾಜಮೌಳಿ ಸರ್ಗೆ ಸಲ್ಲಬೇಕು. ಇದಾದ ಬಳಿಕ ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಲು ಶುರು ಮಾಡಿದರು ಎಂದರು.
ಇದನ್ನೂ ಓದಿ: ಕಪೂರ್ ಕುಟುಂಬದಲ್ಲಿ ಸಂಭ್ರಮ: ತಂದೆ – ತಾಯಿಯಾದ ರಣ್ಬೀರ್ – ಆಲಿಯಾ
ಸದ್ಯಕ್ಕಿಲ್ಲ ಕೆಜಿಎಫ್ 3: ನನ್ನ ಮುಂದಿನ ಚಿತ್ರದ ಬಗ್ಗೆ ಎಲ್ಲರಿಗೂ ನಿರೀಕ್ಷೆಗಳಿವೆ. ಸದ್ಯದಲ್ಲೇ ಈ ಬಗ್ಗೆ ಘೋಷಿಸಲಿದ್ದೇನೆ. ಅಲ್ಲದೆ, ಕೆಜಿಎಫ್ 1 ಮತ್ತು 2 ಮಾಡಲು 6-7 ವರ್ಷ ತೆಗೆದುಕೊಂಡೆವು. ಕೆಜಿಎಫ್ 3ರ ಬಗ್ಗೆ ಯೋಜನೆಯಿದೆ. ಆದರೆ ಸದ್ಯಕ್ಕೆ ಇಲ್ಲ ಎಂದರು.
ಕಾಂತಾರ ಬಗ್ಗೆ ಮಾತನಾಡಿದ ಅವರು, ಇದೂ ನಮ್ಮ ಸಿನಿಮಾವೇ ಎಂದರು. ಅಂದರೆ, ಇಲ್ಲಿ ಆಗುವ ಎಲ್ಲ ಸಿನಿಮಾಗಳು ನಮ್ಮವೇ ಎಂದು ಪರಿಗಣಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ