ಇಫಿ ಚಿತ್ರೋತ್ಸವ; ಫಿಲ್ಮ್ ಬಜಾರ್: ದಕ್ಷಿಣ ಏಷ್ಯಾದ ಸಿನಿಮಾ ಸಂತೆಗೆ ಚಾಲನೆ


Team Udayavani, Nov 22, 2022, 12:08 PM IST

ಇಫಿ ಚಿತ್ರೋತ್ಸವ; ಫಿಲ್ಮ್ ಬಜಾರ್: ದಕ್ಷಿಣ ಏಷ್ಯಾದ ಸಿನಿಮಾ ಸಂತೆಗೆ ಚಾಲನೆ

ಪಣಜಿ: ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ಸಿನಿಮಾ ಬಜಾರ್ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC)ದ ಫಿಲ್ಮ್ ಬಜಾರ್ ನ 15 ನೇ ಆವೃತ್ತಿ ಗೋವಾದ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸೆರಗಿನಲ್ಲೇ ಹೋಟೆಲ್ ಮೆರಿಯಟ್ ನಲ್ಲಿ ಆರಂಭವಾಗಿದೆ.

2007 ರಲ್ಲಿ ಅರಂಭವಾದ ಫಿಲ್ಮ್ ಬಜಾರ್ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗುತ್ತಿದೆ. ದಕ್ಷಿಣ ಏಷ್ಯಾದ ಬೃಹತ್ ಸಿನಿಮಾ ಬಜಾರ್ ಅಗಿ ಬೆಳೆಯುತ್ತಿದೆ. ಇದರಲ್ಲಿ ಸ್ಕ್ರಿಪ್ಟ್ ಲ್ಯಾಬ್, ವರ್ಕ್ ಇನ್ ಪ್ರೊಗ್ರೆಸ್ ಮತ್ತಿತರ ವಿಭಾಗಗಳಿವೆ. ಈ ಮೂಲಕ ದಕ್ಷಿಣ ಏಷ್ಯಾದ ಉದಯೋನ್ಮುಖ ಸಿನಿಮಾಕರ್ತರಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದೆ.

ಹೊಸ ಚಿತ್ರ ನಿರ್ದೇಶಕರಿಗೆ ಹೂಡಿಕೆದಾರರನ್ನು ಹುಡುಕುವ ಹಾಗೂ ದಕ್ಷಿಣ ಏಷ್ಯಾದ ಸಿನಿಮಾಗಳ ಮಾರಾಟಕ್ಕೆ ವೇದಿಕೆಯನ್ನು ಕಲ್ಪಿಸುತ್ತಿರುವ ಫಿಲ್ಮ್ ಬಜಾರ್, ಲಂಚ್ ಬಾಕ್ಸ್, ಚೌತಿಕೂಟ್, ತಿಥಿ, ತಿತ್ಲಿ, ಕೋರ್ಟ್, ಮಿಸ್ ಲವ್ಲಿ, ಆನ್ಹೆ ಗೋಡೆ ದಾ ದಾನ್ ಮುಂತಾದ ಚಿತ್ರಗಳು ಬೇರೆ ಬೇರೆ ಚಿತ್ರೋತ್ಸವಗಳಲ್ಲಿ ವೇದಿಕೆ ಕಲ್ಪಿಸಿದೆ. ಹಾಗಾಗಿ ಇದೊಂದು ಹೊಸ ಪ್ರತಿಭೆಗಳ ಶೋಧನೆ, ಬೆಂಬಲ, ವಿತರಣೆಯ ಜತೆಗೆ ದಕ್ಷಿಣ ಏಷ್ಯಾದ ಸಿನಿಮಾಗಳ ಪ್ರವರ್ಧನೆಯನ್ನೂ ಫಿಲ್ಮ್ ಬಜಾರ್ ಕೈಗೊಂಡಿದೆ.

ಇದರ 15 ನೇ ಆವೃತ್ತಿಗೆ ಚಾಲನೆ ನೀಡಿದ್ದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್, ದಕ್ಷಿಣ ಏಷ್ಯಾದ ಸಿನಿಮಾಗಳಿಗೆ ಇದೊಂದು ಉತ್ತಮ ವೇದಿಕೆ. ವಿವಿಧ ದೇಶಗಳ ಸಿನಿಮಾಕರ್ತರು ಇಲ್ಲಿಗೆ ಬಂದು ಭಾರತೀಯ ಸಿನಿಮಾ ಕ್ಷೇತ್ರದೊಂದಿಗೆ ಸಹಯೋಗಕ್ಕೆ ಮುಂದಾಗುವಂತೆ ಪ್ರೇರೇಪಿಸುತ್ತಿದೆ ಎಂದರು.

ಭಾರತವು ಜಾಗತಿಕವಾಗಿ ಸಿನಿಮಾ ಉದ್ಯಮಕ್ಕೆ ಅತ್ಯಂತ ಸೂಕ್ತ ತಾಣವನ್ನಾಗಿ ರೂಪಿಸುವುದು ನಮ್ಮ ಗುರಿ. ಈ ಹಿನ್ನೆಲೆಯಲ್ಲಿ ಎಲ್ಲ ಬಗೆಯ ಬೆಂಬಲ ಒದಗಿಸಲಾಗುತ್ತಿದೆ. ಇಫಿ ಹಾಗೂ ಫಿಲ್ಮ್ ಬಜಾರ್ ಅಂಥ ವೇದಿಕೆಗಳು. ಭಾರತವನ್ನು ಮುಂದಿನ ವರ್ಷಗಳಲ್ಲಿ ಚಿತ್ರ ನಿರ್ಮಾಣ ಹಾಗೂ ಮಾರಾಟದ ಸಶಕ್ತ ಕೇಂದ್ರವನ್ನಾಗಿಸಲಾಗುವುದು ಎಂದು ಹೇಳಿದರು.

ಈ ಬಾರಿ ಇಫಿ ಹಾಗೂ ಫಿಲ್ಮ್ ಬಜಾರ್ ಎರಡರಲ್ಲೂ ಸಾಕಷ್ಟು ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದೆ. ಫಿಲ್ಮ್ ಬಜಾರ್ ನಲ್ಲಿ ಕಾನ್ ಚಿತ್ರೋತ್ಸವ ಮಾದರಿಯಲ್ಲಿ ವಿವಿಧ ದೇಶಗಳ ಪೆವಿಲಿಯನ್ ಗಳನ್ನೂ ನಿರ್ಮಿಸಲಾಗಿದೆ. ಅದರೊಂದಿಗೆ ವ್ಯೂವಿಂಗ್ ರೂಮ್ ಇತ್ಯಾದಿ ಅವಕಾಶಗಳಿವೆ. ಫಿಲ್ಮ್ ಬಜಾರ್ ನವೆಂಬರ್ 24 ರವರೆಗೆ ನಡೆಯಲಿದೆ.

ಟಾಪ್ ನ್ಯೂಸ್

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

1-sadsad

53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್‌ ಚಿತ್ರಕ್ಕೆ ಗೋಲ್ಡನ್‌ ಪೀಕಾಕ್‌ ಪ್ರಶಸ್ತಿ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ