ಚಲನಚಿತ್ರಗಳಲ್ಲಿ ಪ್ರಣಯ ಗೀತೆಗಳು ಇಂದಿನ ಮಾರುಕಟ್ಟೆಯ ಅಗತ್ಯಗಳಲ್ಲ!


Team Udayavani, Jan 20, 2021, 10:51 AM IST

john mathew matthan

ಪಣಜಿ: ಇಂದಿನ ಜನಪ್ರಿಯ ಧಾರೆಯ ಚಲನಚಿತ್ರಗಳಲ್ಲಿ ಪ್ರಣಯಗೀತೆಗಳು ಪ್ರಸ್ತುತವೆನಿಸುತ್ತದೆಯೇ? ಅವುಗಳು ಇಲ್ಲದಿದ್ದರೆ ಚಿತ್ರ ಪರಿಪೂರ್ಣವಾಗದೇ? ಹಾಡು ಎನ್ನುವುದು ಕಥೆಯ ಭಾಗವಾಗಿ ಇರಬೇಕೇ? ಬೇಡವೇ?

ಈ ಚರ್ಚೆ, ಜಿಜ್ಞಾಸೆ ಹೊಸದೇನೂ ಅಲ್ಲ. ಈಗ ಮತ್ತೆ ಆರಂಭವಾಗಿದೆಯಂತೆ ಸರ್‌ಫೋಸ್‌ ಚಿತ್ರದ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜಾನ್‌ ಮ್ಯಾಥ್ಯೂ ಮಥಾನ್‌ ಪ್ರಕಾರ. ಅವರು ಈ ಬಾರಿಯ ಇಂಡಿಯನ್‌ ಪನೋರಮಾದ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು.

ಚಿತ್ರೋತ್ಸವದ ಭಾಗವಾಗಿ, ‘ನಿಮಗೆ ಅದು ಸಿಕ್ಕಿತೇ?’ ಎಂಬ ವರ್ಚುಯಲ್‌ ಸರಣಿ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ‘ನನ್ನ ದೃಷ್ಟಿಯಲ್ಲಿ ಪ್ರಣಯ ಗೀತೆಗಳು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಅವುಗಳನ್ನು ಚಿತ್ರದಲ್ಲಿ ತುರುಕುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂದು ಹಾಡುಗಳಿಗೆ ಅರ್ಥವಿತ್ತು, ಸಿನಿಮಾದಲ್ಲಿ ಸ್ಥಾನ ನೀಡಿದ್ದೆವು. ನಾನು ಸಿನಿಮಾ ಮಾಡಿದಾಗ ಸಂಗೀತ ಎನ್ನುವುದು ಇಡೀ ಚಲನಚಿತ್ರದ ಒಂದು ಪ್ರಮುಖವಾದ ಭಾಗವಾಗಿತ್ತು. ಆದಾಯದ ನೆಲೆಯಲ್ಲೂ ಸಹ. ಆದರೆ ಅದಕ್ಕಾಗಿ ಒಂದು ಸಿನಿಮಾದಲ್ಲಿ ಎರಡೆರಡು ಪ್ರಣಯ ಗೀತೆಗಳನ್ನು ತುರುಕುವುದನ್ನು ಒಪ್ಪುತ್ತಿರಲಿಲ್ಲ, ಇಂದಿಗೂ ಒಪ್ಪುವುದಿಲ್ಲ’ ಎಂದರು.

ಇದನ್ನೂ ಓದಿ:ರಿಷಭ್ ಶೆಟ್ರ ಬೆಲ್‌ ಬಾಟಂ-2 ಗೆ ತಾನ್ಯಾ ಹೋಪ್ ನಾಯಕಿ!

ಇಂದು ಪ್ರಣಯ ಗೀತೆಗಳು ಆ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಜತೆಗೆ ಮಾರುಕಟ್ಟೆಯ ಅಗತ್ಯವಾಗಿಯೂ ಉಳಿದಿಲ್ಲ. ಹಾಗಾಗಿ ಚಿತ್ರ ನಿರ್ದೇಶಕರು ಪ್ರಣಯ ಗೀತೆಗಳನ್ನು ಚಿತ್ರಗಳಿಗೆ ಹೊಂದಿಸುವ ಹಠವನ್ನು ಬಿಡಬೇಕು ಎಂದರು.

ನಾನು ನನ್ನ ಸಿನಿಮಾಗಳಿಗಾಗಿ ಇಡೀ ಭಾರತವನ್ನು ಸುತ್ತಿದ್ದೆ. ಬೇರೆ ಬೇರೆ ನೆಲೆಯ ಕಥಾವಸ್ತುಗಳು ಬೇಕಿತ್ತು. ಯಾವುದೇ ಸಿನಿಮಾ ನಿರ್ದೇಶಕ ಸಿನಿಮಾ ಮಾಡುವ ಮೊದಲು ಆಯಾ ದೇಶದ ಸಾಮಾಜಿಕ ಸಂರಚನೆ ಮತ್ತು ರಾಜಕೀಯದ ನೆಲೆಯನ್ನೂ ತಿಳಿದಿರಬೇಕು. ಸಮಾಜದ ಕುರಿತು ಸಂವೇದನಾಶೀಲವಾಗಿರಬೇಕು. ನಿಮ್ಮ ಅಭಿಪ್ರಾಯವನ್ನು ಮತ್ತೊಬ್ಬರಿಗೆ ನೋವಾಗದಂತೆ, ಬೇಸರವಾಗದಂತೆ ಹೇಳುವುದನ್ನು ಕಲಿತಿರಬೇಕು ಎಂಬುದು ಜಾನ್‌ ಅಭಿಪ್ರಾಯ.

ಇದನ್ನೂ ಓದಿ: ಇಫಿ 2021: ಹೊಸ ಜಗತ್ತಿಗೆ ಮುಖ ಮಾಡಿದೆ; ನಟಿ ಗುಂಜಾಲಮ್ಮ ಮುಕ್ತ ಮಾತು

ಸರ್‌ಪೋಸ್‌ -2 ಕ್ಕೆ ನಾನು 5-6 ಬಾರಿ ಚಿತ್ರಕಥೆ ಬರೆದೆ. ನನ್ನ ಗೆಳೆಯರಲ್ಲಿ ತೋರಿಸಿದೆ. ಅವರ ಅಭಿಪ್ರಾಯ, ಟೀಕೆಗಳನ್ನು ಎದುರಿಸಿ ಮತ್ತೆ ತಿದ್ದಿ ಬರೆದೆ. ಕೊನೆಯದಾಗಿ ಐದನೇ ಬಾರಿ ತಿದ್ದಿದ ಚಿತ್ರಕಥೆಯನ್ನು ಸಿನಿಮಾ ಮಾಡಿದೆ. ಒಂದು ಒಳ್ಳೆಯ ಸಿನಿಮಾ ಮಾಡಲು ಒಂದಿಷ್ಟು ಮಂದಿ ಒಳ್ಳೆಯ ಗೆಳೆಯರನ್ನೂ ಹೊಂದಿರಬೇಕು’ ಎಂದು ಹೇಳಿದವರು ಜಾನ್‌ ಮ್ಯಾಥ್ಯೂ.

ಈ ಬಾರಿಯ ಇಂಡಿಯನ್‌ ಪನೋರಮಾ ಆಯ್ಕೆ ಕುರಿತು ವಿವರಿಸಿ, 180 ಚಲನಚಿತ್ರಗಳನ್ನು ನೋಡಿದೆ. ಭಾರತೀಯ ಭಾಷೆಗಳಲ್ಲಿ ಇರುವ ವೈವಿಧ್ಯತೆಯ ಅಗಾಧತೆ ಅರಿವಾಯಿತು’ ಎಂದರು.

ಟಾಪ್ ನ್ಯೂಸ್

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.