ಸಿನೆಮಾದ ನಟಿ ಈ 8ರ ಪೋರಿ
ಬಹುಮುಖ ಪ್ರತಿಭೆ ಶ್ಲಾಘಾ ಸಾಲಿಗ್ರಾಮ
Team Udayavani, Mar 19, 2020, 5:37 AM IST
ಸಣ್ಣ ವಯಸ್ಸಿನಲ್ಲಿ ನಟನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಪುಟ್ಟ ಪೋರಿ ಗಿರ್ಮಿಟ್ ಸಿನೆಮಾದ ನಾಯಕಿ ಶ್ಲಾಘಾ ಸಾಲಿಗ್ರಾಮ. ಕನ್ನಡದ “ಕಟಕ’ ಸಿನೆಮಾದ ಮೂಲಕ ರಾಜ್ಯಾದ್ಯಂತ ಪರಿಚಿತಳಾಗಿ ಇತ್ತೀಚೆಗೆ ತೆರೆಕಂಡ “ಗಿರ್ಮಿಟ್’ ಸಿನೆಮಾದ ಮೂಲಕ ಮತ್ತಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾಳೆ.
ಕುಂದಾಪುರದ ಕೆ. ರಾಘವೇಂದ್ರ ಆಚಾರ್ ಮತ್ತು ಮಾಲಾ ದಂಪತಿ ಪುತ್ರಿ ಶ್ಲಾಘಾ. ಮೂರನೇ ವಯಸ್ಸಿನಲ್ಲಿ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನ ದಲ್ಲಿ ನೃತ್ಯ ಪ್ರದರ್ಶನ ನೀಡಿ ಬಳಿಕ ವಿವಿಧ ಸಂಘ – ಸಂಸ್ಥೆ , ಶಾಲಾ – ಕಾಲೇಜಿನಲ್ಲಿ 200ಕ್ಕೂ ಹೆಚ್ಚಿನ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ಪ್ರಸ್ತುತ ತೆಕ್ಕಟ್ಟೆ ವಿಶ್ವ ವಿನಾಯಕ ಸಿಬಿಎಸ್ಇ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ.
ಸಿನೆಮಾ- ಕಿರುಚಿತ್ರ
2016ರಲ್ಲಿ ರವಿ ಬಸ್ರೂರು ಅವರ ಕಟಕ ಸಿನೆಮಾಕ್ಕಾಗಿ ನಡೆದ ಆಡಿಷನ್ನಲ್ಲಿ ಶ್ಲಾಘಾ ಆಯ್ಕೆಯಾದಳು. ಇದೆ ಸಂದರ್ಭ ಸಚಿನ್ ಬಸ್ರೂರು ಅವರ “ಅಮ್ಮ’ ಆಲ್ಬಮ್ ಸಾಂಗ್ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಇತ್ತೀಚೆಗೆ ಗಿರ್ಮಿಟ್ ಸಿನೆಮಾದಲ್ಲಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ. ಶೇಷಾದ್ರಿ ಅವರ ಮೂಕಜ್ಜಿಯ ಕನಸುಗಳು ಸಿನೆಮಾ ದಲ್ಲೂ ನಟಿಸಿದ್ದಾಳೆ. ಜತೆಗೆ ಕೆಲವು ಕಿರುಚಿತ್ರದಲ್ಲೂ ಅಭಿನಯಿಸಿದ್ದಾಳೆ. ಮುಂದೆ ಕಟಕ-2 ಸಿನೆಮಾದಲ್ಲಿ ಅಭಿನಯಿಸಲಿದ್ದು, ಧಾರಾ ವಾಹಿಗಳಲ್ಲೂ ಅವಕಾಶ ಸಿಗುತ್ತಿವೆ.
ಪ್ರಶಸ್ತಿ, ಸಮ್ಮಾನ
“ಕಟಕ’ ಚಿತ್ರಕ್ಕೆ ಅತ್ಯುತ್ತಮ ಬಾಲನಟಿ ಅಂತಾರಾಷ್ಟ್ರೀಯ ಸೈಮಾ ಪ್ರಶಸ್ತಿ. ಮೂಡುಬಿದಿರೆಯಲ್ಲಿ ನಡೆದ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ. 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ -ಸಂಸ್ಥೆ ಶಾಲಾ ಕಾಲೇಜು ಮೂಲಕ ಸಮ್ಮಾನ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದಾಳೆ.
ಖುಷಿ ಅನಿಸಿದೆ
ಸಿನೆಮಾದ ನಟನೆಗೆ ತಂದೆ ತಾಯಿ ಮಾರ್ಗದರ್ಶನ ನೀಡುತ್ತಿದ್ದು ಆರಂಭದಲ್ಲಿ ಕಷ್ಟ ಅನಿಸುತ್ತಿತ್ತು. ಸ್ನೇಹಿತರು ಶಿಕ್ಷಕರು ಸಿನೆಮಾದ ಬಗ್ಗೆ ವಿಚಾರಿಸುತ್ತಿದ್ದು ಜನರು ಗುರುತಿಸಿ ಮಾತನಾಡಿಸುವಾಗ ಖುಷಿ ಅನಿಸುತ್ತದೆ. ಯಶ್, ಪುನೀತ್ ಹಾಗೂ ರಾಧಿಕಾ ಪಂಡಿತ್ ಅವರು ಇಷ್ಟದ ನಟ ನಟಿಯರು.
– ಶ್ಲಾಘಾ ಸಾಲಿಗ್ರಾಮ
ಬಾಲ ನಟಿ
- ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್ಲೈನ್ ಆಮಿಷಕ್ಕೆ ಮಾರುಹೋಗದಿರಿ
ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ