“ಬಿಚ್ಚುಗತ್ತಿ’ಯಲ್ಲಿ ಅನನ್ಯ ಅನುಭವ

ಭರಮಣ್ಣ ಪಾತ್ರಧಾರಿ ರಾಜವರ್ಧನ್‌ ಬಿಚ್ಚು ಮಾತು

Team Udayavani, Feb 27, 2020, 7:05 AM IST

Bicchugatti

ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳು ಈಗ ಮೆಲ್ಲನೆ ಸದ್ದು ಮಾಡುತ್ತಿವೆ. ಆ ಸಾಲಿಗೆ ಈಗ ಹಿರಿಯ ಸಾಹಿತಿ ಬಿ.ಎಲ್‌.ವೇಣು ಅವರ ಕಾದಂಬರಿ ಆಧಾರಿತ “ಬಿಚ್ಚುಗತ್ತಿ’ ಸಿನಿಮಾ ಕೂಡ ಸೇರಿದೆ. ಫೆ.28 (ನಾಳೆ) ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಾಜವರ್ಧನ್‌ ಭರಮಣ್ಣ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಐತಿಹಾಸಿಕ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ರಾಜವರ್ಧನ್‌, “ಬಿಚ್ಚುಗತ್ತಿ’ ಅನುಭವ ಬಿಚ್ಚಿಟ್ಟಿದ್ದಾರೆ.

* ಮೊದಲ ಐತಿಹಾಸಿಕ ಚಿತ್ರದ ಅನುಭವ ಹೇಗಿತ್ತು ?
ಇದು ನಿಜಕ್ಕೂ ನನ್ನ ಲೈಫ್ ಟೈಮ್‌ ಅನುಭವದ ಚಿತ್ರ. ಹೊಸಬರಿಗೆ ಸಿಗುವಂತಹ ಚಿತ್ರವಲ್ಲ. ಸ್ಟಾರ್‌ಗಳು ನಟಿಸುವಂತಹ ಸಬ್ಜೆಕ್ಟ್ ಇದು. ನನ್ನಂತಹ ಹೊಸಬನ ಮೇಲೆ ನಂಬಿಕೆ ಇಟ್ಟು, ಕೋಟಿಗಟ್ಟಲೆ ಹಣ ಹಾಕಿ ಈ ಸಿನಿಮಾ ಮಾಡಿದ ನಿರ್ಮಾಪಕರಿಗೆ, ನಿರ್ದೇಶಕರಿಗೆ ನಾನು ಚಿರಋಣಿ. ಅವರ ನಂಬಿಕೆ ಉಳಿಸಿಕೊಂಡಿರುವ ವಿಶ್ವಾಸವಿದೆ. ನನ್ನ ಭವಿಷ್ಯದ ಸಿನಿಮಾ ಅಂದರೂ ತಪ್ಪಿಲ್ಲ.

* ಪಾತ್ರದ ತಯಾರಿ ಹೇಗಿತ್ತು?
ಈ ಚಿತ್ರಕ್ಕಾಗಿ ನಾನು ಎರಡು ವರ್ಷ ಶ್ರಮಪಟ್ಟಿದ್ದೇನೆ. ಭರಮಣ್ಣ ನಾಯಕ ಅಂದಾಗ, ಗತ್ತು, ಗಮ್ಮತ್ತು ಇರಲೇಬೇಕು. ಅವನು ಹುಲಿ ಜೊತೆ ಕಾದಾಟ ನಡೆಸಬೇಕು. ಸೈನಿಕರ ಜೊತೆಗೂಡಿ ಶತ್ರುಗಳ ವಿರುದ್ಧ ಹೋರಾಡಬೇಕು. ಅದಕ್ಕಾಗಿ ಕಲರಿ ಪಯತು, ಕುದುರೆ ಸವಾರಿ ಸೇರಿದಂತೆ ದೇಸಿ ಕಲೆಗಳನ್ನು ಕಲಿತೆ. 80 ಕೆಜಿ ತೂಕವಿದ್ದವನು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕೆಂಬ ಕಾರಣಕ್ಕೆ 105 ಕೆಜಿ ತೂಕ ಹೆಚ್ಚಿಸಿಕೊಂಡೆ. ಈಗ ಟ್ರೇಲರ್‌ ನೋಡಿದಾಗ, ಎಲ್ಲೋ ಒಂದು ಕಡೆ ಶ್ರಮ ಸಾರ್ಥಕ ಎನಿಸುತ್ತಿದೆ.

* ನಿಮಗಿಲ್ಲಿ ಕಷ್ಟ ಎನಿಸಿದ್ದು ಏನು?
ಮೊದಲು ಕಥೆ ಕೇಳಿದಾಗಲೇ, ಕಷ್ಟ ಎನಿಸಿದ್ದು ನಿಜ. ಯಾಕೆಂದರೆ, ಆ ಪಾತ್ರ ನಾನು ಮಾಡ್ತೀನಾ, ಅದು ಸಾಧ್ಯನಾ ಎಂಬ ಪ್ರಶ್ನೆ ಬಂತು. ಯಾಕೆಂದರೆ, ಐತಿಹಾಸಿಕ ಸಿನಿಮಾ ಆಗಿರುವುದರಿಂದ ಬಾಡಿಲಾಂಗ್ವೇಜ್‌, ಕಾಸ್ಟೂಮ್‌, ಡೈಲಾಗ್‌, ಭಾಷೆಯ ಸ್ಪಷ್ಟತೆ ಎಲ್ಲವೂ ವಿಶೇಷವಾಗಿರಬೇಕಿತ್ತು. ಅದನ್ನು ಕಲಿತೆ. ಹುಲಿ ಫೈಟ್‌ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಯ್ತು. ಯುದ್ಧ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಪೆಟ್ಟು ತಿಂದೆ. ಕಷ್ಟ ಆದರೂ, ಈಗ ಖುಷಿಯಾಗುತ್ತಿದೆ. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದಕ್ಕಿಂತ ಖುಷಿಯ ವಿಷಯ ಮತ್ತೂಂದಿಲ್ಲ.

* ಹಾಗಾದರೆ, ಭವಿಷ್ಯ ಬರೆಯೋ ಸಿನಿಮಾ ಅನ್ನಿ?
ಅದೇನೋ ಗೊತ್ತಿಲ್ಲ. ಸಾಕಷ್ಟು ಶ್ರಮವನ್ನಂತೂ ಹಾಕಿದ್ದೇನೆ. ನಮ್ಮ ಮಣ್ಣಿನ ಕಥೆ ಆಗಿದ್ದರಿಂದ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಜನರು ಕೈ ಹಿಡಿಯುತ್ತಾರೆ ಎಂಬ ನಂಬಿಕೆಯೂ ಇದೆ. ಐತಿಹಾಸಿಕ ಸಿನಿಮಾ ಮಾಡಲು ಧೈರ್ಯ ಬೇಕು. ನಿರ್ಮಾಪಕರು ಆ ಧೈರ್ಯ ಮಾಡಿದ್ದಾರೆ. ಇಂತಹ ಚಿತ್ರಗಳು ಗೆದ್ದರೆ ಮಾತ್ರ ಐತಿಹಾಸಿಕ ಸಿನಿಮಾಗಳು ಬರಲು ಸಾಧ್ಯ. ಇಲ್ಲಿ ನನ್ನೊಬ್ಬನ ಭವಿಷ್ಯವಿಲ್ಲ. ಕೆಲಸ ಮಾಡಿದ ಪ್ರತಿಯೊಬ್ಬರ ಭವಿಷ್ಯವೂ ಇಲ್ಲಿದೆ.

* ಈ ಚಿತ್ರದಲ್ಲಿ ಕಲಿಕೆಗೂ ಅವಕಾಶ ಸಿಕ್ಕಿದೆಯಾ?
ಹೌದು, ಇದೊಂದು ದೊಡ್ಡ ಟಾಸ್ಕ್ ಇದ್ದಂತೆ. ನಾನು ನಟನೆ ಮಾತ್ರವಲ್ಲ, ಟೆಕ್ನೀಷಿಯನ್‌ ಆಗಿಯೂ ಕೆಲಸ ಮಾಡಿದ್ದೇನೆ. ಕಾಸ್ಟೂಮ್‌ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಸೆಟ್‌ನಲ್ಲಿ ಕ್ಯಾಮೆರಾ ಸೇರಿದಂತೆ ಪ್ರತಿಯೊಂದು ವಿಭಾಗದಲ್ಲೂ ಕೆಲಸ ಕಲಿತಿದ್ದೇನೆ. ಹಿರಿಯ ಕಲಾವಿದರಿಂದಲೂ ನಾನು ಕಲಿತಿದ್ದೇನೆ. ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇದೆ. ಕನ್ನಡಿಗರು ಒಳ್ಳೆಯ ಸಿನಿಮಾ ಕೈ ಬಿಟ್ಟಿಲ್ಲ. ಬಿಡಲ್ಲ ಎಂಬ ಬಲವಾದ ನಂಬಿಕೆಯಂತೂ ಇದೆ.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.