‘ಮೇಜರ್’ ವೀರಯೋಧ ಸಂದೀಪ್ ಉನ್ನಿಕೃಷ್ಣನ್ ಕುರಿತ ಚಿತ್ರ ; ಇಫಿ ಸೈನಿಕರಿಗೆ ಸಲಾಂ
ಸಿನಿಮಾ ನವೆಂಬರ್ 26 ರ ಘಟನೆ ಮೇಲಲ್ಲ. ಬದಲಾಗಿ....
Team Udayavani, Nov 27, 2022, 11:09 PM IST
ಪಣಜಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ಎಂದಿಗೂ ನವೆಂಬರ್ 26 ರ ದಿನವನ್ನು ಮರೆಯುವುದಿಲ್ಲ. ಹಾಗೆಯೇ ಅಂದಿನ ಘಟನೆಯಲ್ಲಿ ವೀರಾಗ್ರಣಿಗಳಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಲಸ್ಕಾರ್ ಅವರನ್ನೂ ಈ ದೇಶ ಮರೆಯುವುದಿಲ್ಲ.ನವೆಂಬರ್ 26, 2008 ರಂದು ಮುಂಬಯಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ದಿನ. ಅಂದಿನ ಹೋರಾಟದಲ್ಲಿ ವೀರಸ್ವರ್ಗ ಸೇರಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಕುರಿತ “ಮೇಜರ್’ ಚಲನಚಿತ್ರ ರವಿವಾರ ಇಫಿ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
ಈ ಚಿತ್ರವನ್ನು ಶಶಿ ಕಿರಣ್ ಟಿಕ್ಕ ನಿರ್ದೇಶಿಸಿದ್ದಾರೆ. ಅದಿವಿ ಶೇಷ್, ಸಾಯಿ ಎಂ. ಮಂಜ್ರೇಕರ್, ಶೋಭಿತಾ ಧೂಲಿಪಾಲ, ಪ್ರಕಾಶ್ರಾಜ್, ಮುರಳಿ ಶರ್ಮ ಮತ್ತಿತರರು ಅಭಿನಯಿಸಿದ್ದಾರೆ. ಈ ಘಟನೆ ನಡೆದು ನಿನ್ನೆಗೆ (ನ.26) ಹದಿನಾಲ್ಕು ವರ್ಷ. ಮೇಜರ್ ಚಲನಚಿತ್ರ ಪ್ರದರ್ಶನದ ಮೂಲಕ ಮೂವರೂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿತು ಇಫಿ.
ಸಿನಿಮಾ ಪ್ರದರ್ಶನದ ಬಳಿಕ ನಿರ್ದೇಶಕ ಶಶಿ ಕಿರಣ್ ಮಾತನಾಡಿ, ಮೇಜರ್ ಸಿನಿಮಾಕ್ಕೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಮೇಜರ್ ಸಂದೀಪರ ಪೋಷಕರ ಸಹಕಾರ, ಸೇನೆಯಲ್ಲಿನ ಸ್ನೇಹಿತರ ಸಹಯೋಗ ಅನನ್ಯ. ಮೇಜರ್ ರಲ್ಲಿರುವ ವ್ಯಕ್ತಿಯನ್ನು ಹುಡುಕುವ ಪ್ರಯತ್ನ ನನ್ನದು. ನನ್ನ ಅಧ್ಯಯನವೂ ಅದೇ ಹಾದಿಯಲ್ಲಿತ್ತು’ ಎಂದರು.
‘ನನಗೂ ಮತ್ತು ಚಿತ್ರತಂಡಕ್ಕೆ ಅಗ್ನಿ ಪರೀಕ್ಷೆ ಇದ್ದದ್ದು ಸಿನಿಮಾ ನಿರ್ಮಾಣದಲ್ಲಲ್ಲ. ನಿರ್ಮಿತ ಚಿತ್ರವನ್ನು ಮೇಜರ್ ಸಂದೀಪರ ಕುಟುಂಬ, ಸ್ನೇಹಿತರಿಗೆ ತೋರಿಸುವುದರಲ್ಲಿ. ಅದರಲ್ಲೂ ಸಂದೀಪರ ಪೋಷಕರಿಗೆ ತೋರಿಸುವಾಗ ಏನು ಹೇಳುತ್ತಾರೆಂಬ ಭಯವಿತ್ತು. ಅವರೇ ಈ ಸಿನಿಮಾದ ಮೊದಲ ಪ್ರೇಕ್ಷಕರು. ಅತ್ಯಂತ ಭಾವುಕ ಗಳಿಗೆಯದು. ಸಿನಿಮಾದ ಬಗ್ಗೆ ಮನದುಂಬಿ ಮಾತನಾಡಿದರು ಎಂದು ವಿವರಿಸಿದರು.
ಚಿತ್ರಕ್ಕೆ ಚಿತ್ರಕಥೆಯನ್ನೂ ಒದಗಿಸಿ ಮೇಜರ್ ಸಂದೀಪ್ ಪಾತ್ರವನ್ನು ನಿರ್ವಹಿಸಿದ ಅದಿವಿ ಶೇಷ್, “ನನ್ನ ಮುಖ ಹಾಗೂ ದೇಹ ಸಂದೀಪರಿಗೆ ಹೋಲಿಕೆಯಾಗುತ್ತಿತ್ತು. ಸಂದೀಪರ ಪೋಷಕರೂ ಸಿನಿಮಾ ನಿರ್ಮಾಣಕ್ಕೆ ಒಪ್ಪಿದಾಗ ಮನಸ್ಸು ತುಂಬಿ ಬಂದಿತು. ಮಹಾನುಭಾವರಿಗೆ ಇದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಇರದು ಎಂದರು.
‘ಸಿನಿಮಾ ನವೆಂಬರ್ 26 ರ ಘಟನೆ ಮೇಲಲ್ಲ. ಬದಲಾಗಿ ಮೇಜರ್ ಸಂದೀಪರ ಕುರಿತಾದದ್ದು. ಅವರ ಬದುಕೇ ಕಥಾವಸ್ತು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಶಿ ಕಿರಣ್, ಮುಂಬಯಿ ಘಟನೆ ಹಿನ್ನೆಲೆಯಲ್ಲಿ ಸಿನಿಮಾವೊಂದು ಎನ್ಎಸ್ ಐ ಕಮಾಂಡೋಗಳು ಘಟನೆಯ ಕೊನೆಗೆ ಬಂದವರಂತೆ ಬಿಂಬಿಸಿತ್ತು. ಇದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್
ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ
“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್
53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ; ಸ್ಪ್ಯಾನಿಷ್ ಚಿತ್ರಕ್ಕೆ ಗೋಲ್ಡನ್ ಪೀಕಾಕ್ ಪ್ರಶಸ್ತಿ
ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ
MUST WATCH
ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ
ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್ ಜೋಷಿ ಸಂವಾ
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಹೊಸ ಸೇರ್ಪಡೆ
ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್!
ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ