ಚಿತ್ರ ವಿಮರ್ಶೆ: ಪಾತಕಲೋಕದ ನೆತ್ತರ ಚಿತ್ರಣ ‘ಹೆಡ್ ಬುಷ್’


Team Udayavani, Oct 22, 2022, 9:41 AM IST

ಚಿತ್ರ ವಿಮರ್ಶೆ: ಪಾತಕಲೋಕದ ನೆತ್ತರ ಚಿತ್ರಣ ‘ಹೆಡ್ ಬುಷ್’h

1970-80ರ ದಶಕದಲ್ಲಿ ಪರಾಕಷ್ಟೆ ತಲುಪಿದ್ದ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ ಇಂದಿಗೂ ನೂರಾರು ಕುತೂಹಲ ಸಂಗತಿಗಳು, ಅಂತೆ-ಕಂತೆಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಬೆಂಗಳೂರು ಪಾತಕ ಲೋಕದ ನೆತ್ತರ ಕಥೆಗಳು ಈಗಾಗಲೇ ಪುಸ್ತಕ, ಅಂಕಣ, ಸಿನಿಮಾ ಹೀಗೆ ಹತ್ತಾರು ರೂಪದಲ್ಲಿ ಬಂದು ಹೋಗಿವೆ. ಆದರೆ ಪಾತಕ ಲೋಕದ ಇತಿಹಾಸದ ಪುಟಗಳು ತಿರುವಿ ಹಾಕುವ, ಅದರೊಳಗೆ ಇಣುಕಿ ನೋಡುವ ಪ್ರಯತ್ನ ಮಾತ್ರ ಇನ್ನೂ ನಿಂತಿಲ್ಲ. ಈ ವಾರ ತೆರೆಗೆ ಬಂದಿರುವ “ಹೆಡ್‌ ಬುಷ್‌’ ಕೂಡ ಬೆಂಗಳೂರಿನ ಪಾತಕ ಲೋಕವನ್ನು ಮತ್ತೂಂದು ಆಯಾಮದಲ್ಲಿ ಪರಿಚಯಿಸುವ ಸಿನಿಮಾ.

ಲೇಖಕ ಅಗ್ನಿ ಶ್ರೀಧರ್‌ ಅವರ “ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ತೆರೆಗೆ ಬಂದಿರುವ “ಹೆಡ್‌ ಬುಷ್‌’ ಸಿನಿಮಾದಲ್ಲಿ ಬೆಂಗಳೂರಿನ ಭೂಗತ ಜಗತ್ತಿನ ಆರಂಭದ ದಿನಗಳನ್ನು ತೆರೆಮೇಲೆ ತೆರೆದಿಡಲಾಗಿದೆ. ಜಯರಾಜ್‌ ಎಂಬ ಮಧ್ಯಮ ಕುಟುಂಬದ ಸಾಮಾನ್ಯ ಹುಡಗನೊಬ್ಬ ತನ್ನ ಹುಂಬುತನದಿಂದ ಹೇಗೆ ಡಾನ್‌ ಜಯರಾಜ್‌ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾನೆ. ಬೆಂಗಳೂರು ಭೂಗತ ಜಗತ್ತು ಹೇಗೆ ಬೆಳೆದು ನಿಲ್ಲುತ್ತದೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ.

ಪೊಲೀಸ್‌ ದಾಖಲೆಗಳು, ಮಾಧ್ಯಮಗಳ ವರದಿಗಳು, ಜನಸಾಮಾನ್ಯರ ಬಾಯಲ್ಲಿ ಹರಿದಾಡುತ್ತಿರುವ ಒಂದಷ್ಟು ಊಹಾಪೋಹ ಕಥೆಗಳ ಹೊರತಾಗಿ, ಅಗ್ನಿ ಶ್ರೀಧರ್‌ ತಮ್ಮ ದೃಷ್ಟಿಕೋನದಲ್ಲಿ ಕಂಡ ಭೂಗತ ಜಗತ್ತಿನ ಒಂದಷ್ಟು ಘಟನೆಗಳನ್ನು ಬೇರೆಯದ್ದೇ ರೀತಿಯಲ್ಲಿ ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರು ಭೂಗತ ಪಾತಕಿಗಳ ಹಿನ್ನೆಲೆ, ಅವರ ಬೆಳವಣಿಗೆ, ಪೊಲೀಸ್‌ ವ್ಯವಸ್ಥೆ, ರಾಜಕೀಯ ವೈಷಮ್ಯ, ಸಾಮಾಜಿಕ ಸ್ಥಿತಿ-ಗತಿ, ಹೀಗೆ ಮೇಲ್ನೋಟಕ್ಕೆ ಕಾಣದ ಒಂದಷ್ಟು ಒಳ ಚಿತ್ರಣವನ್ನು “ಹೆಡ್‌ ಬುಷ್‌’ ಸಿನಿಮಾದಲ್ಲಿ ರಸವತ್ತಾಗಿ ಹಿಡಿದಿಡಲಾಗಿದೆ. ಹಾಗಂತ ಕೆಲವೊಂದು ವಿಷಯಗಳು ತಾರ್ಕಿಕವಾಗಿ ಒಪ್ಪಲು ಸಾಧ್ಯವಾಗದಿರುವುದರಿಂದ, ವಾಸ್ತವ ನೆಲೆಗಟ್ಟಿಗಿಂತ ಕಾಲ್ಪನಿಕ ನೆಲೆಗಟ್ಟಿನಲ್ಲೆ “ಹೆಡ್‌ ಬುಷ್‌’ ನೋಡಿ ಖುಷಿಪಡುವುದು ಒಳ್ಳೆಯದು. ಮೊದಲಾರ್ಧ ರಕ್ತಪಾತದಲ್ಲಿ ಸಾಗುವ ಕಥೆಗೆ ಮಧ್ಯಂತರದ ನಂತರ ರಾಜಕೀಯ ನಂಟು ಬೆಸೆದುಕೊಳ್ಳುತ್ತದೆ.

ಇನ್ನು ನಟ ಡಾಲಿ ಧನಂಜಯ್‌ ಡಾನ್‌ ಜಯರಾಜ್‌ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ನೆಗೆಟಿವ್‌ ಶೇಡ್‌ನ‌ಲ್ಲಿರುವ ಪಾತ್ರದಲ್ಲಿ ಡಾಲಿ ಫ‌ುಲ್‌ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದಂತೆ ಗಂಗು ಪಾತ್ರದಲ್ಲಿ ಲೂಸ್‌ಮಾದ ಯೋಗಿ, ಸ್ಯಾಮ್ಸನ್‌ ಪಾತ್ರದಲ್ಲಿ ಬಾಲು ನಾಗೇಂದ್ರ, ಕೊತ್ವಾಲ್‌ ಪಾತ್ರದಲ್ಲಿ ವಸಿಷ್ಟ ಸಿಂಹ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ. ಇನ್ನುಳಿದ ಪಾತ್ರಗಳ ಬಗ್ಗೆ ಅಷ್ಟೇನೂ ಹೇಳುವಂತಿಲ್ಲ

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.