IFFI Goa: ಸಿನಿಮಾಗಳನ್ನು ಪ್ರೀತಿಸುವ ಗುಣ ಭಾರತೀಯ ಸಂಸ್ಕೃತಿಯಲ್ಲಿದೆ: ಪಾವೊ


Team Udayavani, Nov 26, 2023, 12:39 PM IST

IFFI Goa: ಸಿನಿಮಾಗಳನ್ನು ಪ್ರೀತಿಸುವ ಗುಣ ಭಾರತೀಯ ಸಂಸ್ಕೃತಿಯಲ್ಲಿದೆ: ಪಾವೊ

ಪಣಜಿ: ಸಿನಿಮಾಗಳನ್ನು ಪ್ರೀತಿಸುವ ಸದ್ಗುಣ ಭಾರತೀಯ ಸಂಸ್ಕೃತಿಯಲ್ಲೇ ಅಖಂಡವಾಗಿ ಅಡಕವಾಗಿದೆ ಎಂದು ಮುಕ್ತವಾಗಿ ಹೇಳಿದವರು ಕ್ರೋಷಿಯಾ ಸಿನಿಮಾ ನಿರ್ದೇಶಕ ಪಾವೊ ಮರಿನ್ಕೊವಿಕ್.

ಇಫಿ ಚಿತ್ರೋತ್ಸವದಲ್ಲಿ ಅವರ “ಬೋಸ್ನಿಯಾನ್ ಪಾಟ್ʼ ಚಿತ್ರ ಪ್ರದರ್ಶನಗೊಂಡಿದೆ. ಈ ಸಿನಿಮಾ ಕ್ರೋಷಿಯಾ ಮತ್ತು ಜರ್ಮನ್ ಭಾಷೆಯಲ್ಲಿ ರೂಪುಗೊಂಡಿದೆ.
“ನನ್ನ ಸಿನಿಮಾಕ್ಕೆ ಒಳ್ಳೆಯ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ. ಅದರ ಬಿಡುಗಡೆ ಕುರಿತೂ ಯೋಚಿಸುತ್ತಿರುವೆ. ಒಂದು ಒಳ್ಳೆಯ ಸಿನಿಮಾವನ್ನು ಸ್ವೀಕರಿಸುವಂಥ ಪ್ರೀತಿ ಭಾರತೀಯರಲ್ಲಿದೆ. ಕೇರಳದ ಸಿನಿಮೋತ್ಸವಗಳಲ್ಲಿ ಭಾಗವಹಿಸಿರುವೆʼ ಎಂದರು.

ಈ ಸಿನಿಮಾ ವಲಸೆ, ಐಡೆಂಟಿಟಿ ಹಾಗೂ ಜನರ ಬದುಕನ್ನು ಬದಲಿಸಬಲ್ಲಷ್ಟು ಪ್ರಭಾವಶಾಲಿಯಾಗಿರುವ ಕಲೆಯ ಕುರಿತು ಪ್ರಸ್ತಾಪಿಸುತ್ತಿದೆ. ಸ್ವತಃ ಲೇಖಕನಾದ ಕಥಾನಾಯಕ (ಫಾರೂಕ್ ಸೇಗೊ) ಆಸ್ಟ್ರಿಯಾ ದೇಶದಲ್ಲಿ ನಿರಾಶ್ರಿತನಾಗಿದ್ದಾನೆ. ಅವನ ವಲಸೆ ಕುರಿತ ಪರವಾನಗಿ ನವೀಕರಣಗೊಳ್ಳಬೇಕಿದೆ. ಅದಕ್ಕಾಗಿ ಅವನು ಪಡುವ ಕಷ್ಟ. ಕೊನೆಗೂ ಅವಕಾಶ ಸಿಗದೇ ತನ್ನೂರಿಗೆ ವಾಪಸಾಗುವ ನಾಯಕನ ಕಥೆ.

ʼನನ್ನ ಸಿನಿಮಾ ಹಲವು ಸೋಲುಗಳ ಕುರಿತಾದದ್ದುʼ ಎಂದು ಸಿನಿಮಾ ಪ್ರದರ್ಶನ ಮುನ್ನ ಹೇಳಿದ ಪಾವೊ, ʼಕಥಾನಾಯಕ ಒಂದು ಹಂತದಲ್ಲಿ ಗೆಲ್ಲಬಹುದು. ಆದರೆ ನಿಜವಾಗಿಯೂ ಇದು ಹಲವು ಸೋಲುಗಳ ಕಥೆ, ಸೋತವರ ಕಥೆ. ಬದುಕಿನಲ್ಲಿ ಗೆಲ್ಲಲಾಗದೆಂಬ ವಾದವನ್ನು ನಾನು ಒಪ್ಪುವುದಿಲ್ಲ. ಆಶಾವಾದ ಎಂದಿಗೂ ನನ್ನ ಸಿನಿಮಾದಲ್ಲಿದೆʼ ಎಂದವರು ಪಾವೊ.

ಆಸ್ಟ್ರಿಯಾದಲ್ಲಿ ವಲಸೆ ಕುರಿತು ನಿಯಮಗಳು ಹಿಂದಿನಂತಿಲ್ಲ. ಬಹಳಷ್ಟು ಕಠಿನಗೊಂಡಿವೆ. ಅದರ ಪರಿಣಾಮವನ್ನು ಕಥಾನಾಯಕನೂ ಎದುರಿಸುತ್ತಾನೆ. ಒಬ್ಬ ಲೇಖಕನಾಗಿದ್ದರೂ ಆಸ್ಟ್ರಿಯಾ ಸಾಂಸ್ಕೃತಿಕ ಜಗತ್ತಿಗೆ ಅವನ ಕೊಡುಗೆ ಇರಬೇಕು. ಆಗ ಮಾತ್ರ ಅಲ್ಲಿರಲು ಪರವಾನಗಿ ಸಿಗುತ್ತದೆ. ನನ್ನ ಕಥಾನಾಯಕನದ್ದೂ ಅದೇ ಕಥೆ ಎಂದು ವಿವರಿಸಿದವರು ಪಾವೊ.

ಕಥಾ ನಾಯಕ ತನ್ನ ಸವಾಲುಗಳನ್ನು ಎದುರಿಸುತ್ತಲೇ ತನ್ನೊಳಗಿನ ಅವಲೋಕನದಲ್ಲೂ ತೊಡಗುತ್ತಾನೆ.

ಸಿನಿಮಾ ನಿರ್ಮಾಣದ ಬಗ್ಗೆ ಹೇಳುತ್ತಾ, ಇದು ನಿಜವಾಗಲೂ ಕಸರತ್ತಿನ ಪ್ರಯತ್ನ. ಕ್ರೋಷಿಯಾ, ಆಸ್ಟ್ರಿಯಾ ಸೇರಿದಂತೆ ಮೂರು ರಾಷ್ಟ್ರಗಳ ನಟರೊಂದಿಗೆ ಸಂಯುಕ್ತವಾಗಿ ಕೆಲಸ ಮಾಡುವುದು ಕೊಂಚ ಹೆಚ್ಚು ಶ್ರಮ ಬೇಡುವ ಕೆಲಸ ಎಂದು ಹೇಳಿದ ಪಾವೊ, ಸಿನಿಮಾದ ಶೀರ್ಷಿಕೆಯೂ ಒಂದು ಉಪಮೆ. ಅದೊಂದು ಎಲ್ಲರೂ ಸೇರಿ ಸಿದ್ಧಪಡಿಸುವ ಒಂದು ಅಡುಗೆ ಎಂದು ವಿವರಿಸಿದರು.

ಪಾವೋ ರಂಗಭೂಮಿಯಿಂದ ಬಂದವರು. ನಾಟಕಗಳನ್ನು ಬರೆಯುತ್ತಾ ಬೆಳೆದ ಪಾವೊ ಬಳಿಕ ಚಿತ್ರರಂಗಕ್ಕೆ ಬಂದವರು. ಅವರ ತ್ರೆಸೆಟ್ಟ ಸಿನಿಮಾಕ್ಕೆ ಆರು ಅಂತಾರಾಷ್ಟ್ರೀಯ ಪ್ರಶಸ್ತಿ ಒಳಗೊಂಡಂತೆ ಹಲವು ಪುರಸ್ಕಾರಗಳನ್ನು ಪಡೆದಿದೆ. ಸುಮಾರು ೩೦ ಕ್ಕೂ ಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಗಿದೆ.

ಇದನ್ನೂ ಓದಿ: Uttarkashi: ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಮಾನಸಿಕ ಒತ್ತಡ ನಿವಾರಿಸಲು ಅಗತ್ಯ ಕ್ರಮ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.