ನಿಜಕ್ಕೂ ಇದು ಧೂಳಿಪಟ ಸಿನಿಮಾ


Team Udayavani, Aug 26, 2018, 11:42 AM IST

dhooliparta.jpg

“ಅವನ್ನ ಮುಟ್ಟಿನೋಡು, “ಧೂಳಿಪಟ’ ಆಗೋಗ್ತಿಯ …’ ನಾಯಕಿ ಹೀರೋಗೆ ಹೀಗೆ ಬಿಲ್ಡಪ್‌ ಕೊಡುವವರೆಗೂ, ಪ್ರೇಕ್ಷಕ ತಲೆ ಕೆರೆದು ಕುಳಿತಿರುತ್ತಾನೆ. ಇಷ್ಟಕ್ಕೂ ಈ ಕಥೆಗೂ, “ಧೂಳಿಪಟ’ ಎಂಬ ಟೈಟಲ್‌ಗ‌ೂ ಏನು ಸಂಬಂಧ ಎಂದು. ಏಕೆಂದರೆ, ನಾಯಕ ಚಿತ್ರದಲ್ಲಿ ಅದಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ನಟನೆಯಲ್ಲಿ, ಆ್ಯಕ್ಷನ್‌ನಲ್ಲಾಗಲೀ ಯಾರನ್ನೂ “ಧೂಳಿಪಟ’ ಮಾಡಿರುವುದಿಲ್ಲ. ಹಾಗಾಗಿ ಹೆಸರಿಗೂ, ಚಿತ್ರಕ್ಕೂ ಸಂಬಂಧವೇನು ಎಂಬುದು ಸ್ಪಷ್ಟವಾಗಿರುವುದಿಲ್ಲ.

ಆ ನಂತರ ಒಂದು ಫೈಟ್‌ ಆಗುತ್ತದೆ. ನಾಯಕ ಎಲ್ಲರನ್ನೂ ಹೊಡೆದುರಿಳಿಸುತ್ತಾನೆ. ಅದನ್ನೇ “ಧೂಳಿಪಟ’ ಎಂದುಕೊಳ್ಳಲು ಅಡ್ಡಿಯಿಲ್ಲ. ಹಾಗಾದರೆ, ಚಿತ್ರದ ಕಥೆಯೇನು ಎಂಬ ಪ್ರಶ್ನೆ ಬರಬಹುದು. ಅದು ಹೇಳುವುದು ಕಷ್ಟ. ಏಕೆಂದರೆ, ಚಿತ್ರ ಮುಗಿಯುವ 20 ನಿಮಿಷದವರೆಗೂ ಅದು ಗೊತ್ತಾಗುವುದಿಲ್ಲ. ಎಲ್ಲರನ್ನೂ ಯಾಮಾರಿಸಿಕೊಂಡು ಬಾಳುವ ಯುವಕ ಮೊದಲಾರ್ಧ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಪ್ರಯತ್ನಿಸುತ್ತಾನೆ.

ಇಂಟರ್‌ವೆಲ್‌ ಹೊತ್ತಿಗೆ ಅವನನ್ನು ಒಂದಿಷ್ಟು ಜನ ಹೊಡೆದು ನದಿಗೆ ಬಿಸಾಕುತ್ತಾರೆ. ದ್ವಿತೀಯಾರ್ಧದ ಆರಂಭದಲ್ಲಿ ನದಿ ದಡಕ್ಕೆ ಡ್ಯಾನ್ಸ್‌ ಮಾಡಲು ಬರುವ ಇನ್ನೊಬ್ಬ ನಾಯಕಿ ಮತ್ತು ಆಕೆಯ ಸ್ನೇಹಿತರಿಗೆ ಅವನು ಸಿಗುತ್ತಾನೆ. ಕಟ್‌ ಮಾಡಿದರೆ, ಆ ಹುಡುಗಿಗೂ ಪ್ರೀತಿ ಎಂದು ಯಾಮಾರಿಸಿ, 20 ಲಕ್ಷ ಹೊಡೆದುಕೊಂಡು ಅವನು ಓಡಿಹೋಗಿರುವ ಇನ್ನೊಂದು ವಿಷಯ ಬೆಳಕಿಗೆ ಬರುತ್ತದೆ.

ಇಷ್ಟಕ್ಕೂ ಯಾಕೆ ಅವನು ಹೀಗೆಲ್ಲಾ ಮಾಡುತ್ತಾನೆ ಮತ್ತು ಫ‌ಸ್ಟ್‌ ಹಾಫ್ ಹಾಗೂ ಸೆಕೆಂಡ್‌ ಹಾಫ್ ನಾಯಕಿಯರ ಪೈಕಿ ಯಾರು ಅವನ ಬೆಟರ್‌ ಹಾಫ್ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. “ಧೂಳಿಪಟ’ ನೋಡಿ, ಮೆಚ್ಚುವುದಕ್ಕೆ ಸಖತ್‌ ತಾಳ್ಮೆ ಬೇಕು. ಏಕೆಂದರೆ, ನಾಯಕನ ಲೆವೆಲ್‌ಗೆ ಸ್ವಲ್ಪ ಜಾಸ್ತಿಯೇ ಆದ ಬಿಲ್ಡಪ್‌ಗ್ಳಿವೆ. ಇನ್ನು ಸುಸ್ತಾಗಿಸುವ ಸನ್ನಿವೇಶಗಳು, ಕೆಟ್ಟ ಕಾಮಿಡಿ, ನಗು ತರಿಸುವ ಹೊಡೆದಾಟಗಳು, ನಾಯಕ ಮತ್ತು ಸ್ನೇಹಿತನ ಮಂಗಾಟಗಳು … ಹೀಗೆ ತಾಳ್ಮೆ ಕುಗ್ಗಿಸುವುದಕ್ಕೆ ಹಲವು ಕಾರಣಗಳಿವೆ.

ಗಾಳಿಯಲ್ಲಿ ಕಂಟ್ರೋಲ್‌ಗೆ ಸಿಗದ ಗಾಳಿಪಟದಂತೆ ತೇಲುವ ಚಿತ್ರಕಥೆಯೇ, ಪ್ರೇಕ್ಷಕನನ್ನು ಧೂಳಿಪಟ ಮಾಡಿರುತ್ತದೆ. ಆ ಮಟ್ಟಿಗೆ ಚಿತ್ರಕ್ಕೆ, ಹೆಸರು ಹೇಳಿ ಮಾಡಿಸಿದಂತಿದೆ. ನಾಯಕ ರೂಪೇಶ್‌ ಕುಮಾರ್‌ ಅವರು ಶಶಿಕುಮಾರ್‌ ತರಹ ಮಾತಾಡುತ್ತಾರೆ, ಕೆಲವು ಆ್ಯಂಗಲ್‌ಗ‌ಳಲ್ಲಿ ಅವರ ತರಹ ಕಾಣುತ್ತಾರೆ ಎನ್ನುವುದು ಬಿಟ್ಟರೆ, ಅವರ ಬಗ್ಗೆ ಹೆಚ್ಚೇನೂ ಹೇಳುವುದು ಕಷ್ಟ. ಅವರಿಗೆ ಇಬ್ಬರು ನಾಯಕಿಯರಿದ್ದು, ಅದರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ ಎಂಬ ತೀರ್ಪಿಗೆ ಬರುವುದೂ ಕಷ್ಟ.

ಇನ್ನು ಚಿತ್ರದಲ್ಲಿ ಒಂದಿಷ್ಟು ಹಿರಿಯ ಕಲಾವಿದರಿದ್ದಾರೆ ಮತ್ತು ಅವರೆಲ್ಲಾ ಎಂದಿನಂತೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ದೊಡ್ಡ ಸಸ್ಪೆನ್ಸ್‌ ಏನೆಂದರೆ, ನಟ ಯೋಗಿ ಯಾಕೆ ಬರುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎನ್ನುವುದು ಕೊನೆಯವರೆಗೂ ಗೊತ್ತಾಗುವುದಿಲ್ಲ. ಪೋಸ್ಟರ್‌ನಲ್ಲಿ ಅವರನ್ನು ನೋಡಿ ಒಳಬಂದರೆ, ಅವರು ಸಿಗುವುದು ಒಂದು ಹಾಡಿನಲ್ಲಿ ಮಾತ್ರ. ಮಿಕ್ಕಂತೆ ಛಾಯಾಗ್ರಹಣ ಮತ್ತು ಸಂಗೀತದ ಬಗ್ಗೆ ಹೆಚ್ಚು ಹೇಳುವುದಕ್ಕೆ ಏನೂ ಇಲ್ಲ.

ಚಿತ್ರ: ಧೂಳಿಪಟ
ನಿರ್ದೇಶನ: ರಶ್ಮಿ ಪಿ ಕಾರ್ಚಿ
ನಿರ್ಮಾಣ: ಗಿರೀಶ್‌ ಜಿ ರಾಜ್‌, ಶಿರಗಣ್ಣನವರ್‌ ಮತ್ತು ನಿಂಗರಾಜ್‌
ತಾರಾಗಣ: ರೂಪೇಶ್‌ ಕುಮಾರ್‌, ಕುರಿ ರಂಗ, ಅರ್ಚನ, ಐಶ್ವರ್ಯ, ಟೆನ್ನಿಸ್‌ ಕೃಷ್ಣ, ಆಂಜನಪ್ಪ, ರಮಾನಂದ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.