KAIVA movie review; ಮುಗ್ಧ ಪ್ರೇಮಿಯ ರೆಡ್‌ ಅಲರ್ಟ್‌


Team Udayavani, Dec 10, 2023, 9:44 AM IST

KAIVA movie review

ಆತ ಬಯಸಿದ್ದು ಪ್ರೀತಿ, ಆಕೆ ಕೊಟ್ಟಿದ್ದೂ ಪ್ರೀತಿ. ಅಲ್ಲಿಗೆ ಒಂದು ಮುಗ್ಧ ಪ್ರೇಮಪು ರಾಣ ಶುರು. ಹೂವಿನ ಹಾದಿಯಲ್ಲಿ ಪ್ರೇಮಪಯಣ ಸಾಗುತ್ತಿರುವಾಗ ಮುಳ್ಳೊಂದು ಚುಚ್ಚಿಕೊಳ್ಳುತ್ತದೆ. ತನ್ನಾಕೆಗೆ ಚುಚ್ಚಿದ ಮುಳ್ಳನ್ನು ಬುಡಸಮೇತ ಕಿತ್ತು ಹಾಕಲು ನಾಯಕ ಅಣಿಯಾಗುತ್ತಾನೆ. ಅಲ್ಲಿಂದ ಹೂವಿನ ಹಾದಿಯಲ್ಲಿ ನೆತ್ತರ ಹೆಜ್ಜೆ, ರುದ್ರತಾಂಡವ ಶುರು… ಇದು ಈ ವಾರ ತೆರೆಕಂಡಿರುವ “ಕೈವ’ ಸಿನಿಮಾದ ಒಟ್ಟಾರೆ ಸಾರಾಂಶ.

ಇಷ್ಟು ಹೇಳಿದ ಮೇಲೆ ಸಿನಿಮಾದ “ಬೇರು’ ಹೇಗೆಲ್ಲಾ ಸಾಗಿರಬಹುದು ಎಂದು ನೀವು ಊಹಿಸಬಹುದು. ಹಾಗಂತ ಪ್ರೇಕ್ಷಕರ ಊಹಿಸಿದ್ದೆಲ್ಲಾ ಇಲ್ಲಿ ಆಗುತ್ತದೆ ಎಂದಲ್ಲ. ಆ ಮಟ್ಟಿಗೆ ನಿರ್ದೇಶಕ ಜಯತೀರ್ಥ ಒಂದಷ್ಟು ಟ್ವಿಸ್ಟ್‌-ಟರ್ನ್ಗಳೊಂದಿಗೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಒಂದು ಮುದ್ದಾದ ಮತ್ತು ಅಷ್ಟೇ ಮುಗ್ಧವಾದ ಲವ್‌ಸ್ಟೋರಿಯನ್ನು ರಕ್ತದಲ್ಲಿ ಮೆತ್ತಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ ಜಯತೀರ್ಥ. ಹಾಗೆ ನೋಡಿದರೆ ನಿರ್ದೇಶಕ ಜಯತೀರ್ಥ ಅವರಿಗೆ ಇದು ಹೊಸ ಬಗೆಯ ಸಿನಿಮಾ. ರಕ್ತದಿಂದ ತುಂಬಾನೇ ದೂರವಿದ್ದ ಜಯತೀರ್ಥ ಈ ಬಾರಿ ರಕ್ತದೋಕುಳಿ ಯನ್ನೇ ಹರಿಸಿದ್ದಾರೆ. ಅದಕ್ಕೆ ಕಾರಣ ಕಥೆ, ಅವರೇ ಹೇಳಿದಂತೆ ಇದು 80ರ ದಶಕದಲ್ಲಿ ನಡೆದ ನೈಜ ಘಟನೆಯನ್ನಿಟ್ಟುಕೊಂಡು ಮಾಡಿರುವ ಸಿನಿಮಾವಿದು. ಹಾಗಾಗಿ, ನೈಜ ಘಟನೆಯನ್ನು ಹಸಿಹಸಿಯಾಗಿ ತೋರಿಸಬೇಕೆಂಬ ನಿರ್ದೇಶಕರ “ಆಸಕ್ತಿ’ ಎದ್ದು ಕಾಣುತ್ತದೆ. ಜೊತೆಗೆ ತನ್ನ ಪಾಡಿಗೆ ತಾನಿದ್ದ ಒಬ್ಬ ಮುಗ್ಧ ವ್ಯಕ್ತಿಯನ್ನು ಕೆಣ ಕಿದರೆ ಆತ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬ ಅಂಶವನ್ನು ಸಿನಿಮಾದಲ್ಲಿ ಒತ್ತಿ ಒತ್ತಿ ಹೇಳಲಾಗಿದೆ.

ಆರಂಭದಲ್ಲಿ ಒಂದು ಮುಗ್ಧ ಲವ್‌ಸ್ಟೋರಿಯಾಗಿ ತೆರೆದುಕೊಳ್ಳುವ ಕಥೆ ಮುಂದೆ ಸಾಗುತ್ತಾ “ಕೆಂಪು’ ಹಾದಿಯಾಗಿ ಬದಲಾಗುತ್ತದೆ. ಮೊದಲೇ ಹೇಳಿದಂತೆ ಇದು 80ರ ದಶಕದ ಕಥೆಯಾಗಿರುವುದರಿಂದ ಅಂದಿನ ಒಂದಷ್ಟು ಅಂಡರ್‌ವರ್ಲ್ಡ್, ಅಲ್ಲಿನ ವ್ಯಕ್ತಿಗಳನ್ನು ಪಾತ್ರವನ್ನಾಗಿಸಿದ್ದಾರೆ. ಆದರೆ, ಅವೆಲ್ಲವೂ ಪಾಸಿಂಗ್‌ ಶಾಟ್‌. ಅಬ್ಬರ ಏನಿದ್ದರೂ “ಕೈವ’ನದ್ದೇ. ಫ್ಯಾಮಿಲಿಗೆ ಲವ್‌ಸ್ಟೋರಿ, ಮಾಸ್‌ಗೆ “ರಾ’ ಸ್ಟೋರಿ ಎಂದು ಹೇಳಿದರೆ ತಪ್ಪಾಗಲಾರದು.

ಒಂದೇ ಸಿನಿಮಾದಲ್ಲಿ ಎರಡು ಶೇಡ್‌ ನೋಡಬಯಸುವವರಿಗೆ “ಕೈವ’ ಇಷ್ಟವಾಗುತ್ತದೆ. ನಾಯಕ ಧನ್ವೀರ್‌ ಪ್ರೇಮಿಯಾಗಿ, ತಪ್ಪಿತಸ್ಥರನ್ನು ಬೆನ್ನಟ್ಟುವ “ರಣಬೇಟೆ’ಗಾರನಾಗಿ ಇಷ್ಟವಾಗುತ್ತಾರೆ. ಇಲ್ಲಿ ಅವರ ಪಾತ್ರಕ್ಕೆ ಮಾತು ಕಮ್ಮಿ, ಆದರೆ ಕೆಲಸ ಜಾಸ್ತಿ. ನಾಯಕಿ ಮೇಘಾ ಶೆಟ್ಟಿ ನಗುವಲ್ಲೇ ಗಮನ ಸೆಳೆಯುತ್ತಾರೆ. ಅದಕ್ಕೊಂದು ಕಾರಣವಿದೆ. ಅದನ್ನು ತೆರೆಮೇಲೆಯೇ ನೋಡಬೇಕು. ಉಳಿದಂತೆ ರಮೇಶ್‌ ಇಂದಿರಾ, ರಾಘು ಶಿವಮೊಗ್ಗ, ಉಗ್ರಂ ಮಂಜು ಸೇರಿದಂತೆ ಇತರರು ನಟಿಸಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.