ಚಿತ್ರ ವಿಮರ್ಶೆ: ‘ಕಸ್ತೂರಿ ಮಹಲ್‌’ನಲ್ಲಿ ಥ್ರಿಲ್ಲಿಂಗ್‌ ಅನುಭವ


Team Udayavani, May 14, 2022, 11:24 AM IST

ಚಿತ್ರ ವಿಮರ್ಶೆ: ‘ಕಸ್ತೂರಿ ಮಹಲ್‌’ನಲ್ಲಿ ಥ್ರಿಲ್ಲಿಂಗ್‌ ಅನುಭವ

ಕಳೆದ ಕೆಲ ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್‌, ಪ್ಯಾನ್‌ ಇಂಡಿಯಾ, ಫ್ಯಾಮಿಲಿ ಡ್ರಾಮ, ಸಾಮಾಜಿಕ ಕಳಕಳಿ, ಇಂತಹ ಸಿನಿಮಾಗಳೇ ಹೆಚ್ಚಾಗಿದ್ದವು. ಹೀಗಾಗಿ ಹಾರರ್‌-ಥ್ರಿಲ್ಲರ್‌ ಸಬ್ಜೆಕ್ಟ್ ಸಿನಿಮಾಗಳು ಅಪರೂಪ ಎಂಬಂತಾಗಿದ್ದವು. ಈ ಅಪರೂಪಕ್ಕೆ ಎಂಬಂತೆ ಔಟ್‌ ಆ್ಯಂಡ್‌ ಔಟ್‌ ಹಾರರ್‌-ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ “ಕಸ್ತೂರಿ ಮಹಲ್‌’ ಸಿನಿಮಾ ತೆರೆಗೆ ಬಂದಿದೆ.

ಪುರಾತತ್ವ ಶಾಸ್ತ್ರ ಇಲಾಖೆಯಲ್ಲಿ ಕೆಲಸ ಮಾಡುವ ಮೇಘಾಳಿಗೆ, ತಾನು ಸ್ಥಳ ಪರೀಶಿಲನೆಗೆ ಹೋದ ಕಡೆಯಲ್ಲಾ ಒಂದೊಂದು ವಸ್ತುವನ್ನು ಕದ್ದು ತರುವ ಅಭ್ಯಾಸ. ಹೀಗೆ ಅಭ್ಯಾಸ ಬಲದಿಂದ ಒಂದು ಅರಮನೆಯಿಂದ ಮೇಘಾ ಡೈರಿಯೊಂದನ್ನು ತರುತ್ತಾಳೆ. ಕಥೆ ಪ್ರಾರಂಭವಾಗುವುದೇ ಆ ಡೈರಿ ಮನೆಗೆ ಬಂದ ಮೇಲೆ. ಹಾಗಾದರೆ ಆ ಡೈರಿ ಬಂದ ಮೇಲೆ ಎನೆಲ್ಲಾ ಆಗುತ್ತದೆ. ಆ ಡೈರಿ ಅಲ್ಲಿ ಅಂತದ್ದೇನಿದೆ ಅನ್ನುವ ಅಂಶ ತಿಳಿಯಲು ಸಿನಿಮಾವನ್ನು ನೋಡಬೇಕು.

“ಕಸ್ತೂರಿ ಮಹಲ್‌’ ಹಾರರ್‌-ಸಸ್ಪೆನ್ಸ್‌ ಸಿನಿಮಾವಾಗಿದ್ದು, ಸಾಮಾನ್ಯ ಹಾರರ್‌ ಸಿನಿಮಾಗಳಂತೆ ಇಲ್ಲು ಒಂದಷ್ಟು ದಶಕಗಳ ಇತಿಹಾಸ, ದೌರ್ಜನ್ಯ, ಹೂತಿಟ್ಟ ಸೇಡು, ಮರೆಯಾದ ಪ್ರೀತಿ, ಎಲ್ಲವು ಇದೆ. ಇತರ ಹಾರರ್‌ ಸಬ್ಜೆಕ್ಟ್ ಗಿಂತ ಹೊಸದಾಗಿದೆ ಎಂದು ಅನಿಸದಿದ್ದರೂ, ಮುಂದೆ ಏನಾಗಬಹುದು ಅನ್ನೋ ಕುತೂಹಲವಂತೂ ಸಿನಿಮಾದ ಉದ್ದಕ್ಕೂ ಇದೆ. ಸಿನಿಮಾದ ಓಪನಿಂಗ್‌ ಶಾಟ್‌ನಿಂದಲೇ ಪ್ರಾರಂಭವಾದ ಹಾರರ್‌ ಪಯಣ ಸಿನಿಮಾದ ಕೊನೆಯವರೆಗೂ ನೋಡುಗರಿಗೆ ಕಾಣಸಿಗುತ್ತದೆ.

ಹಿರಿಯ ನಿರ್ದೇಶಕ ದಿನೇಶ್‌ ಬಾಬು ಅವರ “ಕಸ್ತೂರಿ ಮಹಲ್‌’ ಪ್ರಯತ್ನ ಮೆಚ್ಚುವಂತದ್ದು. ಸಿನಿಮಾದಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಲಿಂಕ್‌ ಇಟ್ಟುಕೊಂಡಿದ್ದು, ಕಥೆಯ ಬಂಡಿಯನ್ನು ಕ್ಲೈಮ್ಯಾಕ್ಸ್‌ ದಡಕ್ಕೆ ಸೇರಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಇನ್ನು ಇಡೀ ಸಿನಿಮಾದ ಕೇಂದ್ರ ಬಿಂದು ನಾಯಕಿ ಶಾನ್ವಿ ಶ್ರೀವಾಸ್ತವ್‌. ತೆರೆ ಮೇಲೆ ಎರಡು ಶೇಡ್‌ನ‌ಲ್ಲಿ ಶಾನ್ವಿ ಕಾಣಿಸಿಕೊಂಡಿದ್ದು, ತದ್ವಿರುದ್ಧದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇನ್ನು ರಂಗಾಯಣ ರಘು ನಟನೆ ಚಿತ್ರಕ್ಕೆ ಬೂಸ್ಟ್‌ ನೀಡುವಂತಿದೆ. ಅಲ್ಲಲ್ಲಿ ಬರುವ ರಂಗಾಯಣ ರಘು ಪಂಚಿಂಗ್‌ ಕಾಮಿಡಿ ಪ್ರೇಕ್ಷಕರ ಮೊಗದಲ್ಲಿ ಒಂದು ಕ್ಷಣ ನಗು ತರಿಸುತ್ತದೆ. ಉಳಿದಂತೆ ಸ್ಕಂದ, ಶ್ರುತಿ ಪ್ರಕಾಶ್‌, ಕೆಂಪೇಗೌಡ ಹಾಗೂ ಇತರ ಪಾತ್ರಗಳು ಕಥೆಗೆ ಪೂರಕವಾಗಿದೆ. ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿಕೆಎಚ್‌ ದಾಸ್‌ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ.

ವಾಣಿ ಭಟ್ಟ

ಟಾಪ್ ನ್ಯೂಸ್

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 27,28,29 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು, ಕೇರಳಕ್ಕೆ 16 ಲೋಕಸಭಾ ಸ್ಥಾನ ನಷ್ಟ

Explainer:ಕ್ಷೇತ್ರ ಪುನರ್‌ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

1-sadad

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್

1-saasds

BJP ಸಂಸದನ ವಿವಾದ ; ಡ್ಯಾನಿಶ್ ಅಲಿ ವಿರುದ್ಧ ಅಸಂಸದೀಯ ಪದಗಳ ಬಳಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parimala D’souza Movie Review; ನಿಗೂಢ ಹಾದಿಯಲ್ಲಿ ಪರಿಮಳ ಹೆಜ್ಜೆ

Parimala D’souza Movie Review; ನಿಗೂಢ ಹಾದಿಯಲ್ಲಿ ಪರಿಮಳ ಹೆಜ್ಜೆ

’13’ movie review

’13’ movie review: ಹಣದ ಹಿಂದೆ ಬಿದ್ದವರ ಹುಡುಕಾಟ

tales of mahanagara movie review

Tales of Mahanagara Movie Review; ಅಚ್ಚರಿಗಳ ನಡುವೆ ಮಹಾನಗರದ ಚಿತ್ರಣ

tatsama tadbhava movie review

Movie Review; ಒಂದು ಕೊಲೆಯ ಸುತ್ತ… ತತ್ಸಮ ತದ್ಭವ’

kadda chitra review

Kadda Chitra review; ಥ್ರಿಲ್ಲರ್‌ ಹಾದಿಯಲ್ಲಿ ಭಾವನೆಗಳ ಪಯಣ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ

Pune: ದಕ್ಷಿಣ – ಉತ್ತರ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಎರಡು ಕೈಗಳಿದ್ದಂತೆ

Pune: ದಕ್ಷಿಣ – ಉತ್ತರ ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಎರಡು ಕೈಗಳಿದ್ದಂತೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

1-sadsa

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

1-saddas

Gokarna; ಸೆ. 27,28,29 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.