ಚಿತ್ರ ವಿಮರ್ಶೆ: ‘ಖಾಸಗಿ ಪುಟ’ಗಳಲ್ಲಿ ಸೆರೆಯಾದ ಪ್ರೇಮಕಥೆ!


Team Udayavani, Nov 19, 2022, 4:22 PM IST

khasagi putagalu

ಕಾಲೇಜ್‌ ಕ್ಯಾಂಪಸ್‌, ಅಲ್ಲೊಂದು ತರ್ಲೆ ಗ್ಯಾಂಗ್‌, ಅದರಲ್ಲೊಬ್ಬ ಹೀರೋ, ಯಾವ ಹುಡುಗಿಯರಿಗೂ ಮನ ಸೋಲದ ಆತ ಒಬ್ಟಾಕೆಯ ಹಿಂದೆ ಸುತ್ತುವುದು, ನೋಡ ನೋಡುತ್ತಲೇ ಅವರಿಬ್ಬರ ಲವ್‌ಸ್ಟೋರಿ “ಉತ್ತುಂಗ’ಕ್ಕೆ ಹೋಗುವುದು… ಈ ತರಹದ ಲವ್‌ಸ್ಟೋರಿಗಳನ್ನಿಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ಈ ವಾರ ತೆರೆಕಂಡಿರುವ “ಖಾಸಗಿ ಪುಟಗಳು’ ಕೂಡಾ ಇದೇ ಹಾದಿಯಲ್ಲಿ ಆರಂಭವಾಗಿ ನೋಡ ನೋಡುತ್ತಲೇ ಹೊಸ ಹಾದಿ ಹಿಡಿಯುವ ಸಿನಿಮಾ. ಸದ್ಯ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹೊಸ ಪ್ರಯೋಗದ, ನೈಜತೆಗೆ ಹೆಚ್ಚು ಒತ್ತು ನೀಡುವ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ಹೊಸ ಸೇರ್ಪಡೆ “ಖಾಸಗಿ ಪುಟಗಳು’.

ಒಂದು ಲವ್‌ಸ್ಟೋರಿಯನ್ನು ಎಷ್ಟು ನೈಜವಾಗಿ ಹಾಗೂ ಮನಸ್ಸಿಗೆ ಹತ್ತಿರವಾಗುವಂತೆ ಕಟ್ಟಿಕೊಡಲು ಸಾಧ್ಯವೋ, ಆ ತರಹದ ಒಂದು ಪ್ರಯತ್ನವನ್ನು ಚಿತ್ರತಂಡ ಇಲ್ಲಿ ಮಾಡಿದೆ. ಹಾಗಂತ ಚಿತ್ರದ ಕಥೆ ಈ ಹಿಂದೆ ಯಾರೂ ನೋಡಿರದ, ಕೇಳಿರದ ಕಥೆಯಲ್ಲ. ಆದರೆ, ಹೊಸಬರ ತಂಡ ನಿರೂಪಣೆಯಲ್ಲಿ ಹಾಗೂ ಅಲ್ಲಲ್ಲಿ ನೀಡುವ ಟ್ವಿಸ್ಟ್‌ಗಳ ಮೂಲಕ ಸಿನಿಮಾವನ್ನು ಹೆಚ್ಚು ಆಪ್ತವಾಗುವಂತೆ ಹಾಗೂ ಕೊಂಚ ಕಾಡುವಂತೆ ಮಾಡಿದೆ. ಆ ಮಟ್ಟಿಗೆ ಹೊಸಬರ ಪ್ರಯತ್ನವನ್ನು ಮೆಚ್ಚಬಹುದು.

ಕರಾವಳಿ ಪರಿಸರದಲ್ಲೇ ನಡೆಯುವ “ಖಾಸಗಿ ಪುಟಗಳು’ ಕೆಲವೇ ಕೆಲವು ಪಾತ್ರಗಳ ಸುತ್ತ ಸುತ್ತುವ ಸಿನಿಮಾ. ಈ ಸಿನಿಮಾದ ಪರಮ ಉದ್ದೇಶ ಲವ್‌ಸ್ಟೋರಿಯನ್ನು ಹೆಚ್ಚು ಆಪ್ತವಾಗುವಂತೆ ಕಟ್ಟಿಕೊಡುವುದು. ಅದೇ ಕಾರಣದಿಂದ ಚಿತ್ರದಲ್ಲಿ ಬರುವ ಇತರ ದೃಶ್ಯಗಳನ್ನು ಹೆಚ್ಚು ಎಳೆದಾಡದೇ, ಅಲ್ಲಲ್ಲೇ ಮುಗಿಸಿ, ಪ್ರೇಮಕಥೆಯನ್ನೇ ಮುಂದೆ ತಂದಿದೆ.

ಚಿತ್ರದ ಮೊದಲರ್ಧ ಕಾಲೇಜು, ಹುಡುಗಿ ಹಿಂದೆ ಬೀಳುವ ನಾಯಕ, ಕಣ್ಣಲ್ಲೇ ಕೊಲ್ಲೋ ನಾಯಕಿ, ತರ್ಲೆ ಫ್ರೆಂಡ್ಸ್‌ ಸುತ್ತ ಸಾಗಿದರೆ, ಸಿನಿಮಾದ ಜೀವಾಳ ದ್ವಿತೀಯಾರ್ಧ. ಇಡೀ ಸಿನಿಮಾದ ಕಥೆ ನಿಂತಿರೋದು ಇಲ್ಲೇ… ಇಲ್ಲಿ ಹಲವು ಟ್ವಿಸ್ಟ್‌ ಗಳು ಎದುರಾಗುವ ಜೊತೆಗೆ ಒಂದಷ್ಟು ಕುತೂಹಲವನ್ನು ಹುಟ್ಟಿಸುತ್ತಾ ಚಿತ್ರ ಸಾಗುತ್ತದೆ. ಪ್ರೇಕ್ಷಕನ ಊಹೆಗೆ ನಿಲುಕದೇ ಕಥೆ ಸಾಗುವುದು ಕೂಡಾ ಇಲ್ಲಿನ ಪ್ಲಸ್‌ ಎಂದೇ ಹೇಳಬಹುದು.

ಚಿತ್ರದಲ್ಲಿ ನಾಯಕ ವಿಶ್ವ ಪ್ರೇಮಿಯಾಗಿ ಇಷ್ಟವಾಗುತ್ತಾರೆ. ನಾಯಕಿ ಲಿಯೋನಿಲ್ಲ ಶ್ವೇತಾ ಡಿಸೋಜಾ ಮುಖಭಾವದಲ್ಲೇ ನಟಿಸಿ, ಭರವಸೆ ಮೂಡಿಸಿದ್ದಾರೆ. ಉಳಿದಂತೆ ಮೋಹನ್‌ ಜುನೇಜ, ಪ್ರಶಾಂತ್‌ ನಟನಾ, ಶ್ರೀಧರ್‌, ಚೇತನ್‌ ದುರ್ಗಾ, ನಂದಗೋಪಾಲ್‌, ನಿರೀಕ್ಷಾ ಶೆಟ್ಟಿ, ಮಂಗಳೂರು ದಿನೇಶ್‌ ಮುಂತಾದವರು “ಖಾಸಗಿ ಪುಟಗಳು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಖಾಸಗಿ’ ಲವ್‌ಸ್ಟೋರಿಯನ್ನು ಒಮ್ಮೆ “ಬಹಿರಂಗ’ವಾಗಿ ನೋಡಲಡ್ಡಿಯಿಲ್ಲ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.