Movie review: ಜೀವ-ಜೀವನದ ಸುತ್ತ ‘ಪೆಂಟಗನ್‌’


Team Udayavani, Apr 8, 2023, 12:24 PM IST

pentagon kannada movie review

ಗುರುದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬಂದಿರುವ “ಪೆಂಟಗನ್‌’ ಐದು ಕಥಾಹಂದರದ ಗುತ್ಛಗಳಿರುವ ಸಿನಿಮಾ. ಪ್ರೇಮ ವೈಫ‌ಲ್ಯದಿಂದ ಮನನೊಂದು ಬದುಕು ಕೊನೆಗಾಣಿಸಲು ಹೊರಟ ಯುವಕನ ಜೀವನದಲ್ಲಿ ಪರಿಸ್ಥಿತಿಗಳು ಹೇಗೆಲ್ಲ ಆಟವಾಡುತ್ತದೆ ಎಂಬುದು ಚಿತ್ರ ಮೊದಲ ಕಥೆಯಲ್ಲಿದ್ದರೆ, ಜೊತೆಗಿದ್ದವರು ಬದುಕಿದ್ದಾಗ ಜೀವನವನ್ನೇ “ಮೈಸೂರು ಪಾಕ್‌’ನಂತೆ ಅವರೊಂದಿಗೆ ಆಸ್ವಾಧಿಸಬೇಕು ಎಂಬ ಸಂದೇಶ ಎರಡನೇ ಕಥೆಯಲ್ಲಿದೆ. ಮೂರನೇ ಕಥೆಯಲ್ಲಿ ಆನ್‌ಲೈನ್‌ ವಂಚನೆ ತೆರೆದುಕೊಂಡರೆ, ನಾಲ್ಕನೇ ಕಥೆಯಲ್ಲಿ ಜಾತಿವೈಷಮ್ಯಕ್ಕೆ ಉಸಿರು ಚೆಲ್ಲುವ ಅಮಾಯಕ ಜೀವಗಳ ಚಿತ್ರಣವಿದೆ. ಅಂತಿಮವಾಗಿ ಬರುವ ಐದನೇ ಕಥೆಯೊಳಗೆ ಸಮಯದ ಸುಳಿಗೆ ಸಿಲುಗಿ ಡಾನ್‌ ಪಟ್ಟಗಿಟ್ಟಿಸಿಕೊಂಡ ಹೋರಾಟಗಾರನೊಬ್ಬನ ಬದುಕಿನ ವರ್ತಮಾನದ ವ್ಯಥೆಯಿದೆ.

ಇನ್ನು ಆರಂಭದಲ್ಲಿಯೇ ಚಿತ್ರತಂಡ ಹೇಳಿಕೊಂಡಂತೆ “ಪೆಂಟಗನ್‌’ ಒಂದು ಆ್ಯಂಥಾಲಜಿ ಶೈಲಿಯ ಸಿನಿಮಾ. ಐದು ಬೇರೆ ಬೇರೆ ಹಿನ್ನೆಲೆಯ ಐದು ಕಥೆಗಳನ್ನು ಇಟ್ಟುಕೊಂಡು ನಿರ್ದೇಶಕರಾದ ಆಕಾಶ್‌ ಶ್ರೀವತ್ಸ, ಚಂದ್ರಮೋಹನ್‌, ರಾಘು ಶಿವಮೊಗ್ಗ, ಕಿರಣ್‌ ಕುಮಾರ್‌ ಮತ್ತು ಗುರುದೇಶಪಾಂಡೆ ಐವರೂ ಕೂಡ ಸಾವು ಮತ್ತು ಬದುಕಿನ ನಡುವಿನ ಪ್ರಯಾಣದ ಹಲವು ಸ್ತರಗಳನ್ನು ತಮ್ಮದೇ ಆದ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ.

ಪ್ರತಿಕಥೆಯಲ್ಲೂ ಅದರದ್ದೇ ಆದ ಪಾತ್ರಗಳು, ಅದಕ್ಕೆ ತಕ್ಕಂತ ಕಲಾವಿದರು ಮತ್ತು ತಂತ್ರಜ್ಞರಿರುವುದರಿಂದ, “ಪೆಂಟಗನ್‌’ ಸಿನಿಮಾದಲ್ಲಿ ಬರುವ ಪ್ರತಿ ಕಥೆಯೂ ಹೊಸರೀತಿಯಲ್ಲಿ ತೆರೆಮೇಲೆ ತೆರೆದುಕೊಳ್ಳುತ್ತದೆ. ಹೀಗಾಗಿ ಇಡೀ ಸಿನಿಮಾದಲ್ಲಿ ಬೃಹತ್‌ ಕಲಾವಿದರ ದಂಡೇ ಕಾಣಬಹುದು. ಪ್ರತಿ ಕಥೆಯನ್ನೂ ಅದಕ್ಕೊಂದು ಬಲವಾದ ಹಿನ್ನೆಲೆಯನ್ನು ಇಟ್ಟುಕೊಂಡು ಚಿತ್ರಕಥೆ ಮೂಲಕ ಕಟ್ಟಿಕೊಡಲಾಗಿರುವುದು ಸಿನಿಮಾದ ಹೈಲೈಟ್ಸ್‌ಗಳಲ್ಲೊಂದು.

ನೋಡುಗರನ್ನು ಪ್ರಚೋದಿಸುತ್ತಲೇ “ಪೆಂಟಗನ್‌’ನಲ್ಲಿ ಹೊಸ ಕಥೆ ತೆರೆದುಕೊಳ್ಳುತ್ತದೆ. ಪ್ರತಿ ಕಥೆಯಲ್ಲೂ ಚರ್ಚೆ, ತರ್ಕ, ವಾದಗಳನ್ನು ಮುಂದಿಡುತ್ತಲೇ “ಪೆಂಟಗನ್‌’ ಮುಂದಕ್ಕೆ ಸಾಗುತ್ತದೆ. ಎಲ್ಲ ವರ್ಗದ ಪ್ರೇಕ್ಷಕರನ್ನೂ ಗಮನದಲ್ಲಿ ಇಟ್ಟುಕೊಂಡು, ಅಭಿರುಚಿಗೆ ತಕ್ಕಂತೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಅಪರೂಪ ಎಂದೇ ಹೇಳಲಾಗುವ ಆ್ಯಂಥಾಲಜಿ ಶೈಲಿಯ “ಪೆಂಟಗನ್‌’ ಅಂತಿಮವಾಗಿ ತನ್ನ ಕಥಾಹಂದರ, ನಿರೂಪಣೆ ಮತ್ತು ಪ್ರಯೋಗದಿಂದಾಗಿ ಒಮ್ಮೆ ನೋಡಬಹುದಾದ ಸಿನಿಮಾ ಎನಿಸಿಕೊಳ್ಳುತ್ತದೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.