Pinki Elli movie review: ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಪಿಂಕಿ


Team Udayavani, Jun 5, 2023, 11:45 AM IST

Pinki Elli movie review

ಆಧುನಿಕ ಜಗತ್ತಿನ ಬೇಕು-ಬೇಡಗಳು, ಜಂಜಾಟ, ಸ್ವತಂತ್ರ ಮನೋಭಾವ ಪ್ರತಿಯೊಬ್ಬರ ಬದುಕಿಗೂ ಅವರದ್ದೇ ಆದ ದೃಷ್ಠಿಕೋನದಲ್ಲಿ ಒಂದೊಂದು ಅರ್ಥ ಕಲ್ಪಿಸಿಕೊಡುತ್ತವೆ. ಹಾಗಂತ ಇಲ್ಲಿ ಯಾರನ್ನೂ ವಹಿಸಿಕೊಳ್ಳಲಾಗದು, ಯಾರ ಪರವಾಗಿಯೂ ನಿಲ್ಲಲಾಗದು, ಯಾವುದನ್ನೂ ಜರಿಯಲೂ ಆಗದು. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಎದುರಾಗುವ ಪರಿಸ್ಥಿತಿ ಬದುಕನ್ನು ಹೇಗೆಲ್ಲ ಹೈರಾಣಾಗಿ ಸುತ್ತದೆ. ಅದಕ್ಕೆ ಸಾಮಾಜಿಕ ಮತ್ತು ಶ್ರೀಸಾಮಾನ್ಯನ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದೇ ಈ ವಾರ ತೆರೆಗೆ ಬಂದಿರುವ “ಪಿಂಕಿ ಎಲ್ಲಿ?’ ಸಿನಿಮಾದ ವಸ್ತು ವಿಷಯ.

ತಾಯಿಯ ಮಡಿಲಿನಲ್ಲಿ ಬೆಚ್ಚಗೆ ಬೆಳೆಯಬೇಕಾದ 8 ತಿಂಗಳ ಹೆಣ್ಣು ಮಗು ಪಿಂಕಿ, ತಂದೆ-ತಾಯಿ ಇದ್ದರೂ ಬೇರೊಬ್ಬರ ಜೋಳಿಗೆ ತುಂಬಿಸಲು ದುಡಿಯುವಮಗುವಾಗುತ್ತದೆ. ಮನೆಯಿಂದ ಕಾಣೆಯಾಗುವ ಪಿಂಕಿಯ ಹುಡುಕಾಟದ ಸುತ್ತ “ಪಿಂಕಿ ಎಲ್ಲಿ?’ ಸಿನಿಮಾದ ಕಥಾಹಂದರ ಸಾಗುತ್ತದೆ.

ಅಂದಹಾಗೆ, “ಪಿಂಕಿ ಎಲ್ಲಿ?’ ಸಿನಿಮಾದಲ್ಲಿ ಪಿಂಕಿ ಎಂಬ ಮಗು ಕೇವಲ ಸಾಂಕೇತಿಕವಷ್ಟೇ. ಪಿಂಕಿ ಕಳೆದು ಹೋದ ನಂತರ ಮಗುವಿನ ಹುಡುಕಾದ ನಡುವೆಯೇ ಅದರ ಪೋಷಕರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅಲ್ಲಿ ದಾಂಪತ್ಯ, ಮಾನವ ಸಂಬಂಧಗಳ ಹುಳುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಹಾನಗರಗಳಲ್ಲಿ ಬದುಕಿನ ಅನಿವಾರ್ಯತೆ ವಿರಾಟ್‌ ದರ್ಶನವಾಗುತ್ತದೆ. ಸ್ಲಂಗಳು, ಅಲ್ಲಿನ ಜನ ಜೀವನ, ಗೊಂದಲಮಯ ಬದುಕು ಮತ್ತು ಸಾಮಾಜಿಕ ಮನಸ್ಥಿತಿ, ಸ್ಥಿತಿಗತಿ ಎಲ್ಲವೂ ತೆರೆದುಕೊಳ್ಳುತ್ತದೆ. ಮಗುವನ್ನು ಕಳೆದು ಕೊಂಡ ತಾಯಿಯೊಬ್ಬಳ ಒಡಲಾಳದ ನೋವು ಮತ್ತು ಅಸಹಾಯಕ ನಿಲವು ಅಲ್ಲಲ್ಲಿ ಕರುಣೆ ಹುಟ್ಟಿಸುತ್ತದೆ.

ಇನ್ನು ಆಕೆಯ ಪತಿ ಹಾಗೂ ಸ್ನೇಹಿತ ಎಂಬ ಎರಡು ಪಾತ್ರಗಳಿಗೆ ಎರಡು ಆಯಾಮಗಳಿವೆ. ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಅದನ್ನು ಮನಮುಟ್ಟುವಂತೆ ಚಿತ್ರರೂಪದಲ್ಲಿ ತೆರೆಮೇಲೆ ತರುವಲ್ಲಿ ನಿರ್ದೇಶಕ ಪೃಥ್ವಿ ಕೋಣನೂರು ಯಶಸ್ವಿಯಾಗಿದ್ದಾರೆ. ಬದುಕಿನ ಅನಿವಾರ್ಯತೆ ಯಲ್ಲಿ ಬೇಯುವ ಮನಸ್ಸುಗಳು ತಮ್ಮದೇ ನಿರ್ಲಕ್ಷ್ಯದಿಂದ ಉಂಟಾಗುವ ಅನಾಹುತಗಳಿಂದ ಹೇಗೆಲ್ಲ ಪರಿತಪಿಸಬೇಕಾಗುತ್ತದೆ ಎಂಬುದನ್ನು “ಪಿಂಕಿ ಎಲ್ಲಿ?’ ಸಿನಿಮಾ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.

ಕಲಾವಿದರಾದ ಅಕ್ಷತಾ ಪಾಂಡವ ಪುರ, ದೀಪಕ್‌ ಸುಬ್ರಮಣ್ಯ, ಶೂನ್ಯ, ಗುಂಜಲಮ್ಮ, ಅನಸೂಯಮ್ಮ ಮೊದಲಾದವರು ಯಾವುದೇ ಆಡಂಭರವಿಲ್ಲದೆ ತಮ್ಮ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ. ನೋಡುನೋಡುತ್ತಿದ್ದಂತೆ, ನಿಧಾನ ವಾಗಿ ಆವರಿಸಿ ಕೊಳ್ಳುವ ಪಿಂಕಿಯ ಹುಡು ಕಾಟ ನೋಡುಗರ ಮನಸ್ಸನ್ನು ಅಲ್ಲಲ್ಲಿ ಆದ್ರವಾಗಿಸುತ್ತದೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.