ಹೇಗಿದೆ ಸಿನಿಮಾ: ಪೊಗರು ಶಿವ ಅಡ್ಡದಲ್ಲಿ ಎಲ್ಲವೂ ಹೈವೋಲ್ಟೇಜ್‌!


Team Udayavani, Feb 20, 2021, 8:20 AM IST

ಹೇಗಿದೆ ಸಿನಿಮಾ: ಪೊಗರು ಶಿವ ಅಡ್ಡದಲ್ಲಿ ಎಲ್ಲವೂ ಹೈವೋಲ್ಟೇಜ್‌!

ಒಂದು ಸಿನಿಮಾದಲ್ಲಿ ಅಭಿಮಾನಿಗಳನ್ನು ರಂಜಿಸಲು ಏನೆಲ್ಲಾ ಇರಬೇಕು? ಒಂದೊಳ್ಳೆಯ ಕಥೆ, ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವ ಡೈಲಾಗ್‌, ಹೈವೋಲ್ಟೇಜ್‌ ಫೈಟ್‌, ಜೊತೆಗೆ ಒಂಚೂರು ಲವ್‌, ಸೆಂಟಿಮೆಂಟ್‌… ಇವಿಷ್ಟದ್ದರೆ ಒಂದು ಸಿನಿಮಾವನ್ನು ಆರಾಮವಾಗಿ ಕುಳಿತು ನೋಡಬಹುದು. ಈ ವಿಷಯದಲ್ಲಿ “ಪೊಗರು’ ಚಿತ್ರ ಫ‌ಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದೆ. ಈ ಮೂಲಕ ಈ ವರ್ಷದ ಮೊದಲ ಸ್ಟಾರ್‌ ಸಿನಿಮಾವಾಗಿ ತೆರೆಕಂಡಿರುವ “ಪೊಗರು’ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಧ್ರುವ ಅವರ ಪಕ್ಕಾ ಅಭಿಮಾನಿಗಳಿಗೆ ಈ ಚಿತ್ರ ಹಬ್ಬದೂಟ.

ಧ್ರುವ ಈ ಹಿಂದಿನ ಮೂರು ಸಿನಿಮಾಗಳಲ್ಲೂ ತಮ್ಮ ಡೈಲಾಗ್‌ ಡೆಲಿವರಿ ಹಾಗೂ ಹೈವೋಲ್ಟೇಜ್‌ ಆ್ಯಕ್ಷನ್‌ ಮೂಲಕ ಹೆಚ್ಚು ಗಮನ ಸೆಳೆದವರು. ಈಗ “ಪೊಗರು’ ಚಿತ್ರದಲ್ಲಿ ನಿರ್ದೇಶಕ ನಂದಕಿಶೋರ್‌ ಅವೆಲ್ಲವನ್ನು ಯಥೇತ್ಛವಾಗಿ ನೀಡಿದ್ದಾರೆ. ಆ ಮಟ್ಟಿಗೆ “ಪೊಗರು’ ಪಕ್ಕಾ ಪೈಸಾ ವಸೂಲ್‌ ಮಾಸ್‌ ಸಿನಿಮಾ. ಮುಖ್ಯವಾಗಿ ಚಿತ್ರಕಥೆಯಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್‌.

ಸಾಮಾನ್ಯವಾಗಿ ಒಂದು ಟ್ರೆಂಡ್‌ ಇದೆ. ಅದೇನೆಂದರೆ ಹೀರೋ ಎಂದರೆ ತುಂಬಾ ಹ್ಯಾಂಡ್ಸಮ್‌ ಆಗಿರಬೇಕು, ಒಳ್ಳೆಯ ಕೆಲಸಗಳನ್ನು ಮಾಡಿಕೊಂಡೇ ಆತ ಎಲ್ಲರ ಮನಗೆಲ್ಲಬೇಕು ಆತ ಸಮಾಜಕ್ಕೆ ಉಪಕಾರಿಯಾಗಿರಬೇಕೆಂದು… ಆದರೆ, ನಂದಕಿಶೋರ್‌ ಮಾತ್ರ ಈ ಫಾರ್ಮುಲಾವನ್ನು ಬ್ರೇಕ್‌ ಮಾಡಿ ತಮ್ಮದೇ ಶೈಲಿಯಲ್ಲಿ ಚಿತ್ರಕಥೆ ಹೆಣೆದಿದ್ದಾರೆ. ಹಾಗಾಗಿ, ಸಿದ್ಧಸೂತ್ರಗಳಿಂದ ಮುಕ್ತವಾದ ಚಿತ್ರ “ಪೊಗರು’ ಎಂದು ಹೇಳಬಹುದು. ಅಷ್ಟಕ್ಕೂ ಆ ಬದಲಾವಣೆ ಏನು ಎಂಬ ಕುತೂಹಲ

ನಿಮಗಿದ್ದರೆ ನೀವು ಸಿನಿಮಾ ನೋಡಬಹುದು. ಮಾಸ್‌ ಸಿನಿಮಾಗಳಲ್ಲಿ ಕಥೆಯನ್ನು ಹುಡುಕಬಾರದು ಎಂಬ ಮಾತಿದೆ. ಅದು ಸತ್ಯ ಕೂಡಾ. ಏಕೆಂದರೆ ಬಹುತೇಕ ಮಾಸ್‌ ಸಿನಿಮಾಗಳು ಚಿತ್ರಕಥೆ ಹಾಗೂ ಸನ್ನಿವೇಶಗಳ ಮೇಲೆ ನಿಂತಿರುತ್ತವೆ. ಆದರೆ, “ಪೊಗರು’ ಚಿತ್ರದಲ್ಲಿ ಒಂದು ಕಥೆ ಅಡಗಿದೆ. ಆ ಕಥೆಗೊಂದು ಹಿನ್ನೆಲೆ ಇದೆ, ಭಾವನಾತ್ಮಕ ಸನ್ನಿವೇಶಗಳಿವೆ.

ಚಿತ್ರದಲ್ಲಿ ಬರುವ ಅಷ್ಟೂ ಡೈಲಾಗ್‌ ಗಳಿಗೆ, ಹೊಡೆದಾಟಕ್ಕೆ, ಹೀರೊ ವರ್ತನೆಗೆ ಆ ಕಥೆಯೇ ಕಾರಣ. ಆ ಮಟ್ಟಿಗೆ ನಂದಕಿಶೋರ್‌ ಹಾಗೂ ಧ್ರುವ ಇಬ್ಬರೂ ಈ ಬಾರಿ ಕಥೆಯ ಕಡೆಗೆ ಗಮನ ಕೊಟ್ಟಿದ್ದಾರೆ. ಆದರೆ, ಆ್ಯಕ್ಷನ್‌, ಡೈಲಾಗ್‌ ಮಧ್ಯೆ ಆಗಾಗ ಕಳೆದು ಹೋಗುವ ಕಥೆ ಮತ್ತೆ ಸೆಂಟಿಮೆಂಟ್‌ ದೃಶ್ಯಗಳಲ್ಲಿ ದರ್ಶನ ನೀಡುತ್ತದೆ. ಇನ್ನು, ಈ ಚಿತ್ರದಲ್ಲಿ ಒಂದು ಸೂಕ್ಷ್ಮ ಅಂಶವನ್ನು ಹೇಳಲಾಗಿದೆ. ಮನುಷ್ಯನ ವರ್ತನೆಗೆ, ಬದಲಾವಣೆಗೆ ಆತನ ಸುತ್ತಲ ಪರಿಸರ ಪ್ರಮುಖವಾಗಿರುತ್ತದೆ ಎಂಬ ಅಂಶ ಈ ಚಿತ್ರದ ಹೈಲೈಟ್‌.

ಚಿತ್ರದಲ್ಲಿ ತಾಯಿ ಸೆಂಟಿಮೆಂಟ್‌ ಇದೆ. ಸಾಮಾನ್ಯವಾಗಿ ಸೆಂಟಿಮೆಂಟ್‌ ಸಿನಿಮಾ ಎಂದರೆ ಅಲ್ಲೊಂ ದಿಷ್ಟು ಕಣ್ಣೀರ ಕಥೆಗಳಿ ರುತ್ತವೆ ಆದರೆ, ಈ ಚಿತ್ರ ಅದಕ್ಕೆ ತದ್ವಿರುದ್ಧ. ಇಲ್ಲಿ ಕಣ್ಣೀರ ಕಹಾನಿಯಿಲ್ಲ. ಆ ಮಟ್ಟಿಗೆ ಬೇರೆ ರೀತಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಉಳಿದಂತೆ ಹೆಚ್ಚು ಲಾಜಿಕ್‌ ಹುಡುಕದೇ ನೋಡಿದರೆ ಸಿನಿಮಾ ನಿಮಗೆ ಹೆಚ್ಚು ಇಷ್ಟವಾಗಬಹುದು. ಜೊತೆಗೆ ಮೌನಕ್ಕಿಂತ ಹೆಚ್ಚು ಮಾತು ಇಷ್ಟಪಡುವ ವರಿಗೆ “ಪೊಗರು’ ಒಳ್ಳೆಯ ಮಜ ಕೊಡಬಹುದು.

ನಿರ್ಮಾಪಕರು ಇಡೀ ಸಿನಿಮಾವನ್ನು ತುಂಬಾ ಅದ್ಧೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಒಂದೊಂದು ಫ್ರೆàಮ್‌ನಲ್ಲೂ ಸಾಕಷ್ಟು ಕಲಾವಿದರು, ಪ್ರಾಪರ್ಟಿಸ್‌… ಹೀಗೆ ಅದ್ಧೂರಿ ಮೇಕಿಂಗ್‌ ಮಾಡಲಾಗಿದೆ. ಸಿನಿಮಾ ಕ್ಲೈಮ್ಯಾಕ್ಸ್‌ ವೇಳೆಗೆ ಹೆಚ್ಚು ವೇಗ ಪಡೆದುಕೊಂಡು ಪಾತ್ರಗಳು ತುಂಬಾ ಬೇಗ ಬೇಗನೇ ಬದಲಾಗುತ್ತಾ ಹೋಗುತ್ತದೆ. ಇದರ ಬದಲು ಚಿತ್ರದ ಒಂದಷ್ಟು ಸನ್ನಿವೇಶಗಳನ್ನು ಟ್ರಿಮ್‌ ಮಾಡುವ ಜೊತೆಗೆ ಸೆಂಟಿಮೆಂಟ್‌ ದೃಶ್ಯಗಳನ್ನು ಬೆಳೆಸುವ ಅವಕಾಶ ನಿರ್ದೇಶಕರಿಗಿತ್ತು.

ಇಡೀ ಸಿನಿಮಾದ ಹೈಲೈಟ್‌ ಧ್ರುವ ಸರ್ಜಾ. ಚಿತ್ರವನ್ನು ತಮ್ಮ ಹೊತ್ತು ಸಾಗಿರುವ ಅವರು ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಹಿಂದಿ ಮೂರು ಸಿನಿಮಾಗಳಿಗಿಂತ ಅವರಿಗೆ ಕೊಂಚ ಭಿನ್ನ ಪಾತ್ರ ಸಿಕ್ಕಿದೆ. ಆ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. ಪಾತ್ರಕ್ಕಾಗಿ ಅವರು ಬದಲಾದ ರೀತಿಯೂ ಇಷ್ಟವಾಗುತ್ತದೆ. ಮುಖ್ಯವಾಗಿ ಆರಂಭದಿಂದ ಕೊನೆವರೆಗಿನ ಅವರ ಎನರ್ಜಿ ಇಷ್ಟವಾಗುತ್ತದೆ. ನಾಯಕಿ ರಶ್ಮಿಕಾಗೆ ಹೆಚ್ಚಿನ ಅವಕಾಶವಿಲ್ಲ ಮತ್ತು ಹೆಚ್ಚು ಮೋಡಿ ಮಾಡುವುದಿಲ್ಲ. ಉಳಿದಂತೆ ಸಂಪತ್‌, ರವಿಶಂಕರ್‌, ಪವಿತ್ರಾ ಲೋಕೇಶ್‌, ಧನಂಜಯ್‌, ಚಿಕ್ಕಣ್ಣ, ಮಯೂರಿ, ರಾಘವೇಂದ್ರ ರಾಜ್‌ಕುಮಾರ್‌ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಂದನ್‌ ಶೆಟ್ಟಿಯ ಹಾಡುಗಳು ಮಾಸ್‌ ಪ್ರಿಯರ ಮನ ಗೆಲ್ಲುತ್ತವೆ.

ರವಿಪ್ರಕಾಶ್ ರೈ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.