“ದ್ರೋಣ’ನ ಹೊಡೆದಾಟ ಜೊತೆಗೆ ನೀತಿಪಾಠ


Team Udayavani, Mar 7, 2020, 7:02 AM IST

drona

ಸರ್ಕಾರಿ ಶಾಲೆಗಳು ಯಾಕೆ ಇನ್ನೂ ಹಿಂದುಳಿದಿವೆ? ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫ‌ಲಿತಾಂಶ ಬರದಿರಲು ಕಾರಣವೇನು? ಸರ್ಕಾರಿ ಶಾಲೆಗಳಲ್ಲಿ ಇರುವ ಅವ್ಯವಸ್ಥೆಗೆ ಕಾರಣಗಳೇನು? ಸರ್ಕಾರಿ ಶಾಲೆಗಳ ಮಕ್ಕಳ ಮನಸ್ಥಿತಿ ಹೇಗಿರುತ್ತದೆ? ಒಬ್ಬ ಶಿಕ್ಷಕನಾದವನು ತನ್ನ ಇಚ್ಛೆಯಿಂದ ಸರ್ಕಾರಿ ಶಾಲೆಯನ್ನು, ಅಲ್ಲಿರುವ ಮಕ್ಕಳನ್ನು ಹೇಗೆಲ್ಲ ಬದಲಾಯಿಸಬಲ್ಲ…..ಇದೆಲ್ಲ ಸಂಗತಿಗಳನ್ನು ಇಟ್ಟುಕೊಂಡು ಈ ವಾರ ತೆರೆಮೇಲೆ ಬಂದಿರುವ ಚಿತ್ರ “ದ್ರೋಣ’.

ಪ್ರಸ್ತುತ ಚರ್ಚೆಯಲ್ಲಿರುವ ಒಂದು ಗಂಭೀರ ವಿಷಯವನ್ನು ಇಟ್ಟುಕೊಂಡು, ಅದಕ್ಕೊಂದಿಷ್ಟು ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಸೇರಿಸಿ, ಮಾಸ್‌ ಮತ್ತು ಕ್ಲಾಸ್‌ ಎರಡೂ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂಥ ಒಂದಷ್ಟು ಸಿದ್ಧ ಸೂತ್ರವನ್ನು ಇಟ್ಟುಕೊಂಡು “ದ್ರೋಣ’ನನ್ನು ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪ್ರಮೋದ್‌ ಚಕ್ರವರ್ತಿ. ಹೀಗಾಗಿ ಚಿತ್ರದ ವಸ್ತು ವಿಷಯ ಸ್ವಲ್ಪ ಅಪರೂಪದ್ದು ಎನ್ನಬಹುದಾದರೂ, ಅದನ್ನು ನಿರೂಪಿಸಿರುವ ರೀತಿ ಅಪರೂಪದ್ದು ಅಥವಾ ಹೊಸತು ಎನ್ನುವಂತಿಲ್ಲ.

ಚಿತ್ರಕಥೆಯಲ್ಲಿ ಬರುವ ಕೆಲ ದೃಶ್ಯಗಳನ್ನು ನೋಡಿದಾಗ, ಅಲ್ಲಲ್ಲಿ ಬೇರೆ ಭಾಷೆಯ ಚಿತ್ರಗಳ ಛಾಯೆ ಇಣುಕಿ ಹೋದಂತೆ ಭಾಸವಾಗುತ್ತದೆ. “ದ್ರೋಣ’ನಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯವನ್ನು ಇನ್ನೂ ಪರಿಣಾಮಕಾರಿಯಾಗಿ ಚಿತ್ರಕಥೆ, ನಿರೂಪಣೆಯಲ್ಲಿ ಹೇಳುವ ಸಾಧ್ಯತೆಯಿತ್ತು. ಆದರೆ, ಆ ಅವಕಾಶಗಳನ್ನು ನಿರ್ದೇಶಕರು ಬಿಟ್ಟುಕೊಟ್ಟಂತಿದೆ. ಸರ್ಕಾರಿ ಶಾಲೆಗಳ ವಸ್ತು ಸ್ಥಿತಿ ಚಿತ್ರಣ, ಖಾಸಗಿ ಶಾಲೆಗಳ ಪ್ರಭಾವ. ಪೋಷಕರು, ಶಿಕ್ಷಕರು, ಅಧಿಕಾರಿಗಳು, ರಾಜಕಾರಣಿಗಳು ಹೀಗೆ ವ್ಯವಸ್ಥೆಯೊಳಗೆ ಪ್ರತಿನಿಧಿಸುವ ಮತ್ತು ಪ್ರತಿಧ್ವನಿಸುವ ಯಾವ ಅಂಶಗಳೂ “ದ್ರೋಣ’ ಚಿತ್ರದಲ್ಲಿ ತಕ್ಷಣಕ್ಕೆ ನೋಡುಗರಿಗೆ ಕನೆಕ್ಟ್ ಆಗುವುದಿಲ್ಲ.

ವಿಚಾರಗಳು, ವ್ಯಕ್ತಿತ್ವಗಳು, ಹಿನ್ನೆಲೆ, ಕಥಾವಸ್ತು ಇವೆಲ್ಲವನ್ನು ಇಟ್ಟುಕೊಂಡು “ದ್ರೋಣ’ನನ್ನು ಇನ್ನೂ ಅರ್ಥ ಪೂರ್ಣವಾಗಿ ತೆರೆಮೇಲೆ ಕಟ್ಟಿಕೊಡಬಹುದಿತ್ತು. ಇನ್ನು ಕಲಾವಿದರ ಅಭಿನಯದ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಹತ್ತಾರು ವಿಭಿನ್ನ ಪಾತ್ರಗಳಿಗೆ ಜೀವತುಂಬಿ ಸೈ ಎನಿಸಿಕೊಂಡಿರುವ ನಟ ಶಿವರಾಜ ಕುಮಾರ್‌ “ದ್ರೋಣ’ ಚಿತ್ರದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಶಿಕ್ಷಕನ ಪಾತ್ರವಾದರೂ ಒಂದು ಕಡೆ ಮಕ್ಕಳಿಗೆ, ಸಮಾಜಕ್ಕೆ ಬೋಧನೆ ಮಾಡುವ ಶಿವಣ್ಣ ಮತ್ತೂಂದೆಡೆ ವಿಲನ್‌ಗಳ ಮೈ-ಕೈ ಮುರಿಯುತ್ತಿರುತ್ತಾರೆ. ಹೀಗೆ ಮಾಸ್‌ ಮತ್ತು ಕ್ಲಾಸ್‌ ಎರಡೂ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಶಿವಣ್ಣ ಪಾತ್ರವನ್ನು ಹೆಣೆದಿದ್ದಾರೆ ನಿರ್ದೇಶಕರು. ಎಂದಿನಂತೆ ತಮ್ಮ ಪಾತ್ರದಲ್ಲಿ ಅಷ್ಟೇ ಎನರ್ಜಿಟಿಕ್‌ ಆಗಿ ಕಾಣಿಸಿಕೊಂಡಿರುವ ಶಿವಣ್ಣ, ಆರಂಭದಿಂದ ಅಂತ್ಯದವರೆಗೂ ತೆರೆಯಲ್ಲಿ ಆವರಿಸಿಕೊಂಡು ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಉಳಿದಂತೆ ನಾಯಕಿ ಇರಬೇಕು ಎನ್ನುವ ಕಾರಣಕ್ಕಾಗಿಯೇ ನಟಿ ಇನಿಯಾ ಅವರನ್ನು ಕೆಲ ಸನ್ನಿವೇಶಗಳಲ್ಲಿ ಕರೆತಂದಂತಿದೆ.

ರಂಗಾಯಣ ರಘು, ಬಾಬು ಹಿರಣ್ಣಯ್ಯ, ಸ್ವಾತಿ ಶರ್ಮಾ ತಮ್ಮ ಪಾತ್ರವನ್ನು ಅಂದಗಾಣಿಸಿದ್ದಾರೆ. ಇನ್ನುಳಿದಂತೆ ಬಹುತೇಕ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಚ್ಚುಕಟ್ಟು ಅಭಿನಯ. ತಾಂತ್ರಿಕವಾಗಿ ಚಿತ್ರದ ಛಾಯಾಗ್ರಹಣ, ಸಂಕಲನ ಕಾರ್ಯ “ದ್ರೋಣ’ನಿಗೆ ತೆರೆಮೇಲೆ ಒಂದಷ್ಟು ಮೆರುಗು ನೀಡಿದೆ. ಚಿತ್ರದ ಹಾಡುಗಳು ಹಾಗೆ ಬಂದು, ಹೀಗೆ ಹೋಗುವಂತಿದ್ದರಿಂದ ಅಷ್ಟಾಗಿ ಕಿವಿಯಲ್ಲಾಗಲಿ, ಮನಸ್ಸಿನಲ್ಲಿ ಉಳಿಯುವುದಿಲ್ಲ.

ಚಿತ್ರ: ದ್ರೋಣ
ನಿರ್ಮಾಣ: ಡಾಲ್ಫಿನ್‌ ಮೀಡಿಯಾ ಹೌಸ್‌
ನಿರ್ದೇಶನ: ಪ್ರಮೋದ್‌ ಚಕ್ರವರ್ತಿ
ತಾರಾಗಣ: ಶಿವರಾಜಕುಮಾರ್‌, ಇನಿಯಾ, ರಂಗಾಯಣ ರಘು, ಬಾಬು ಹಿರಣ್ಣಯ್ಯ, ಸ್ವಾತಿ ಶರ್ಮಾ, ರವಿ ಕಿಶನ್‌, ನಾರಾಯಣ ಸ್ವಾಮಿ, ರೇಖಾದಾಸ್‌, ರಾಮಸ್ವಾಮಿ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.