Movie review: ಕರ್ಮದ ಹಿಂದೆ ರಾಮಾಚಾರಿ ಹುಡುಕಾಟ!


Team Udayavani, Apr 8, 2023, 1:09 PM IST

ramachari 2.0

ಮಾಡಿದ ಪ್ರತಿ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಅದರ ಪ್ರತಿಫ‌ಲಗಳನ್ನು ಪಡೆಯಲೇಬೇಕು. ಕರ್ಮ ಎಂಬುದು ಯಾರನ್ನೂ ಬಿಡುವುದಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು ಎಂಬುದು ಕರ್ಮ ಸಿದ್ಧಾಂತದ ನಿಯಮ. ಇಂಥದ್ದೇ ಕರ್ಮ ಸಿದ್ಧಾಂತದ ಒಂದು ಎಳೆಯನ್ನು ಇಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ “ರಾಮಾಚಾರಿ 2.0′

ಕೆಲವರ ಜೀವನದಲ್ಲಿ ಅದಾಗಲೇ ನಡೆದು ಹೋಗಿರುವ ಕೆಲವು ಘಟನೆಗಳು, ತನ್ನ ಜೀವನದಲ್ಲೂ ಕಾಕತಾಳೀಯ ಎಂಬಂತೆ ಮರುಕಳಿಸುತ್ತಿರುವುದನ್ನು ಗಮನಿಸುವ ನಾಯಕ ರಾಮಾಚಾರಿ, ಅದರ ಹಿಂದಿನ ರಹಸ್ಯವನ್ನು ಹುಡುಕುವ ಕೆಲಸಕ್ಕೆ ಮುಂದಾಗುತ್ತಾನೆ. ಈ ಹುಡುಕಾಟದಲ್ಲಿ ನಾಯಕ ರಾಮಾಚಾರಿಗೆ ಏನೇನು ಅಚ್ಚರಿಗಳು ಎದುರಾಗುತ್ತವೆ? ಅದೆಲ್ಲದಕ್ಕೂ ಕಾರಣವೇನು? ಎಂಬುದೇ “ರಾಮಾಚಾರಿ 2.0′ ಸಿನಿಮಾದ ಕಥಾಹಂದರ.

ರಾಮಾಚಾರಿಯ ಈ ಹುಡುಕಾಟ ಹೇಗಿರುತ್ತದೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ, ಖಂಡಿತವಾಗಿಯೂ ನೀವು “ರಾಮಾಚಾರಿ 2.0′ ಸಿನಿಮಾ ನೋಡಲು ಥಿಯೇಟರ್‌ ಕಡೆಗೆ ಮುಖ ಮಾಡಬಹುದು. ಕರ್ಮ ಸಿದ್ಧಾಂತ, ಸೈಕಾಲಜಿ, ಮನುಷ್ಯನ ವರ್ತನೆ ಎಲ್ಲವನ್ನೂ ಜೋಡಿಸಿ, ಅದಕ್ಕೊಂದಷ್ಟು ಮಾಸ್‌ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಸೇರಿಸಿ “ರಾಮಾಚಾರಿ 2.0′ ಸಿನಿಮಾವನ್ನು ಸಸ್ಪೆನ್ಸ್‌ -ಥ್ರಿಲ್ಲರ್‌ ಶೈಲಿಯಲ್ಲಿ ತೆರೆಮೇಲೆ ತಂದಿದ್ದಾರೆ ನಾಯಕ ನಟ ಕಂ ನಿರ್ದೇಶಕ ತೇಜ್‌.

ಇನ್ನು ತೆರೆಮುಂದೆ ಮಂಡ್ಯ ಸೊಗಡಿನ ಹುಡುಗನಾಗಿ ಮಿಂಚಿರುವ ತೇಜ್‌, ಅಪ್ಡೆàಟ್‌ ರಾಮಾಚಾರಿಯಾಗಿ ಗಮನ ಸೆಳೆಯುತ್ತಾರೆ. ತೆರೆಮುಂದೆ ಮತ್ತು ತೆರೆಹಿಂದೆ ಮಾಸ್‌ ಆಡಿಯನ್ಸ್‌ ಮುಟ್ಟುವಂತೆ ಮಾಡಲು ತೇಜ್‌ ಹಾಕಿರುವ ಪರಿಶ್ರಮ ಸಿನಿಮಾದಲ್ಲಿ ಕಾಣುತ್ತದೆ. ಉಳಿದಂತೆ ಹಿರಿಯ ನಟ ರಾಘವೇಂದ್ರ ರಾಜಕುಮಾರ್‌ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿ ಕೌಸ್ತುಭ ಮಣಿ ಒಂದು ಹಾಡು – ಕೆಲ ದೃಶ್ಯಗಳಿಗಷ್ಟೇ ಸೀಮಿತವಾದರೂ, ಮೊದಲ ನೋಟದಲ್ಲೇ ಗಮನ ಸೆಳೆಯುತ್ತಾರೆ. ಕಲಾವಿರಾದ ವಿಜಯ್‌ ಚೆಂಡೂರ್‌, ಸ್ಪರ್ಶ ರೇಖಾ, ಸ್ವಾತಿ, ಚಂದನಾ, ಪ್ರಭು ಸೂರ್ಯ ಸೇರಿದಂತೆ ಬಹುತೇಕರು ಪಾತ್ರಕ್ಕೆ ತಕ್ಕಂತೆ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ಸಿನಿಮಾದ ಛಾಯಾಗ್ರಹಣ ರಾಮಾಚಾರಿಯನ್ನು ಮಾಸ್‌ ಲುಕ್‌ನಲ್ಲಿ ತೋರಿಸಲು ಯಶಸ್ವಿಯಾಗಿದೆ.

ಸಂಕಲನ ಇನ್ನಷ್ಟು ಹರಿತವಾಗಿದ್ದರೆ, ರಾಮಾಚಾರಿಯ ಓಟಕ್ಕೆ ಇನ್ನಷ್ಟು ವೇಗ ಸಿಗುತ್ತಿತ್ತು. ಕಲರಿಂಗ್‌ ಮತ್ತು ಬ್ಯಾಗ್ರೌಂಡ್‌ ಕಡೆಗೆ ಚಿತ್ರತಂಡ ಇನ್ನಷ್ಟು ಗಮನ ಕೊಡಬಹುದಿತ್ತು. ಒಂದೆರಡು ಹಾಡುಗಳು ಥಿಯೇಟರ್‌ ಹೊರಗೂ ರಾಮಾಚಾರಿಯನ್ನು ಗುನುಗುವಂತೆ ಮಾಡಿವೆ. ಕ್ಲಾಸ್‌ ಕಥೆಯ ಜೊತೆಗೆ ಮಾಸ್‌ ಲುಕ್‌ನಲ್ಲಿ ತೆರೆಗೆ ಬಂದಿರುವ “ರಾಮಾಚಾರಿ 2.0′ ಸಿನಿಮಾವನ್ನು ಒಮ್ಮೆ ನೋಡಿ ಕಣ್ತುಂಬಿಕೊಳ್ಳಬಹುದು.

ಟಾಪ್ ನ್ಯೂಸ್

1-asdasda

World cup cricket ವೈಭವ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಆಸ್ಟ್ರೇಲಿಯ

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri 2 review

Totapuri 2 review; ತೋತಾಪುರಿಯ ‘ಘಮ’ ಮತ್ತು ಕಾಡುವ ‘ಸುಮ’!

baana daariyalli review

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

Dighvijay Movie review;

Dighvijaya Movie review; ರೈತಪರ ಹೋರಾಟಕ್ಕೆ ದಿಗ್ವಿಜಯ

Olave Mandara 2 movie review

Olave Mandara 2 movie review; ಪ್ರೇಮದೂರಿನ ಕರೆಯೋಲೆ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

1-asdasda

World cup cricket ವೈಭವ ವಿಶ್ವಕಪ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಆಸ್ಟ್ರೇಲಿಯ

H 2

ಮಂಗಳೂರಿನಲ್ಲಿ ಹಸುರು ಹೈಡ್ರೋಜನ್‌ ಘಟಕ?- ವಿವಿಧ ಕಂಪೆನಿಗಳ ಆಸಕ್ತಿ; NMPA ಸನಿಹ ಸರ್ವೇ

KHALISTANI MOVEMENT

Khalistani: ಇಂಗ್ಲೆಂಡ್‌ನಲ್ಲೂ ಖಲಿಸ್ಥಾನಿ ಪುಂಡಾಟ

rain kerala

Rain: ಕರ್ನಾಟಕ, ಕೇರಳ: ಉತ್ತಮ ವರ್ಷಧಾರೆ

hike

Oct 1: ಗೇಮಿಂಗ್‌, ಆಸ್ತಿ ನೋಂದಣಿ ದುಬಾರಿ: ಜನನ ಪ್ರಮಾಣಪತ್ರವೊಂದೇ ಎಲ್ಲದಕ್ಕೂ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.