ಚಿತ್ರವಿಮರ್ಶೆ: ಅವತಾರಗಳ ಅಬ್ಬರದಲ್ಲಿ ಮನ ಗೆಲ್ಲುವ ರಾಬರ್ಟ್‌!


Team Udayavani, Mar 12, 2021, 8:51 AM IST

robert

“ಒಬ್ರ ಲೈಫ‌ಲ್ಲಿ ನಾವ್‌ ಹೀರೋ ಆಗಬೇಕಾದ್ರೆ, ಮತ್ತೊಬ್ಬರ ಲೈಫ‌ಲ್ಲಿ ನಾವ್‌ ವಿಲನ್‌ ಆಗಲೇಬೇಕು ….’ – ಹೀಗೆ “ರಾಬರ್ಟ್‌’ ಹೇಳುವ ಹೊತ್ತಿಗೆ ಪ್ರೇಕ್ಷಕರಿಗೆ ಆತನ ಒಂದು ಮುಖದ ದರ್ಶನ ಆಗಿರುತ್ತದೆ.

ರಾಬರ್ಟ್‌ ಎಂಬ ಬೆಂಕಿ ಚೆಂಡು ತನ್ನ ಒಂದು ಅವತಾರವನ್ನು ತೋರಿಸಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಯಾಗಿರುತ್ತದೆ. ಆದರೆ, ಅಷ್ಟಕ್ಕೆ “ರಾಬರ್ಟ್‌’ ಆರ್ಭಟ ಮುಗಿಯೋದಿಲ್ಲ. ಮತ್ತೂಂದು ಅವತಾರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾನೆ ಈ ರಾಬರ್ಟ್‌.

ಹಾಗಾದರೆ, ಆ ಅವತಾರವೇನು ಎಂಬ ಕುತೂಹಲ ನಿಮಗಿದ್ದರೆ ನೀವು ಸಿನಿಮಾ ನೋಡಲೇಬೇಕು. ದರ್ಶನ್‌ ನಟನೆಯ “ರಾಬರ್ಟ್‌’ ಸಿನಿಮಾದ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಇದು ದರ್ಶನ್‌ ಅಭಿಮಾನಿಗಳಿಗೆ ಹಬ್ಬದೂಟ. ಆ ಮಟ್ಟಿಗೆ ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌ ಒಂದು ನೀಟಾದ, ಎಲ್ಲೂ ಬೋರ್‌ ಹೊಡೆಸದ, ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಸಾಗುವ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇಲ್ಲಿ ಹೇಳಲೇಬೇಕಾದ ಮತ್ತೂಂದು ವಿಷಯವೆಂದರೆ ಇದು ಕೇವಲ ದರ್ಶನ್‌ ಫ್ಯಾನ್ಸ್‌ಗಾಗಿಯೇ ಮಾಡಿದ ಸಿನಿಮಾ ಎನ್ನುವಂತಿಲ್ಲ. ಅಭಿಮಾನಿ ಅಲ್ಲದೆಯೂ ಒಂದು ಒಳ್ಳೆಯ ಕಮರ್ಷಿಯಲ್‌ ಸಿನಿಮಾವನ್ನು ಫ್ಯಾಮಿಲಿ ಜೊತೆ ಕುಳಿತು ನೋಡಬಯಸುವವರ ಮೊದಲ ಆಯ್ಕೆ “ರಾಬರ್ಟ್‌’ ಆಗುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಕಾರಣ ಸಿನಿಮಾದಲ್ಲಿರುವ ಅಂಶಗಳು. ಸಾಮಾನ್ಯವಾಗಿ ಸ್ಟಾರ್‌ ಸಿನಿಮಾಗಳಲ್ಲಿ ಕಥೆ ಇರಲ್ಲ, ಸ್ಟಾರ್‌ ನಟರಿಗೂ ನಟನೆಗೂ ಅವಕಾಶ ಸಿಗಲ್ಲ ಎಂಬ ಮಾತಿದೆ. ಆದರೆ ಈ ಮಾತು “ರಾಬರ್ಟ್‌’ನಿಂದ ದೂರ.

ಏಕೆಂದರೆ ಇಡೀ ಸಿನಿಮಾ ಒಂದು ಗಟ್ಟಿಕಥೆಯ ಜೊತೆ ಸಾಗುತ್ತದೆ ಮತ್ತು ಪ್ರತಿ ನಟರಿಗೂ ಇಲ್ಲಿ ಸ್ಕೋರ್‌ ಮಾಡಲು ಅವಕಾಶವಿದೆ. ಈ ಸಿನಿಮಾ ದರ್ಶನ್‌ ಅಭಿಮಾನಿಗಳಿಗೆ ಸ್ವಲ್ಪ ಹೆಚ್ಚೇ ಖುಷಿ ನೀಡುತ್ತದೆ ಎಂದರೆ ಅದಕ್ಕೆ ಕಾರಣ ದರ್ಶನ್‌ ಅವರ ಈ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರೋದು. ಆ ಮಟ್ಟಿಗೆ “ರಾಬರ್ಟ್‌’ ಕ್ಲಾಸಿಗೂ -ಮಾಸಿಗೂ ಬಾಸ್‌…

ಮುಖ್ಯವಾಗಿ “ರಾಬರ್ಟ್‌’ ಒಂದು ಮೇಕಿಂಗ್‌ ಸಿನಿಮಾ. ತಾಂತ್ರಿಕವಾಗಿ ಶ್ರೀಮಂತವಾಗಿರುವ ಜೊತೆಗೆ ಪ್ರತಿ ಫ್ರೇಮ್‌ನಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ. ಆದರೆ, ಸೆಟ್‌ವರ್ಕ್‌ನ ಶ್ರಮ, ಪೂರ್ವತಯಾರಿ ತೆರೆಮೇಲೆ ಕಂಗೊಳಿಸಿದೆ. ಸೆಟ್‌ ಶೈಲಿ, ಕಲರ್‌, ಕಲಾವಿದರ ಕಾಸ್ಟ್ಯೂಮ್‌… ಹೀಗೆ ಪ್ರತಿಯೊಂದು ವಿಷಯದಲ್ಲೂ ಗಮನಹರಿಸಿದ್ದಾರೆ. ಸಿನಿಮಾದಲ್ಲಿ ಬರುವ ಕಮಿಷನರ್‌ ಆಫೀಸ್‌, ಗ್ಯಾರೇಜ್‌, ರಾಮ- ರಾವಣ ಸೆಟ್‌ಗಳು … ತುಂಬಾ ಸ್ಟೈಲಿಶ್‌ ಆಗಿ ಮೂಡಿಬಂದಿವೆ. ಇದೇ ಕೆಲಸ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ಎದ್ದು ಕಾಣುತ್ತಿದೆ. ಸೂಕ್ಷ ¾ ಅಂಶಗಳ ಬಗ್ಗೆಯೂ ಗಮನಹರಿಸಿ ಕಥೆಯ ಲಿಂಕ್‌ ಮಿಸ್‌ ಆಗದಂತೆ ನೋಡಿಕೊಂಡಿದ್ದಾರೆ ತರುಣ್‌.

ಚಿತ್ರದಲ್ಲಿನ ಸಂಭಾಷಣೆಗಳು ತುಂಬಾ ಹರಿತವಾಗಿವೆ. ಹಾಗಂತ ಇಲ್ಲಿ ಉದ್ದುದ ಡೈಲಾಗ್‌ಗಳಿಲ್ಲ. ಇರುವ ಡೈಲಾಗ್‌ಗಳು ಪಂಚಿಂಗ್‌ ಆಗಿವೆ. ಚಿತ್ರದಲ್ಲಿ ಅಲ್ಲಲ್ಲಿ ಕೆಲವು ಬರುವ ಸನ್ನಿವೇಶಗಳಲ್ಲಿ ಸಂದೇಶವೂ ಇದೆ. ಅದರಲ್ಲೊಂದು ತೃತೀಯ ಲಿಂಗಿಗಳ ಕುರಿತಾಗಿ. ತೃತೀಯ ಲಿಂಗಿಗಳನ್ನು ನಡೆಸಿಕೊಳ್ಳುವ ಕುರಿತಾಗಿ ಚಿತ್ರದಲ್ಲೊಂದು ದೃಶ್ಯವಿದೆ, ಜೊತೆಗೊಂದು ಡೈಲಾಗ್‌ ಕೂಡಾ ಇದ್ದು, ಇದು ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ರಾಮ, ರಾವಣ, ಹನುಮಂತ… ಬ್ಯಾಕ್‌ ಡ್ರಾಪ್‌ನಡಿ ಚಿತ್ರ ಸಾಗುವುದು ಮತ್ತೂಂದು ವಿಶೇಷ.

ನಿರ್ದೇಶಕ ತರುಣ್‌ ಎಲ್ಲವನ್ನು ಹದವಾದ ಮಿಶ್ರಣದೊಂದಿಗೆ ಬಡಿಸಿದ್ದಾರೆ. ಅನಗತ್ಯವಾದ ಕಾಮಿಡಿ, ಫೈಟ್‌, ಪಾತ್ರಗಳಿಂದ ಸಿನಿಮಾವನ್ನು ಮುಕ್ತವಾಗಿಸಿ “ರಾಬರ್ಟ್‌’ನ ತೂಕ ಹೆಚ್ಚಿಸಿದ್ದಾರೆ. ನಿರ್ಮಾಪಕರ ಅಷ್ಟೂ ಹಣವನ್ನು ತೆರೆಮೇಲೆ ಅಚ್ಚುಕಟ್ಟಾಗಿ ಜೋಡಿಸಿರುವುದು ಕಣ್ಣಿಗೆ ಹಬ್ಬವಾಗಿದೆ. ಈ ಚಿತ್ರದ ಹೈಲೈಟ್‌ಗಳಲ್ಲಿ ಹಾಡು ಹಾಗೂ ಫೈಟ್‌ ಅನ್ನು ಪರಿಗಣಿಸಲೇಬೇಕು. ಇಲ್ಲಿನ ಪ್ರತಿ ಫೈಟ್‌ ಕೂಡಾ ಸಖತ್‌ ಸ್ಟೈಲಿಶ್‌ ಆಗಿದೆ ಮತ್ತು ದರ್ಶನ್‌ ಅದರಲ್ಲಿ ಮಿಂಚಿದ್ದಾರೆ.

ದರ್ಶನ್‌ ಅವರ ಕೆರಿಯರ್‌ನಲ್ಲಿ ಇದೊಂದು ಹೊಸ ಬಗೆಯ ಸಿನಿಮಾ ಎಂದರೆ ತಪ್ಪಲ್ಲ. ಈ ಹಿಂದೆ ಅವರು ಸಾಕಷ್ಟು ಆ್ಯಕ್ಷನ್‌ ಸಿನಿಮಾಗಳನ್ನು ಮಾಡಿರಬಹುದು. ಆದರೆ, “ರಾಬರ್ಟ್‌ ಮಾತ್ರ ಅವೆಲ್ಲದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಈ ಸಿನಿಮಾಕ್ಕಾಗಿ ದರ್ಶನ್‌ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.

ಚಿತ್ರದಲ್ಲಿ ಎರಡು ಶೇಡ್‌ನ‌ ಪಾತ್ರವಿದೆ. ಎರಡರಲ್ಲೂ ದರ್ಶನ್‌ ಇಷ್ಟವಾಗುತ್ತಾರೆ. ಡ್ಯಾನ್ಸ್‌ನಲ್ಲೂ ದರ್ಶನ್‌ ಮಿಂಚಿದ್ದಾರೆ. ನಾಯಕಿ ಆಶಾ ಭಟ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ನಟನೆಗಿಂತ ಹಾಡಿನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಉಳಿದಂತೆ ನಟ ವಿನೋದ್‌ ಪ್ರಭಾಕರ್‌, ರವಿಶಂಕರ್‌, ಜಗಪತಿ ಬಾಬು, ಶಿವರಾಜ್‌ ಕೆ ಆರ್‌ ಪೇಟೆ, ಚಿಕ್ಕಣ್ಣ … ಹೀಗೆ ಎಲ್ಲರೂ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರ ತಾಂತ್ರಿಕವಾಗಿ ಹೆಚ್ಚು ಶ್ರೀಮಂತವಾಗಿದೆ ಎಂದರೆ ಅದಕ್ಕೆ ಕಾರಣ ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಛಾಯಾಗ್ರಾಹಕ ಸುಧಾಕರ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಹಾಗೂ ಹಿನ್ನೆಲೆ ಸಂಗೀತ ನೀಡಿದ ಹರಿಕೃಷ್ಣ. ಪ್ರತಿಯೊಬ್ಬರ ಶ್ರಮ ಈ ಸಿನಿಮಾವನ್ನು ಸುಂದರವನ್ನಾಗಿಸಿದೆ.

 

ಚಿತ್ರ: ರಾಬರ್ಟ್‌

ರೇಟಿಂಗ್‌: ****

ನಿರ್ಮಾಣ: ಉಮಾಪತಿ ಶ್ರೀನಿವಾಸ್‌ ಗೌಡ

ನಿರ್ದೇಶನ: ತರುಣ್‌ ಕಿಶೋರ್‌ ಸುಧೀರ್‌

ತಾರಾಗಣ: ದರ್ಶನ್‌, ಆಶಾ ಭಟ್‌, ವಿನೋದ್‌ ಪ್ರಭಾಕರ್‌, ರವಿಶಂಕರ್‌, ಜಗಪತಿ ಬಾಬು, ಶಿವರಾಜ್‌ ಕೆ ಆರ್‌ ಪೇಟೆ, ಚಿಕ್ಕಣ್ಣ ಮತ್ತಿತರರು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

Marigold movie review

Marigold movie review; ಥ್ರಿಲ್ಲರ್ ಹಾದಿಯಲ್ಲಿ ಗೋಲ್ಡನ್ ರೈಡ್

Matinee movie review

Matinee Review; ಪ್ರೀತಿಯ ಅರಮನೆಯಲ್ಲಿ ಆತ್ಮದ ಆಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.