‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!


Team Udayavani, Nov 27, 2021, 10:09 AM IST

sakath movie

ಒಂದು ಕಡೆ ಪ್ರೀತಿಯ ಕನಸು, ಮತ್ತೂಂದೆಡೆ ಸಾವೊಂದಕ್ಕೆ ನ್ಯಾಯ ಕೊಡಿಸುವ ಮನಸ್ಸು… ಈ ಇಬ್ಬಗೆಯಲ್ಲಿ ಸಣ್ಣದೊಂದು ಪೇಚಾಟ, ಜೊತೆ ಜೊತೆಗೆ ನಗೆಬುಗ್ಗೆ… ಈ ವಾರ ತೆರೆಕಂಡಿರುವ “ಸಖತ್‌’ ಸಿನಿಮಾವನ್ನು ಒನ್‌ಲೈನ್‌ ನಲ್ಲಿ ಹೀಗೆ ಹೇಳಬಹುದು. ನಿರ್ದೇಶಕ ಸುನಿ ಒಂದು ಮಜವಾದ ಜೊತೆಗೆ ಒಂದಷ್ಟು ಗಂಭೀರ ಅಂಶಗಳನ್ನು ಸೇರಿಸಿ “ಸಖತ್‌’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಮುಖ್ಯವಾಗಿ ಇಡೀ ಸಿನಿಮಾ ಒಂದು ಅಪಘಾತದ ಸುತ್ತ ಸಾಗುತ್ತದೆ. ಆ ಅಪಘಾತ ಹೇಗಾಯಿತು ಮತ್ತು ಯಾಕಾಯಿತು ಎಂಬ ಅಂಶ ಹಾಗೂ ಅದರ ಸುತ್ತ ನಡೆಯುವ ಕೋರ್ಟ್‌ ಡ್ರಾಮಾ ಈ ಸಿನಿಮಾದ ಹೈಲೈಟ್‌.

ಚಿತ್ರದಲ್ಲಿ ಗಣೇಶ್‌ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಇಡೀ ಸಿನಿಮಾದಲ್ಲಿ ಅವರು ಅಂಧನಾಗಿಯೇ ಇರುತ್ತಾರಾ ಎಂದು ನೀವು ಕೇಳಬಹುದು. ಅದಕ್ಕೆ ನೀವು ಸಿನಿಮಾವನ್ನೇ ನೋಡಬೇಕು. ಚಿತ್ರ ಹಾಸ್ಯದಿಂದ ಆರಂಭವಾಗಿ ಅಲ್ಲಲ್ಲಿ ಒಂದಷ್ಟು ಟ್ವಿಸ್ಟ್‌-ಟರ್ನ್ಗಳನ್ನು ಪಡೆದುಕೊಂಡು ಚಿತ್ರ ಸಾಗುತ್ತದೆ. ಸುನಿ ಸಿನಿಮಾ ಎಂದಮೇಲೆ ಅಲ್ಲೊಂದಿಷ್ಟು ಕಚಗುಳಿ ಇಡುವ ಡೈಲಾಗ್‌ಗಳು ಇದ್ದೇ ಇರುತ್ತವೆ. ಸಣ್ಣ ಸಣ್ಣ ಸನ್ನಿವೇಶಗಳಲ್ಲಿ ದೊಡ್ಡ ನಗು ಉಕ್ಕಿಸುವ ಸಾಮರ್ಥ್ಯ ಸುನಿಗಿದೆ. ಅದು ಈ ಸಿನಿಮಾದಲ್ಲೂ ಮುಂದುವರೆದಿದೆ. ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ “ನಮ್‌ ಸಿನಿಮಾಕ್ಕೆ ಯಾರೂ ಕೇಸ್‌ ಹಾಕ್ಬೇಡಿ…’ ಎಂದು ಹೇಳುವುದರಿಂದ ಆರಂಭವಾಗುವ ಪಂಚ್‌ ಇಡೀ ಸಿನಿಮಾದುದ್ದಕ್ಕೂ ಸಾಗಿಬಂದಿದೆ.

ಇದನ್ನೂ ಓದಿ:ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

ಈ ಸಿನಿಮಾವನ್ನು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ ಎಂದು ಹೇಳುವುದು ಕಷ್ಟ. ಆದರೆ, ಗಣೇಶ್‌ ಈ ಸಿನಿಮಾದಲ್ಲಿ ಅಲ್ಲಲ್ಲಿ ಲವರ್‌ಬಾಯ್‌ ಆಗಿ ಕಾಣಿಸಿ ಕೊಂಡಿದ್ದಾರೆ. ಹೆಚ್ಚೇನು ಗಂಭೀರವಲ್ಲದ ಕಥೆಯನ್ನು ಸುನಿ ಫ‌ನ್‌ ಆಗಿಯೇ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಸುನಿ ಚಿತ್ರಕಥೆಯಲ್ಲಿ ಆಟವಾಡಿದ್ದಾರೆ. ಈ ಹಾದಿಯಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶವೂ ಇತ್ತು. ಅದರಾಚೆ ಹೇಳುವುದಾದರೆ “ಸಖತ್‌’ ಮಜಾ ಕೊಡೋ ಸಿನಿಮಾ.

ನಕ್ಕು ನಗಿಸುವ ಡೈಲಾಗ್‌, ಸುಂದರವಾದ ಹಾಡು, ಮಜ ಕೊಡುವ ರಿಯಾಲಿಟಿ ಶೋ ವೇದಿಕೆ, ಕುತೂಹಲ ಹುಟ್ಟಿಸುವ ಕೋರ್ಟ್‌ ರೂಂ ಡ್ರಾಮಾ… ಹೀಗೆ ವಿವಿಧ ಆಯಾಮಗಳಲ್ಲಿ “ಸಖತ್‌’ ಸಿನಿಮಾ ನಿಮಗೆ ನಗೆ ಉಕ್ಕಿಸುತ್ತಾ ಸಾಗುತ್ತದೆ. ಹಾಗಾದರೆ ಚಿತ್ರ ಯಾವ ಜಾನರ್‌ಗೆ ಸೇರಿದ ಸಿನಿಮಾ ಎಂದು ನೀವು ಕೇಳಿದರೆ ಉತ್ತರಿಸೋದು ಕಷ್ಟ. ಏಕೆಂದರೆ ಇದು ಯಾವುದೇ ಒಂದು ಜಾನರ್‌ ಗೆ ಸೀಮಿತವಾದ ಸಿನಿಮಾವಲ್ಲ. ಅಷ್ಟೊಂದು ಅಂಶಗಳೊಂದಿಗೆ ಸಿನಿಮಾ ಸಾಗುತ್ತದೆ.

ಇನ್ನು, ಇಡೀ ಸಿನಿಮಾದ ಹೈಲೈಟ್‌ ನಟ ಗಣೇಶ್‌. ತಮಗೆ ಸಿಕ್ಕ ಪಾತ್ರವನ್ನು ಅದ್ಭುತವಾಗಿ ನಿಭಾಹಿಸಿದ್ದಾರೆ. ತಮ್ಮ ಪಾತ್ರದಲ್ಲಿ ಎಷ್ಟು ಮಜ ಕೊಡಬಹುದೋ ಅಷ್ಟನ್ನೂ ಗಣೇಶ್‌ ಕೊಟ್ಟಿದ್ದಾರೆ. ಹಾಡುಗಳಲ್ಲಿ ಲವರ್‌ಬಾಯ್‌ ಆಗಿ ಗಣೇಶ್‌ ಸುಂದರ. ಚಿತ್ರದಲ್ಲಿ ಗಣೇಶ್‌ ಪುತ್ರ ವಿಹಾನ್‌ ನಟಿಸಿದ್ದು, ಮೊದಲ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ನಿಶ್ವಿ‌ಕಾ ಹಾಗೂ ಸುರಭಿ ಚಿತ್ರದಲ್ಲಿದ್ದಾರಷ್ಟೇ. ನಟನೆಗೆ ಹೆಚ್ಚೇನು ಅವಕಾಶವಿಲ್ಲ. ಉಳಿದಂತೆ ರಂಗಾಯಣ ರಘು, ಗಿರಿ, ರಾಘು, ಸಾಧುಕೋಕಿಲ, ಶೋಭರಾಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಫ್ಯಾಮಿಲಿ ಜೊತೆ ಜಾಲಿಯಾಗಿ ನಗಬೇಕಾದರೆ ನೀವು “ಸಖತ್‌’ ನೋಡಬಹುದು.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.