‘ಸಕುಟುಂಬ ಸಮೇತ’ ನೋಡುವ ಸಿನಿಮಾ!


Team Udayavani, May 22, 2022, 10:02 AM IST

‘ಸಕುಟುಂಬ ಸಮೇತ’ ನೋಡುವ ಸಿನಿಮಾ!

ಒಂದು ಸಿನಿಮಾ ಅಂದ್ರೆ ಅಲ್ಲೊಂದಷ್ಟು ಭರ್ಜರಿ ಆ್ಯಕ್ಷನ್‌ ದೃಶ್ಯಗಳು, ಖಡಕ್‌ ಡೈಲಾಗ್ಸ್‌, ಹೀರೋಗೆ ಬಿಲ್ಡಪ್‌, ಹೀರೋಯಿನ್‌ ಗೆ ಗ್ಲಾಮರಸ್‌ ಲುಕ್‌, ನಡುವೆ ಬೇಕೋ, ಬೇಡವೂ ಮೂರು-ನಾಲ್ಕು ಸಾಂಗ್ಸ್‌ ಇದು ಬಹುತೇಕ ಕಮರ್ಷಿಯಲ್‌ ಸಿನಿಮಾಗಳ ಸಿದ್ಧಸೂತ್ರ. ಇಂಥ ಸಿದ್ಧಸೂತ್ರ ಸೂತ್ರಗಳನ್ನು ಬದಿಗಿಟ್ಟು ತೆರೆಗೆ ಬರುವ ಸಿನಿಮಾಗಳು ವಿರಳ. ಅಂಥ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ ಈ ವಾರ ತೆರೆಗೆ ಬಂದಿರುವ “ಸಕುಟುಂಬ ಸಮೇತ’.

ಮೊದಲೇ ಹೇಳಿದಂತೆ, ಇಲ್ಲಿ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಲ್ಲಿ ನೋಡುವ ಯಾವ ಅಂಶಗಳೂ ತೆರೆಮೇಲೆ ಕಾಣಲು ಸಿಗುವುದಿಲ್ಲ. ಹಾಗಂತ ಇಲ್ಲಿ ಮನರಂಜನೆ ಏನೂ ಕೊರತೆಯಿಲ್ಲ. ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಸದ್ದುಗದ್ದಲವಿಲ್ಲದೆ ತಣ್ಣಗೆ ಕುಳಿತ ಪ್ರೇಕ್ಷಕರನ್ನು ನಿಧಾನವಾಗಿ ಆವರಿಸಿಕೊಳ್ಳುವ ಕಥಾಹಂದರ, ಅದಕ್ಕೆ ಜೀವ ತುಂಬುವ ಪಾತ್ರಗಳು ಮತ್ತು ನಿರೂಪಣೆ ಇಡೀ ಸಿನಿಮಾದ ಹೈಲೈಟ್ಸ್‌.

30 ವರ್ಷ ದಾಟಿದ ಮಧ್ಯಮ ವರ್ಗದ ಒಬ್ಬ ಹುಡುಗ ಮತ್ತು ಮೇಲು ಮಧ್ಯಮ ವರ್ಗದ ಹುಡುಗಿಯ ಮದುವೆ ಮಾತುಕತೆಯಿಂದ ಶುರುವಾಗುವ ಸಿನಿಮಾದ ಸರಳವಾದ ಕಥೆ, ಮುಂದೆ ಹೋಗುತ್ತಾ ಒಂದೊಂದೆ ಪಾತ್ರಗಳು ಮತ್ತು ಸನ್ನಿವೇಶಗಳ ಮೂಲಕ ಕೌಟುಂಬಿಕ ಸಂಬಂಧಗಳು, ಭಾವನೆಗಳು, ಬದುಕಿನ ಓಟ ಎಲ್ಲವನ್ನೂ ತೆರೆಮೇಲೆ ತೆರೆದಿಡುತ್ತ ಸಾಗುತ್ತದೆ. ನೋಡು ನೋಡುತ್ತಲೇ ಪ್ರೇಕ್ಷಕರ ಮನಸ್ಸಿನಲ್ಲಿ ಸಣ್ಣದೊಂದು ಪ್ರಶ್ನೆಯನ್ನು ಬಿಟ್ಟು ಸಿನಿಮಾ ಕ್ಲೈಮ್ಯಾಕ್ಸ್‌ಗೆ ಬಂದು ನಿಲ್ಲುತ್ತದೆ.

ಇದನ್ನೂ ಓದಿ:ನಟಿ Swathishta Krishnan ಬ್ಯೂಟಿಫುಲ್ ಫೋಟೋ ಗ್ಯಾಲರಿ

ಬೆರಳೆಣಿಯಷ್ಟು ಪಾತ್ರಗಳು, ಸೀಮಿತ ಲೊಕೇಶನ್‌, ಮನಮುಟ್ಟುವ ಮಾತುಗಳು ಎಲ್ಲವನ್ನೂ ಜೋಡಿಸಿ ಅಚ್ಚುಕಟ್ಟಾಗಿ “ಸಕುಟುಂಬ ಸಮೇತ’ರಾಗಿ ನೋಡುವಂತ ಸಿನಿಮಾವನ್ನು ತೆರೆಮೇಲೆ ತಂದಿರುವ ಚಿತ್ರತಂಡ ಪ್ರಯತ್ನ ಮೆಚ್ಚುವಂತಿದೆ.

ಸ್ವಲ್ಪ ಗಂಭೀರವೆನಿಸಿದರೂ, ಸಮಾಧಾನದಿಂದ ಕುಳಿತು ನೋಡುವವ ಮನಸ್ಸಿರುವ ಪ್ರೇಕ್ಷಕರಿಗೆ “ಸಕುಟುಂಬ ಸಮೇತ’ ಹೊಸಥರ ಯೋಚನೆಯೊಂದನ್ನು ಪ್ರೇಕ್ಷಕರ ಮುಂದಿಡುತ್ತದೆ. ಹಾಗಾಗಿ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳ ಹೊರತಾಗಿಯೂ ಹೊಸಥರದ, ಹೊಸ ಆಲೋಚನೆಯ ಸಿನಿಮಾಗಳನ್ನು ಆಸ್ವಧಿಸುವವರಿಗೆ “ಸಕುಟುಂಬ ಸಮೇತ’ ಇಷ್ಟವಾಗಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್‌.ಕೆ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.