ಸಿರಿ ಲಂಬೋದರ ವಿವಾಹ ವಿಮರ್ಶೆ: ಸಸ್ಪೆನ್ಸ್‌-ಕಾಮಿಡಿ ಉಣಬಡಿಸುವ ಎಸ್‌ಎಲ್‌ವಿ


Team Udayavani, Feb 18, 2023, 12:01 PM IST

Siri lambodara vivah review

“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಅನ್ನುವ ಮಾತು ಇಂದಿಗೂ ಪ್ರಸ್ತುತ. ಆದರೆ ಒಬ್ಬರು ಉತ್ತರ ಅಂದರೆ, ಇನ್ನೊಬ್ಬರು ದಕ್ಷಿಣ ಅನ್ನುವ ಜೋಡಿ ಸೇರಿ ಮದುವೆ ಮಾಡಿಸೋಕೆ ಹೊರಟರೆ ಆ ಮದುವೆ ಪರಿಸ್ಥಿತಿ ಏನಾಗಬಹುದು! ಹೌದು, ಇಂಥದ್ದೆ ಒಂದು ಕಾಮಿಡಿ ಜರ್ನಿಯ ಕಥೆ ಈ ವಾರ ತೆರೆಕಂಡ “ಎಸ್‌ಎಲ್‌ವಿ’ (ಸಿರಿ ಲಂಬೋದರ ವಿವಾಹ) ಚಿತ್ರ.

ಚಿತ್ರದ ನಾಯಕ ಸಂಜಯ್‌ ಮತ್ತು ನಾಯಕಿ ಲೀಲಾ ಇಬ್ಬರೂ ಬಾಲ್ಯ ಸ್ನೇಹಿತರು. ಮೇಲಾಗಿ ಇಬ್ಬರ ತಂದೆಯಂದಿರೂ ಸ್ನೇಹಿತರು. ಸ್ನೇಹಿತರಾದರೂ ವಿಚಿತ್ರ ಎಂಬ ಇವರ ತಂದೆಯರ ಬಾಂಡಿಂಗ್‌. ಅದೇ ಕಿತ್ತಾಟದ ಸ್ನೇಹ ಈ ಇಬ್ಬರಲ್ಲೂ ಇದೆ. ಸಂಜಯ್‌ ಮತ್ತು ಲೀಲಾ ಜೀವನದಲ್ಲಿ ಅದ್ಧೂರಿಯಾಗಿ ಬದುಕಬೇಕೆಂಬ ಕನಸು ಹೊತ್ತವರು. ವಿಧಿಯಾಟ ಅವರ ಯೋಚನೆಗಳು ತಲೆಕೆಳಗಾಗಿ, ವೆಡ್ಡಿಂಗ್‌ ಪ್ಲಾನರ್‌ಗಳಾಗಿ ಕೆಲಸ ಆರಂಭಿಸುತ್ತಾರೆ. ಬಾಲ್ಯದಿಂದಲೂ ಪೈಪೋಟಿ ಮನೋಭಾವದ ಈ ಇಬ್ಬರೂ ತಮ್ಮ ಪ್ರೊಫೆಷನ್‌ನಲ್ಲೂ ಪೈಪೋಟಿ ಮುಂದುವರಿಸುತ್ತಾರೆ. ಲೈಫ್ ಚೆಂಜಿಂಗ್‌ ಅನ್ನುವ ಒಂದು ಸುರ್ವಣಾವಕಾಶ, ರಾಜಕಾರಿಣಿಗಳ ಮಕ್ಕಳ ಮದುವೆ ಮಾಡಿಸುವುದು ಇವರ ಪಾಲಾಗುತ್ತದೆ. ಈ ಗಲಾಟೆ ಜೋಡಿ “ಸಿರಿ ಲಂಬೋದರ ವಿವಾಹ’ವನ್ನು ನೇರವೇರಿಸುತ್ತಾರಾ? ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು.

“ಎಸ್‌ಎಲ್‌ವಿ’ ಸಿನಿಮಾದ ಮೊದಲಾರ್ಧ ನಾಯಕ-ನಾಯಕಿಯರ ಕಿತ್ತಾಟ, ಕಾಮಿಡಿ ನಡುವೆ ಒಂದೊಂದು ಆ್ಯಕ್ಷನ್‌ ಸೀನ್‌ಗಳ ಮೂಲಕ ಸಾಗುತ್ತದೆ. ಆದರೆ ಕಥೆಗೆ ನಿಜವಾದ ಸಸ್ಪೆನ್ಸ್‌ ನೀಡುವುದೇ ದ್ವಿತಿಯಾರ್ಧ. ಪಂಚಿಂಗ್‌ ಕಾಮಿಡಿಗೆ ನಗುವ ಪ್ರೇಕ್ಷಕರನ್ನು ದ್ವಿತಿಯಾರ್ಧ ಗಂಭೀರವಾಗಿಸುವಂತೆ ಮಾಡುತ್ತದೆ. ನಿರ್ದೇಶಕ ಸೌರಭ್‌ ಕುಲರ್ಕಣಿ ತಮ್ಮ ಮೊದಲ ಪ್ರಯತ್ನದಲ್ಲೇ ಸಂಪೂರ್ಣ ಮನರಂಜನೆ ನೀಡುವ ಕಡೆಗೆ ಶ್ರಮ ವಹಿಸಿದ್ದಾರೆ ಎಂಬುದು ಚಿತ್ರದಲ್ಲಿ ಕಾಣುತ್ತದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿದ್ದರೆ ಚಿತ್ರ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಆದರೂ ಒಂದೊಳ್ಳೆ ಪ್ರಯತ್ನವಾಗಿ “ಎಸ್‌ಎಲ್‌ವಿ’ಯನ್ನು ಮೆಚ್ಚುಬಹುದು.

ಇನ್ನು ನಾಯಕ ಅಂಜನ್‌ ಭಾರಾದ್ವಾಜ್‌, ನಾಯಕಿ ದಿಶಾ ಮೊದಲ ಪ್ರಯತ್ನದಲ್ಲೆ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸುಂದರ್‌, ರಾಜೇಶ್‌ ನಟರಂಗ, ಬಾಲಾ ರಾಜವಾಡಿ, ರೋಹಿತ್‌ ಸೇರಿದಂತೆ ಪ್ರಮುಖ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ವಾಣಿ ಭಟ್ಟ

ಟಾಪ್ ನ್ಯೂಸ್

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

KARADI (2)

Ballari; ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳ ದಾಳಿ: ಇಬ್ಬರಿಗೆ ತೀವ್ರ ಗಾಯ

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್‌

orangrapady

Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಮೃತ್ಯು

yatnal

LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Belthangady: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.