ಕಬ್ಬಿನ ಹುಡುಗನ ತಾಜಾ ಪ್ರೀತಿ!: ತಾಜ್ ಮಹಲ್ 2 ಚಿತ್ರ ವಿಮರ್ಶೆ


Team Udayavani, Sep 3, 2022, 1:07 PM IST

tajmahal 2 kannada movie review

ಆತ ಸ್ವಾಭಿಮಾನಿ ಬಡ ಕುಟುಂಬದ ಹುಡುಗ ಭಗತ್‌. ತಾನಾಯಿತು ತನ್ನ ಕೆಲಸವಾಯಿತು ಅಂಥ ಕಬ್ಬಿನ ಹಾಲು ಮಾರಿಕೊಂಡು ಆರಾಮಾಗಿದ್ದ ಈ ಹುಡುಗನ ಜೀವನದಲ್ಲಿ, ಅಚಾನಕ್‌ ಆಗಿ ಬರುವ ಹುಡುಗಿಯೊಬ್ಬಳಿಂದಾಗಿ ಆತನ ಜೀವನವೇ ಬದಲಾಗುತ್ತದೆ. ಮೇಲ್ವರ್ಗದ ಹುಡುಗಿ ಕೆಳವರ್ಗದ ಹುಡುಗನ ನಡುವೆ ಮೂಡುವ ಪ್ರೀತಿಯ ಹಿಂದೆಯೇ, ಅಲ್ಲೊಂದು ಜಾತಿ ವೈಷಮ್ಯವೂ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ಈ ಪ್ರೇಮದ ಜೋಡಿ ಏನೇನು ಸಂತೋಷ, ಸಂಕಟ, ಸಂಘರ್ಷಗಳನ್ನು ಎದುರಿಸುತ್ತದೆ. ಅಂತಿಮವಾಗಿ ಹೃದಯದಲ್ಲಿ “ತಾಜ್‌ಮಹಲ್‌’ ಕಟ್ಟಲು ಹೊರಟ ಪ್ರೇಮಿಗಳ ಕಥೆ ಏನಾಗುತ್ತದೆ ಅನ್ನೋದೆ ಈ ವಾರ ತೆರೆಗೆ ಬಂದಿರುವ “ತಾಜ್‌ಮಹಲ್‌-2′ ಚಿತ್ರದ ಕಥಾಹಂದರ.

ಹೆಸರೇ ಹೇಳುವಂತೆ, “ತಾಜ್‌ಮಹಲ್‌ -2′ ಒಂದು ಅಪ್ಪಟ ಲವ್‌ಸ್ಟೋರಿ ಸಿನಿಮಾ. ಲವ್‌ ಸ್ಟೋರಿಯ ಜೊತೆಗೆ ಆ್ಯಕ್ಷನ್‌, ಸೆಂಟಿಮೆಂಟ್‌, ಫ್ರೆಂಡ್‌ಶಿಪ್‌, ಮೆಲೋಡಿ ಸಾಂಗ್ಸ್‌ ಹೀಗೆ ಬೇಕಾದ ಎಲ್ಲ ಎಂಟರ್‌ಟೈನ್ಮೆಂಟ್‌ ಅಂಶಗಳನ್ನೂ ಹದವಾಗಿ ಸೇರಿಸಿ ಮಾಸ್‌ ಸಿನಿಪ್ರಿಯರಿಗೆ ಇಷ್ಟವಾಗುವಂತೆ ಕಮರ್ಷಿಯಲ್‌ ಆಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ದೇವರಾಜ್‌ ಕುಮಾರ್‌.

ಕೆಲ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ನಡೆದಿದ್ದು ಎನ್ನಲಾದ ಮರ್ಯಾದ ಹತ್ಯೆಯ ನೈಜ ಘಟನೆಯನ್ನು ಕನ್ನಡ ನೇಟಿವಿಟಿಕೆ ತಕ್ಕಂತೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.  ಕಥೆಗೆ ತಕ್ಕಂತೆ ಚಿತ್ರಕಥೆ, ನಿರೂಪಣೆಗೆ ಕೊಂಚ ವೇಗ ಸಿಕ್ಕಿದ್ದರೆ, “ತಾಜ್‌ಮಹಲ್‌-2′ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.

ಇನ್ನು ನಾಯಕನ ಪಾತ್ರದಲ್ಲಿ ಕೆಳಮಧ್ಯಮ ವರ್ಗದ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿರುವ ದೇವರಾಜ್‌ ಕುಮಾರ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಸಮೃದ್ಧಿ ಶುಕ್ಲಾ ಕೂಡ ಅಂದಕ್ಕೊಪ್ಪುವ ಅಭಿನಯ ನೀಡಿದ್ದಾರೆ. ಉಳಿದಂತೆ ರಿತೇಶ್‌, ತಬಲನಾಣಿ, ಶೋಭರಾಜ್‌, ಕಾಕ್ರೋಚ್‌ ಸುಧಿ, ಕಡ್ಡಿಪುಡಿ ಚಂದ್ರು, ವಿಕ್ಟರಿ ವಾಸು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ತಾಂತ್ರಿಕವಾಗಿ ಛಾಯಾಗ್ರಹಣ, ಸಂಕಲನ ಕಾರ್ಯ ಗಮನ ಸೆಳೆಯುತ್ತದೆ. ಚಿತ್ರದ ಒಂದೆರಡು ಹಾಡುಗಳು ಥಿಯೇಟರ್‌ ಹೊರಗೂ ಗುನುಗುಡುವಂತಿದೆ. ಹಿನ್ನೆಲೆ ಸಂಗೀತ, ಸೌಂಡ್‌ ಎಫೆಕ್ಟ್ ಕಾರ್ಯಗಳ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಒಟ್ಟಾರೆ ಯಾವುದೇ ಬಿಗ್‌ ಸ್ಟಾರ್ ಇಲ್ಲದೆ ತೆರೆಗೆ ಬಂದಿರುವ “ತಾಜ್‌ಮಹಲ್‌-2′ ವಾರಾಂತ್ಯದಲ್ಲಿ ನೋಡಬಹುದಾದ ಕಂಪ್ಲೀಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಪ್ಯಾಕೇಜ್‌ ಇರುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್.ಕಾರ್ತಿಕ ಸುಧನ್

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.