ಹೊಡೆದಾಟದಲ್ಲೇ ಕಳೆದುಹೋದ ಮಗ


Team Udayavani, Mar 16, 2019, 5:42 AM IST

rajannana-maga.jpg

“ಯುದ್ಧ ಮಾಡೋಕೆ ನನಗೆ ಇಷ್ಟ ಇಲ್ಲ. ಆದರೆ, ಯುದ್ಧ ಮಾಡೋಕೆ ನಿಂತರೆ ಗೆಲ್ಲೋದು ಕಷ್ಟ ಏನಲ್ಲ…’ ಚಿತ್ರದ ನಾಯಕ ಎದುರಾಳಿಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಬಳಿಕ ಈ ಪಂಚಿಂಗ್‌ ಡೈಲಾಗ್‌ ಹೇಳುವ ಹೊತ್ತಿಗೆ, ಅದಾಗಲೇ ಅವನು ರೌಡಿಸಂನಲ್ಲಿ ಬೇಜಾನ್‌ ಹವಾ ಇಟ್ಟಿರುತ್ತಾನೆ. ಸಮಾಜ ಕೂಡ ಅವನೊಬ್ಬ ದೊಡ್ಡ ರೌಡಿ ಎಂಬ ಕಾರಣಕ್ಕೆ ಅವನ ಹೆಸರು ಹೇಳಿದರೆ ಸಾಕು ಮೌನಕ್ಕೆ ಶರಣಾಗಿ ತಲೆಬಾಗುತ್ತಿರುತ್ತದೆ. ಪೊಲೀಸು, ಪಬ್ಲಿಕ್ಕು, ಪೊಲಿಟಿಷಿಯನ್ಸ್‌ ಇದ್ಯಾವುದೂ ಅವನನ್ನು ಏನೂ ಮಾಡೋಕ್ಕಾಗಲ್ಲ. ಅಷ್ಟಕ್ಕೂ ಅವನು ಅಷ್ಟು ದೊಡ್ಡ ಕೆಟ್ಟ ರೌಡಿ ಆಗೋಕೆ ಕಾರಣ ಏನೆಂಬುದೇ ಚಿತ್ರದ ಕಥಾವಸ್ತು.

ಚಿತ್ರದ ಶೀರ್ಷಿಕೆ ಕೇಳಿದವರಿಗೆ ಅದೊಂದು ಕೌಟುಂಬಿಕ ಸಿನಿಮಾ, ಪ್ರೀತಿ, ಮಮತೆ, ಸಹನೆ, ತಾಳ್ಮೆ, ಬಾಳ್ವೆ ಇರುವಂತಹ ಚಿತ್ರ ಎಂಬ ಭಾವನೆ ಮೂಡಬಹುದು. “ರಾಜಣ್ಣನ ಮಗ’ ಶೀರ್ಷಿಕೆಗೆ ಅಂಥದ್ದೊಂದು ಕಲ್ಪನೆ ಮಾಡಿಕೊಂಡರೆ ತಪ್ಪೇನಿಲ್ಲ. ಆದರೆ, ಈ “ರಾಜಣ್ಣನ ಮಗ’ನದ್ದು ಒಂದು ರೌಡಿಸಂ ಕಥೆ ಇದೆ. ಜೊತೆಗೊಂದು ವ್ಯಥೆಯೂ ಇದೆ. ಇಲ್ಲಿ ರೌಡಿಸಂ ಸ್ಟೋರಿ ಇದ್ದರೂ, ಅಷ್ಟೇ ಭಾವುಕತೆ ಹೆಚ್ಚಿಸುವಂತಹ ಅಂಶಗಳೂ ಇವೆ. ಅಮ್ಮ ಮಗನ ವಾತ್ಸಲ್ಯ, ಅಪ್ಪ ಮಗನ ಬಾಂಧವ್ಯ, ಮೊದಲ ಸಲ ಹುಟ್ಟುವ ಪ್ರೀತಿ, ರಕ್ತ ಸಂಬಂಧಗಳ ನಡುವಿನ ರೀತಿ, ಗೆಳೆತನದ ಆಳ ಇತ್ಯಾದಿ ವಿಷಯಗಳು ಇಲ್ಲಿ ಅಡಕವಾಗಿವೆ.

ಹಾಗಂತ ಇದನ್ನು ಸೆಂಟಿಮೆಂಟ್‌ ಚಿತ್ರ ಎನ್ನಬೇಕೋ, ಅಂಡರ್‌ವರ್ಲ್ಡ್ ಸಿನಿಮಾ ಎನ್ನಬೇಕೋ ಎಂಬ ಗೊಂದಲ ಕಾಡದೇ ಇರದು. ಯಾಕೆಂದರೆ, ಇಲ್ಲಿ ರೌಡಿಸಂಗೆ ಹೆಚ್ಚು ಜಾಗ ಕಲ್ಪಿಸಲಾಗಿದೆ. ಹಾಗಾಗಿ ಭರ್ಜರಿ ಆ್ಯಕ್ಷನ್‌ ಬಿಟ್ಟರೆ ಬೇರೇನೂ ಕಾಣಸಿಗಲ್ಲ. ಮಾತೆತ್ತಿದರೆ ಸಾಕು, ಮಚ್ಚು, ಲಾಂಗುಗಳು ಝಳಪಳಿಸುತ್ತವೆ. ತರಹೇವಾರಿ ರೌಡಿಗಳ ಆರ್ಭಟ ಕಿವಿಗಡಚಿಕ್ಕುತ್ತದೆ. ಹಾಗಾಗಿ ಇದನ್ನು ಯಾವ ಕೆಟಗರಿಯ ಚಿತ್ರ ಎಂದು ಹೇಳುವುದು ಕೊಂಚ ಕಷ್ಟ. ಆದರೆ, ಒಂದು ಪಕ್ಕಾ ಕಮರ್ಷಿಯಲ್‌ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ ಎಂಬುದು ಸ್ಪಷ್ಟ.

ಆರಂಭದಲ್ಲಿ ಚಿತ್ರ ನೋಡುವವರಿಗೆ ಚಿತ್ರದ ಹೆಸರೊಂದೇ “ನಾಮಬಲ’ ಅನಿಸಿದರೆ ಅಚ್ಚರಿ ಇಲ್ಲ. ಆದರೆ, ಸಿನಿಮಾ ಕಥೆ ನಿಧಾನವಾಗಿ ಬಿಚ್ಚಿಕೊಳ್ಳುತ್ತಲೇ, ಚಿತ್ರದೊಳಗಿನ ಸಾರ ಕೂಡ ವಿಸ್ತಾರವಾಗುತ್ತ ಹೋಗುತ್ತದೆ. ಆ ಕಾರಣಕ್ಕೆ “ರಾಜಣ್ಣನ ಮಗ’ ಒಂದು ಮಾಸ್‌ ಚಿತ್ರವಾಗಿ, ಗಮನಸೆಳೆಯುತ್ತದೆ. ಹಾಗಂತ ಇದು ಕ್ಲಾಸ್‌ ಮಂದಿಗೆ ಇಷ್ಟವಾಗುತ್ತಾ? ಈ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ಇಲ್ಲಿ ದೊಡ್ಡ ಮಟ್ಟದ ಕಥೆ ಹುಡುಕುವಂತಿಲ್ಲ. ಆದರೆ, ಕಣ್ಣಿಗೆ ರಾಚುವಷ್ಟು ರೌಡಿಗಳ ದೊಡ್ಡ ಪಟ್ಟಿಗಂತೂ ಬರವಿಲ್ಲ. ಇಂತಹ ಚಿತ್ರಗಳಿಗೆ ಮುಖ್ಯವಾಗಿ ಬೇಕಿರುವುದು “ಡಿಫ‌ರೆಂಟ್‌’ ಸ್ಟಂಟ್ಸ್‌.

ಅದಕ್ಕೇನೂ ಕೊರತೆ ಇಲ್ಲ. ಇಲ್ಲಿನ ಒಂದೊಂದು ಆ್ಯಕ್ಷನ್‌ ನೋಡುತ್ತಿದ್ದರೆ, ಮೊದಲು ನೆನಪಾಗೋದೇ ಸ್ಟಂಟ್‌ ಮಾಸ್ಟರ್‌. ಅದಕ್ಕೆ ಪೂರಕ ಎನಿಸುವ ಹಿನ್ನೆಲೆ ಸಂಗೀತವೂ ಇಲ್ಲಿದೆ. ಹಾಗೆ ಹೇಳುವುದಾದರೆ ಹಿನ್ನೆಲೆ ಸಂಗೀತ ತಕ್ಕಮಟ್ಟಿಗೆ ಚಿತ್ರದ ತಾಕತ್ತು ಎನ್ನಬಹುದು. ಜೊತೆಗೊಂದಷ್ಟು ಪಂಚಿಂಗ್‌ ಡೈಲಾಗ್‌ಗಳು ಸಹ ಚಿತ್ರದ ವೇಗವನ್ನು ಹೆಚ್ಚಿಸಿಕೊಂಡು ಹೋಗಿವೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿಯಾದ ಹಿಡಿತ ಇದ್ದಿದ್ದರೆ, “ರಾಜಣ್ಣನ ಮಗ’ನ “ಹರ ಸಾಹಸ’ ಸಾರ್ಥಕವೆನಿಸುತ್ತಿತ್ತು. ಇದು ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗದಿದ್ದರೂ, ಯೂಥ್‌ಗೊಂದು ಭರ್ಜರಿ ಮಾಸ್‌ ಚಿತ್ರವಂತೂ ಹೌದು.

ಇಲ್ಲಿರುವ ಕಥೆ ಹೊಸದೇನಲ್ಲ. ಕನ್ನಡದ ಅದೆಷ್ಟೋ ಚಿತ್ರಗಳಲ್ಲಿ ಬಂದ ಕಥೆಯ ಎಳೆ ಇಲ್ಲೂ ಇದೆ. ರಾಜಣ್ಣನದು ಮಧ್ಯಮವರ್ಗದ ಕುಟುಂಬ. ಹೆಂಡತಿ, ಮಕ್ಕಳ ಪ್ರೀತಿನೇ ಆಸ್ತಿ ಅಂದುಕೊಂಡಾತ. ತನ್ನ ಮೂವರು ಗಂಡು ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸುವ ರಾಜಣ್ಣ ದಂಪತಿಗೆ ಮಕ್ಕಳ ಬಗ್ಗೆ ಇನ್ನಿಲ್ಲದ ಕನಸು. ದಿನ ಕಳೆದಂತೆ ರಾಜಣ್ಣನ ಕುಟುಂಬ ದೊಡ್ಡದಾಗುತ್ತದೆ. ಎರಡನೇ ಮಗ “ಗೌರಿ’ ಘಟನೆಯೊಂದರಲ್ಲಿ ಒಬ್ಬನನ್ನು ಕೊಂದು ಜೈಲು ಸೇರುತ್ತಾನೆ. ರಾಜಣ್ಣ ಆ ಮಗ ತನ್ನ ಪಾಲಿಗೆ ಸತ್ತು ಹೋದ ಅಂದುಕೊಳ್ಳುತ್ತಾನೆ.

ತಾನು ಮಾಡದ ತಪ್ಪಿಗಾಗಿ ಜೈಲು ಸೇರುವ ಗೌರಿ, ಆ ಬಳಿಕ ಹೊರಬಂದಾಗ ಸಮಾಜ ಅವನಿಗೆ  ರೌಡಿ ಪಟ್ಟ ಕಟ್ಟುತ್ತೆ. ಅವನ ಹೆಸರು ಹೇಳಿಕೊಂಡೇ ಅದೆಷ್ಟೋ ಪುಡಿ ರೌಡಿಗಳು ಮುಗ್ಧ ಜನರನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಾರೆ. ಆದರೆ, ಗೌರಿಗೆ ಮಾತ್ರ ಅಷ್ಟೆಲ್ಲಾ ನಡೆಯುತ್ತಿದೆ ಅಂತ ಅರ್ಥವಾಗುವ ಹೊತ್ತಿಗೆ ಅವನೊಬ್ಬ ದೊಡ್ಡ ರೌಡಿ ಎಂದೇ ಹೆಸರು ಪಡೆದಿರುತ್ತಾನೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದು “ರಾಜಣ್ಣನ ಮಗ’ನ ಕಥೆ. ಹರೀಶ್‌ ಜಲಗೆರೆ ಅವರ ಆ್ಯಕ್ಟಿಂಗ್‌ಗಿಂತ ಆ್ಯಕ್ಷನ್‌ ಇಷ್ಟವಾಗುತ್ತೆ. ಹತ್ತಾರು ಜನರನ್ನು ಒಂದೇ ಏಟಿಗೆ ಹೊಡೆದುರುಳಿಸುವ ಅವರ ತಾಕತ್ತು ಪ್ರದರ್ಶನ ಚೆನ್ನಾಗಿದೆ.

ದೇಹ ಇನ್ನಷ್ಟು ಫಿಟ್‌ ಆಗಿರಬೇಕಿತ್ತು. ಆದರೂ, ರಿಸ್ಕೀ ಸ್ಟಂಟ್ಸ್‌ನಲ್ಲಿ ಯಾವ ಮಾಸ್‌ ಹೀರೋಗು ಕಮ್ಮಿ ಇಲ್ಲವೆಂಬಂತೆ ಬೆವರಿಳಿಸಿದ್ದಾರೆ. ನಾಯಕಿ ಬಗ್ಗೆ ಹೇಳದಿರುವುದೇ ಒಳಿತು. ರಾಜಣ್ಣನಾಗಿ ಚರಣ್‌ರಾಜ್‌ ಇಷ್ಟವಾಗುತ್ತಾರೆ. ಒಬ್ಬ ಪ್ರಾಮಾಣಿಕ ವ್ಯಾಪಾರಿಯಾಗಿ, ಕುಟುಂಬವನ್ನು ಪ್ರೀತಿಸುವ ಅಪ್ಪನಾಗಿ ಗಮನಸೆಳೆಯುತ್ತಾರೆ. ಕೆಲವೆಡೆ ಭಾವುಕರನ್ನಾಗಿಸುತ್ತಾರೆ. ಅರುಣ ಬಾಲರಾಜ್‌, ರಾಜೇಶ್‌ ನಟರಂಗ, ಕರಿಸುಬ್ಬು, ಶರತ್‌ಲೋಹಿತಾಶ್ವ ಸೇರಿದಂತೆ ಇತರೆ ಕಲಾವಿದರು ಪಾತ್ರಕ್ಕೆ ಮೋಸ ಮಾಡಿಲ್ಲ. ಡಿಫ‌ರೆಂಟ್‌ ಡ್ಯಾನಿ ಅವರ ಸಾಹಸ ಚಿತ್ರದ ಹೈಲೈಟ್‌ ಆಗಿದ್ದರೆ, ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತಕ್ಕೂ ಅಷ್ಟೇ ಕ್ರೆಡಿಟ್‌ ಸಲ್ಲಬೇಕು. ಪ್ರಮೋದ್‌ ಅವರ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ರಾಜಣ್ಣನ ಮಗ
ನಿರ್ಮಾಣ: ಜಲಗೆರೆ ಪ್ರೈ.ಲಿ.
ನಿರ್ದೇಶನ: ಕೋಲಾರ ಸೀನು
ತಾರಾಗಣ: ಹರೀಶ್‌ ಜಲಗೆರೆ, ಅಕ್ಷತಾ, ಚರಣ್‌ರಾಜ್‌, ಅರುಣಬಾಲರಾಜ್‌, ಶರತ್‌ ಲೋಹಿತಾಶ್ವ, ರಾಜೇಶ್‌ ನಟರಂಗ, ಕರಿಸುಬ್ಬು, ಕುರಿರಂಗ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.