Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ


Team Udayavani, Jul 20, 2024, 12:57 PM IST

Vidyarthi Vidyarthiniyare Movie Review

ಶ್ರೀಮಂತ ಮನೆತನದ ವಿದ್ಯಾರ್ಥಿಗಳು ದಾರಿ ತಪ್ಪಲು ಕಾರಣ ಅವರ ಪಾಲಕರಾ? ಮಕ್ಕಳ ಮೇಲಿನ ಅತಿಯಾದ ಪ್ರೀತಿ ಹಾಗೂ ಐಷಾರಾಮಿ ಬದುಕು ವಿದ್ಯಾರ್ಥಿಗಳ ಕಾಲೇಜು ಜೀವನಕ್ಕೆ ಮಾರಕವಾಗುತ್ತಾ? ಇಂತಹ ಅಂಶಗಳನ್ನಿಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’.

ಆಗಾಗ ಕೇಳಿಬರುವ ಗಾಂಜಾ, ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಹಾಗಂತ ಇಡೀ ಸಿನಿಮಾದಲ್ಲಿ ಅದನ್ನೇ ಹೇಳಿಲ್ಲ. ಅದರಾಚೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಹೇಳಲು ಪ್ರಯತ್ನಿಸಲಾಗಿದೆ. ಚಿತ್ರದ ಟೈಟಲ್‌ಗೆ ತಕ್ಕಂತೆ ಇಡೀ ಸಿನಿಮಾ ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುತ್ತದೆ. ಇಲ್ಲೊಂದು ಗ್ಯಾಂಗ್‌ ಇದೆ. ಪಕ್ಕಾ ಪರೋಡಿ ಗ್ಯಾಂಗ್‌ ಅದು. ಅದಕ್ಕೆ ತಕ್ಕಂತೆ ಶ್ರೀಮಂತ ಕುಟುಂಬದ ಹಿನ್ನೆಲೆ ಬೇರೆ. ಅದು ಅವರ ಆಟವನ್ನು ಮತ್ತಷ್ಟು ತೀವ್ರವಾಗಿಸುತ್ತದೆ. ಈ ನಡುವೆಯೇ ನಡೆಯುವ ಗಂಭೀರ ಘಟನೆಯೊಂದು ಇಡೀ ಕಥೆಗೆ ಹೊಸ ತಿರುವು ಕೊಡುತ್ತದೆ. ಅದೇನು ಎಂಬುದನ್ನು ನೋಡುವ ಕುತೂಹಲವಿದ್ದರೆ ಸಿನಿಮಾ ನೋಡಬಹುದು.

ಎಲ್ಲಾ ಸಿನಿಮಾಗಳಂತೆ ಇಲ್ಲೂ ನಿರ್ದೇಶಕರು ಮೊದಲರ್ಧ ಕಾಲೇಜು ಹುಡುಗ -ಹುಡುಗಿಯರ ತರ್ಲೆ, ತುಂಟಾಟವನ್ನು ತೋರಿಸುತ್ತಾ, ಮಧ್ಯಂತರದ ಹೊತ್ತಿಗೆ ಕಥೆಗೆ “ಬೆಳಕು’ ಚೆಲ್ಲಿದ್ದಾರೆ. ಅಲ್ಲಿಂದ ಇಡೀ ಸಿನಿಮಾ ಹೊಸ ತಿರುವು ಪಡೆದುಕೊಂಡು ಸಾಗುತ್ತದೆ. ನಿಜವಾದ “ಗೇಮ್‌’ ಆರಂಭವಾಗಿ, ಟ್ವಿಸ್ಟ್‌ಗಳೊಂದಿಗೆ ಸಿನಿಮಾ ಪಯಣಿಸುತ್ತದೆ. ಇಲ್ಲೊಂದು ಆಶಯವಿದೆ, ಜೊತೆಗೊಂದು ಸಂದೇಶವೂ ಇದೆ. ಇಡೀ ಚಿತ್ರವನ್ನು ಕೆಲವೇ ಕೆಲವು ಪಾತ್ರಗಳ ಮೂಲಕ ಕಟ್ಟಿಕೊಡಲಾಗಿದೆ. ಇದೊಂದು ಕಾಲೇಜು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆಯಾದ್ದರಿಂದ ನಿರ್ದೇಶಕರು ಅನಾವಶ್ಯಕ ಬಿಲ್ಡಪ್‌ ಗಳಿಂದ ಸಿನಿಮಾವನ್ನು ಮುಕ್ತವಾಗಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವ ಚಂದನ್‌ ಶೆಟ್ಟಿ, ಭಾವನಾ ಅಪ್ಪು, ಅಮರ್‌, ಮನಸ್ವಿ, ವಿವಾನ್‌ ಪಾತ್ರಕ್ಕೆ ನ್ಯಾಯ ಒದಗಿಸಿ ದ್ದಾರೆ. ಉಳಿದಂತೆ ಚಿತ್ರದಲ್ಲಿ ಸುನಿಲ್‌ ಪುರಾಣಿಕ್‌, ಭವ್ಯ, ಅರವಿಂದ ರಾವ್‌, ಪ್ರಶಾಂತ್‌ ಸಂಬರಗಿ, ಸಿಂಚನಾ, ರಘು ರಾಮನಕೊಪ್ಪ, ಕಾಕ್ರೋಚ್‌ ಸುಧಿ ನಟಿಸಿದ್ದಾರೆ. ಚಿತ್ರದಲ್ಲಿ ಆಗಾಗ ಬರುವ ಕಲರ್‌ಫ‌ುಲ್‌ ಹಾಡುಗಳು ಇಷ್ಟವಾಗುತ್ತವೆ.

ರವಿಪ್ರಕಾಶ್‌ ರೈ

Ad

ಟಾಪ್ ನ್ಯೂಸ್

1-horoscope

Daily Horoscope: ಹಿಂದಿನಿಂದ ದ್ರೋಹ ಬಗೆಯುವವರ ಕುರಿತು ಎಚ್ಚರ, ಹಿತಶತ್ರುಗಳ ಕಾಟ ಶಮನ

tiger-Died-Chn

ಐದು ಹುಲಿಗಳ ಕೊಲ್ಲಲು ಬಳಸಿದ್ದು ಅತ್ಯಂತ ವಿಷಕಾರಿ ಕೀಟನಾಶಕ

Delhi: ಟೆನಿಸ್‌ ಆಟಗಾರ್ತಿ ರಾಧಿಕಾಳನ್ನು ಗುಂಡಿಟ್ಟುಕೊಂದ ಆಕೆಯ ಅಪ್ಪ!

Delhi: ಟೆನಿಸ್‌ ಆಟಗಾರ್ತಿ ರಾಧಿಕಾಳನ್ನು ಗುಂಡಿಟ್ಟುಕೊಂದ ಆಕೆಯ ಅಪ್ಪ!

Sharvathi-Bridge

ಶರಾವತಿ ಸೇತುವೆಗೆ ಬಿ.ಎಸ್‌.ಯಡಿಯೂರಪ್ಪ ಹೆಸರು: ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್‌

1-aa-fari

ಶಿರ್ವ; ಚಾಲಾಕಿ ಮಹಿಳೆಯಿಂದ ಹಲವು ಚಿನ್ನದಂಗಡಿಗಳಿಗೆ ವಂಚನೆ

1-aa-doc

Bengaluru; ಕೈದಿಗಳಿಗೆ ಫೋನ್‌ ಮಾರಾಟ: 70 ಲಕ್ಷ ರೂ. ಗಳಿಸಿದ್ದ ವೈದ್ಯ!

CT-Ravi

ಸಿಎಂ ಬದಲಾವಣೆ ವಿಚಾರ ಎತ್ತಿದ್ದು ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pen drive Movie Review

Pen drive Movie Review: ಪೆನ್‌ಡ್ರೈವ್‌ನಲ್ಲಿ ನಾಯಕನ ಆಟ!

Capital City Movie Review

Capital City Movie Review: ಭೂಗತ ನೆರಳಲ್ಲಿ ಸಿಟಿ ರೈಡ್‌

Tapassi Movie Review

Tapassi Movie Review: ಅಮಲಿನಲ್ಲಿ ಅರಳಿ, ನರಳಿದವರ ಕಥೆಯಿದು..

Kapata Nataka Sutradhari Movie Review

Kapata Nataka Sutradhari Movie Review: ಧರ್ಮ ಸಂಘರ್ಷದ ಸುತ್ತ ಕಪಟ ನಾಟಕ

Jungle Mangal Movie Review

Jungle Mangal Movie Review: ಕಾಡಿನೊಳಗಿನ ಥ್ರಿಲ್ಲರ್‌ ಜರ್ನಿ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-horoscope

Daily Horoscope: ಹಿಂದಿನಿಂದ ದ್ರೋಹ ಬಗೆಯುವವರ ಕುರಿತು ಎಚ್ಚರ, ಹಿತಶತ್ರುಗಳ ಕಾಟ ಶಮನ

High-Court

ವಿಧಾನಮಂಡಲ ಕಾಗದ ಪತ್ರ ಸಮಿತಿಗೆ ದಾಖಲೆ ತರಿಸಿಕೊಳ್ಳುವ ಅಧಿಕಾರ ಇಲ್ಲ

tiger-Died-Chn

ಐದು ಹುಲಿಗಳ ಕೊಲ್ಲಲು ಬಳಸಿದ್ದು ಅತ್ಯಂತ ವಿಷಕಾರಿ ಕೀಟನಾಶಕ

Delhi: ಟೆನಿಸ್‌ ಆಟಗಾರ್ತಿ ರಾಧಿಕಾಳನ್ನು ಗುಂಡಿಟ್ಟುಕೊಂದ ಆಕೆಯ ಅಪ್ಪ!

Delhi: ಟೆನಿಸ್‌ ಆಟಗಾರ್ತಿ ರಾಧಿಕಾಳನ್ನು ಗುಂಡಿಟ್ಟುಕೊಂದ ಆಕೆಯ ಅಪ್ಪ!

Sharvathi-Bridge

ಶರಾವತಿ ಸೇತುವೆಗೆ ಬಿ.ಎಸ್‌.ಯಡಿಯೂರಪ್ಪ ಹೆಸರು: ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.