ವಿರಾಟಪುರ ವಿರಾಗಿ ಚಿತ್ರ ವಿಮರ್ಶೆ: ವಿರಾಗಿಯ ಬದುಕಿನ ಮೇಲೊಂದು ಬೆಳಕು


Team Udayavani, Jan 14, 2023, 12:13 PM IST

viragi

12 ನೇ ಶತಮಾನದಲ್ಲಿ ಬಸವಣ್ಣನವರಿಂದ ಆರಂಭವಾದ ಭಕ್ತಿ ಪಂಥವು ಸಮಾಜದ ಏಳಿಗೆಗಾಗಿ ನಿರ್ಮಿಸಲ್ಪಟ್ಟಿದೆ. ಸಮಾಜದಲ್ಲಿನ ಜಾತಿಪದ್ಧತಿ ಎಂಬ ಅನಿಷ್ಠವನ್ನು ಹೋಗಲಾಡಿಸಿ, ಜಾತಿ, ಲಿಂಗ, ವೃತ್ತಿ, ಎಲ್ಲವನ್ನೂ ಮೀರಿ ಲಿಂಗದೀಕ್ಷೆ ನೀಡುವ ಮೂಲಕ, ಕಾಯಕದಿಂದ ಶಿವನಲ್ಲಿ ಲೀನವಾಗುವ ಪರಿಯನ್ನು ಲೋಕಕ್ಕೆ ಸಾರಿದವರು ಬಸವಣ್ಣ. ಬಸವಣ್ಣನವರ ನಂತರ 19-20 ಶತಮಾನದಲ್ಲಿ ವೀರಶೈವ ಧರ್ಮದ ಉದ್ಧಾರ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಯೋಗಿಗಳು ಹಾನಗಲ್‌ ಕ್ಷೇತ್ರದ ವಿರಾಟಪುರದ ಶ್ರೀ ಕುಮಾರ ಶಿವಯೋಗಿಗಳು. ಶ್ರೀ ಕುಮಾರ ಶಿವಯೋಗಿಗಳ ಜೀವನಗಾಥೆ ಲೋಕಕ್ಕೆ ಮಾದರಿಯಾಗಿದ್ದು, ಈ ವಾರ ತೆರೆ ಕಂಡ “ವಿರಾಟಪುರ ವಿರಾಗಿ’ ಚಿತ್ರ ಅದಕ್ಕೆ ಸಾಕ್ಷಿಯಾಗಿದೆ.

ನಿರ್ದೇಶಕ ಬಿ.ಎಸ್‌ ಲಿಂಗದೇವರು ನಿರ್ದೇಶನದ ಈ ಚಿತ್ರ ಶ್ರೀಗಳ ಜೀವನಾಧಾರಿತ ಚಿತ್ರವಾಗಿದೆ. ಶಿವಯೋಗಿಗಳ ಕುರಿತು ಸಂಪೂರ್ಣ ಅಧ್ಯಯನ ನಡೆಸಿ , ಅವರ ಜೀವನ ಘಟ್ಟದ ಅತೀ ಮುಖ್ಯ ಅಂಶಗಳನ್ನು ಮೂರು ಗಂಟೆಗಳ ಮಿತಿಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಚಿತ್ರತಂಡದ್ದಾಗಿದೆ.

ಶ್ರೀ ಕುಮಾರ ಶಿವಯೋಗಿಗಳ ಬಾಲ್ಯ, ಓದು, ಆತ್ಮಲಿಂಗದ ಕಡೆಗಿನ ಒಲವು, ಸನ್ಯಾಸ, ಸಮಾಜ ಪರ ಕಾರ್ಯಗಳು ಎಲ್ಲವನ್ನೂ ದೃಶ್ಯ ಕಾವ್ಯದ ಮೂಲಕ ತೋರಿಸಲಾಗಿದೆ. ಶ್ರೀ ಕುಮಾರ ಶಿವಯೋಗಿಗಳ , ಬದುಕಿನ ದಾರಿಯೇ ಭಿನ್ನವಾಗಿದ್ದು, ಸಮಾಜದಲ್ಲಿ ಶಿಕ್ಷಣ, ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವಲ್ಲಿ, ಜಾತಿ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಶ್ರೀಗಳು ನಡೆಸಿದ್ದು ಒಂದು ಕ್ರಾಂತಿ. ಭೀಕರ ಬರಗಾಲದಲ್ಲಿ ಅನ್ನದಾಸೋಹ ನಡೆಸಿ, ಪ್ಲೇಗ್‌ ರೋಗ ಇಡೀ ಊರನ್ನೇ ಆವರಿಸಿದಾಗ ಜನರನ್ನು ಆರೈಕೆ ಮಾಡಿ, ಬಡಜನರಿಗೆ ದಾರಿ ಯಾದವರು ಶ್ರೀ ಕುಮಾರ ಶಿವಯೋಗಿಗಳು. ವೀರಶೈವ ಮಹಾಸಭಾ ಆರಂಭಿಸಿ, ಸಮಾಜಮುಖೀ ಕಾರ್ಯಗಳಿಗೆ ಹೇಗೆ ಹೆಸರಾಗಿದ್ದರು ಎಂಬುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಇನ್ನು, ಚಿತ್ರದಲ್ಲಿ ನಟ ಸುಚೇಂದ್ರ ಪ್ರಸಾದ್‌, ಶಿವಯೋಗಿಗಳ ಪಾತ್ರ ನಿರ್ವಹಿಸಿದ್ದು, ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವತುಂಬಿದ್ದಾರೆ. ಜೊತೆಯಲ್ಲಿ ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದರು ಅಭಿನಯಿಸಿದ್ದು, ಕೆಲ ಸ್ವಾಮಿಜಿಗಳ ಪಾತ್ರಗಳನ್ನು ಸ್ವತಃ ಸ್ವಾಮಿಜಿಗಳೇ ನಿರ್ವಹಿ ಸಿದ್ದಾರೆ. ಶ್ರೀ ಪಂಚಾಕ್ಷರಿಗವಾಯಿಗಳ ಸಂಗೀತ ಆರಂಭವಾ ಗಿದ್ದ ದಿನಗಳ ಕುರಿತ ಅಂಶವನ್ನು ಇಲ್ಲಿ ತೋರಿಸಲಾಗಿದೆ.

“ವಿರಾಟಪುರ ವಿರಾಗಿ’ ಚಿತ್ರ ಕಮರ್ಷಿಯಲ್‌ ಅಂಶಗಳಿಂದ ಹೊರತಾಗಿದ್ದು, ಕಮರ್ಷಿಯಲ್‌ ಚಿತ್ರಗಳಿಂದಾಚಿನ ಚಿತ್ರ ಬಯಸುವವರು ನೋಡಬಹುದಾದ ಚಿತ್ರ.

ವಾಣಿ ಭಟ್ಟ

ಟಾಪ್ ನ್ಯೂಸ್

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

Vijay Mallya bought personal assets worth crores abroad before fleeing India: CBI

ಬ್ಯಾಂಕ್ ಸಾಲ ತೀರಿಸಲು ಮಲ್ಯ ಬಳಿ ಸಾಕಷ್ಟು ಹಣವಿತ್ತು,ಆದರೂ.; ಚಾರ್ಜ್’ಶೀಟ್ ಸಲ್ಲಿಸಿದ ಸಿಬಿಐ

TDY-21

ಜಗತ್ತನ್ನು ಆಳುತ್ತಿದೆ ರಾಕ್ಷಸ ಚಕ್ರವರ್ತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kabzaa

ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ

‘ಚೌಕಾಬಾರ’ ಮೆಚ್ಚುಗೆ

‘ಚೌಕಾಬಾರ’ ಮೆಚ್ಚುಗೆ

kannada movie mary review

ಚಿತ್ರ ವಿಮರ್ಶೆ; ಥ್ರಿಲ್ಲರ್ ‘ಮೇರಿ’ಯ ಜಾಡು ಹಿಡಿದು..

dddooradarshana kannada movie

ದೂರದರ್ಶನ ಚಿತ್ರ ವಿಮರ್ಶೆ; ಟಿವಿಯ ಸದ್ದು, ಅಹಂಗೊಂದು ಗುದ್ದು

kadala theerada bhargava movie

ಕಡಲ ತೀರದ ಭಾರ್ಗವ ಚಿತ್ರ ವಿಮರ್ಶೆ: ಕಡಲ ತೀರದ ಭಾವಯಾನ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

tdy-2

ಕನಸಿನಲ್ಲಿ ʼಶ್ರೀಕೃಷ್ಣʼ ದೇವರನ್ನು ಕಂಡು ನಿದ್ದೆಯಿಂದ ಎಚ್ಚೆದ್ದ ಸಚಿವ.!

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

Modi ಉಪನಾಮ ಪ್ರಕರಣ: ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿದ ಕೋರ್ಟ್

TDY-22

ಸ್ಟಾರ್ಟ್‌ಅಪ್‌ ಕನಸು ಹೊತ್ತವರ ಚಿತ್ರ: ಮೇಡ್ ಇನ್ ಬೆಂಗಳೂರು

TDY-1

ಆನ್ಲೈನ್‌ ನಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ಹೋಗಿ 7 ಲಕ್ಷ ರೂ. ಕಳೆದುಕೊಂಡ ಮಹಿಳೆ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

ರಣದೀಪ್ ಸಿಂಗ್ ಸುರ್ಜೆವಾಲ ಇತಿಹಾಸವನ್ನು ಓದಿಕೊಳ್ಳಬೇಕು: ಸಿಎಂ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.