‘ವೀಲ್‌ ಚೇರ್‌ ರೋಮಿಯೋ’ ಚಿತ್ರ ವಿಮರ್ಶೆ; ವೀಲ್‌ಚೇರ್‌ನಿಂದ ಮೇಲೇಳುವ ಸಿನಿಮಾವಿದು…


Team Udayavani, May 28, 2022, 9:46 AM IST

‘ವೀಲ್‌ ಚೇರ್‌ ರೋಮಿಯೋ’ ಚಿತ್ರ ವಿಮರ್ಶೆ

ಸಿನಿಮಾದ ಟೈಟಲ್ಲೇ ಹೇಳುವಂತೆ ಆತ ವೀಲ್‌ ಚೇರ್‌ ರೋಮಿಯೋ. ಕೈ-ಕಾಲುಗಳು ಸ್ವಾಧೀನ ಕಳೆದುಕೊಂಡರೂ ಸ್ವಾವಲಂಭಿಯಾಗಿ ಬದುಕ ಬೇಕೆಂಬ ಉತ್ಕಟ ಆಸೆ ನಾಯಕ ಉಲ್ಲಾಸ್‌ (ರಾಮ್‌ ಚೇತನ್‌)ನದ್ದು. ತನ್ನ ಮಗ ಅಂಗವಿಕಲನಾದರೂ ಆ ನೋವು, ಭಾವನೆ ಮನಸ್ಸಿನಲ್ಲಿ ಮೂಡದಂತೆ ಬಾಲ್ಯದಿಂದಲೇ ಜೋಪಾನವಾಗಿ ನೋಡಿಕೊಂಡ ನಾಯಕನ ಆದರ್ಶ ತಂದೆ. ಅಂಗವಿಕಲನಾದರೂ ವಯಸ್ಸಿಗೆ ಬರುತ್ತಿದ್ದಂತೆ ಉಲ್ಲಾಸ್‌ನಿಂದ ವ್ಯಕ್ತವಾದ ವಯೋಸಹಜ ಮನೋಕಾಮನೆಯನ್ನು ತೀರಿಸುವ ಸಲುವಾಗಿ ತಂದೆ, ಮಗನಿಗೆ ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಯಾರೊಬ್ಬರೂ ಉಲ್ಲಾಸ್‌ ನಿಗೆ ಹೆಣ್ಣು ನೀಡಲು ಮುಂದಾಗುವುದಿಲ್ಲ. ಕೊನೆಗೆ ಅಪ್ಪ-ಮಗ ಏನು ಮಾಡುತ್ತಾರೆ? ಉಲ್ಲಾಸನಿಗೆ ಹೆಣ್ಣು ಕೊಡುವವರು ಯಾರು? “ವೀಲ್‌ಚೇರ್‌ ರೋಮಿಯೋ’ಗೆ ಒಬ್ಬಳು ಜ್ಯೂಲಿಯೆಟ್‌ ಸಿಗುತ್ತಾಳಾ? ಇವರ ಹುಡುಗಿಯ ಹುಡುಕಾಟ ಹೇಗಿರುತ್ತದೆ ಅನ್ನೋದೇ “ವೀಲ್‌ಚೇರ್‌ ರೋಮಿಯೋ’ ಸಿನಿಮಾದ ಕಥಾಹಂದರ. ಅದನ್ನು ಕಣ್ತುಂಬಿಕೊಳ್ಳುವ ಆಸೆಯಿದ್ದರೆ, ನೀವು ಖಂಡಿತವಾಗಿಯೂ ಥಿಯೇಟರ್ ಗೆ ಹೋಗಬೇಕು.

ಮೂಲತಃ ಚಿತ್ರಕಥೆ ಬರಹಗಾರರಾಗಿರುವ ನಿರ್ದೇಶಕ ನಟರಾಜ್‌ ತಮ್ಮ ಸರಳ ಕಥೆ, ಸರಾಗವಾಗಿ ಸಾಗುವ ಚಿತ್ರಕಥೆ, ಕಚಗುಳಿಯಿಡುವ ಸಂಭಾಷಣೆ ಮೂಲಕ ಇಡೀ ಸಿನಿಮಾವನ್ನು ಭಾವನಾತ್ಮಕವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದ ನಾಲ್ಕೈದು ಪ್ರಮುಖ ಪಾತ್ರಗಳು, ಅದರ ಹಿಂದಿನ ಸನ್ನಿವೇಶಗಳು ಮತ್ತು ಅದಕ್ಕೆ ಒಪ್ಪುವಂಥ ಡೈಲಾಗ್ಸ್‌ ಇಡೀ ಸಿನಿಮಾದ ಬಹುದೊಡ್ಡ ಹೈಲೈಟ್ಸ್‌ ಎನ್ನಬಹುದು.

ಗುರು ಕಶ್ಯಪ್‌ ಅವರ ಪಂಚಿಂಗ್‌ ಡೈಲಾಗ್ಸ್‌ ಅದಕ್ಕೆ ತಕ್ಕಂತೆ ಕಲಾವಿದರ ಕಾಮಿಡಿ ಟೈಮಿಂಗ್‌ ಎಲ್ಲೂ ಬೋರ್‌ ಹೊಡೆಸದಂತೆ ಸಿನಿಮಾವನ್ನು ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಅದರಲ್ಲೂ ಮೊದಲರ್ಧ ಮುಗಿದು ಹೋಗುವುದು ಪ್ರೇಕ್ಷಕರಿಗೆ ಗೊತ್ತೇ ಆಗುವುದಿಲ್ಲ. ಅಷ್ಟೊಂದು ವೇಗವಾಗಿ ನೋಡುಗರನ್ನು ನಗಿಸುತ್ತ ಸಿನಿಮಾ ಸಾಗುತ್ತ ಭರಪೂರ ಮನರಂಜನೆ ನೀಡುತ್ತದೆ. ಆದರೆ, ದ್ವಿತಿಯಾರ್ಧದಲ್ಲಿ ಚಿತ್ರಕಥೆಗೆ ಒಂದಷ್ಟು ಟರ್ನ್, ಟ್ವಿಸ್ಟ್‌ಗಳು ಸಿಗುವುದರಿಂದ ಸಿನಿಮಾ ಸ್ವಲ್ಪ ಗಂಭೀರ ಎನಿಸುತ್ತದೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್‌ ಮುಗಿದು ಹೊರಗೆ ಬರುವಾಗ ಪ್ರೇಕ್ಷಕರನ್ನು ಹಗುರಭಾವದಿಂದ ಹೊರಬರುವಂತೆ ಮಾಡಲು “ವೀಲ್‌ಚೇರ್‌ ರೋಮಿಯೋ’ ಯಶಸ್ವಿಯಾಗಿದ್ದಾನೆ.

ಇದನ್ನೂ ಓದಿ:ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

ಇನ್ನು ಮೊದಲ ಬಾರಿಗೆ ಹೀರೋ ಆಗಿರುವ ರಾಮ್‌ ಚೇತನ್‌, ಇಡೀ ಸಿನಿಮಾದಲ್ಲಿ ವೀಲ್‌ಚೇರ್‌ ಮೇಲೇ ಕುಳಿತೇ ರೋಮಿಯೋ ಆಗಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದ್ದಾರೆ. ನಾಯಕಿ ಮಯೂರಿ ಅಂಧ ಹುಡುಗಿಯ ಪಾತ್ರದಲ್ಲಿ ಅಂದವಾದ ಅಭಿನಯ ನೀಡಿದ್ದಾರೆ. ಉಳಿದಂತೆ ಜಾಕ್‌ ಮಾಮನಾಗಿ ರಂಗಾಯಣ ರಘು ಅವರ ಸಂಭಾಷಣೆ ಮತ್ತು ಮ್ಯಾನರಿಸಂ ಇಡೀ ಸಿನಿಮಾದ ಉದ್ದಕ್ಕೂ ನೋಡುಗರಿಗೆ ಕಿಕ್‌ ಕೊಡುತ್ತದೆ. ಜವಾಬ್ದಾರಿಯುತ ತಂದೆಯಾಗಿ, ಮಗನ ಆಸೆಗಳನ್ನು ಈಡೇರಿಸಲು ಎಂಥ ತ್ಯಾಗ, ಸಾಹಸಕ್ಕೂ ಸೈ ಎನಿಸುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್‌ ಅಭಿನಯದ ಭಾವನಾತ್ಮಕವಾಗಿ ಮನಮುಟ್ಟುತ್ತದೆ.

ಭರತ್‌ ಬಿ. ಜೆ. ಸಂಗೀತ ನಿರ್ದೇಶನದ ಹಾಡುಗಳು ಗುನುಗುವಂತೆ ಮಾಡುತ್ತದೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಸಂತೋಷ್‌ ಪಾಂಡಿ ಛಾಯಾಗ್ರಹಣ ಚಿತ್ರವನ್ನು ಅಂದವಾಗಿ ತೆರೆಮೇಲೆ ಕಟ್ಟಿಕೊಟ್ಟಿದೆ. ಒಟ್ಟಾರೆ ಥಿಯೇಟರ್‌ಗೆ ಹೋದವರಿಗೆ “ವೀಲ್‌ಚೇರ್‌ ರೋಮಿಯೋ’ ಒಂದು ಅಚ್ಚುಕಟ್ಟಾದ ಮನರಂಜನೆ ನೀಡುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.

ಜಿ.ಎಸ್.ಕಾರ್ತಿಕ ಸುಧನ್

ಟಾಪ್ ನ್ಯೂಸ್

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

1-dsadas

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್‌ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್‌ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

army

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

totapuri 2 review

Totapuri 2 review; ತೋತಾಪುರಿಯ ‘ಘಮ’ ಮತ್ತು ಕಾಡುವ ‘ಸುಮ’!

baana daariyalli review

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

Dighvijay Movie review;

Dighvijaya Movie review; ರೈತಪರ ಹೋರಾಟಕ್ಕೆ ದಿಗ್ವಿಜಯ

Olave Mandara 2 movie review

Olave Mandara 2 movie review; ಪ್ರೇಮದೂರಿನ ಕರೆಯೋಲೆ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

1-sadsad

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

arrested

BMTC ಯಲ್ಲಿ ಭಾರಿ ವಂಚನೆ : ಮುಖ್ಯ ಟ್ರಾಫಿಕ್ ಮ್ಯಾನೇಜರ್ ಬಂಧನ

1-asddas

Pollution; ಭಾರತದ ಅತ್ಯಂತ ಕಲುಷಿತ ಗಾಳಿಯಿರುವ ನಗರ ಯಾವುದು? : ವಿಶ್ಲೇಷಣೆ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

Gaming App Case:ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಗೆ ಜಾರಿ ನಿರ್ದೇಶನಾಲಯದ ಸಮನ್ಸ್‌ ಜಾರಿ

1-dsadas

BJP ಸಖ್ಯ ತೊರೆಯಲು ಕಾರಣ ಹೇಳಿದ AIADMK ಅಧ್ಯಕ್ಷ ಪಳನಿಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.