‘ಯೆಲ್ಲೋ ಗ್ಯಾಂಗ್’ ಚಿತ್ರ ವಿಮರ್ಶೆ: ಗ್ಯಾಂಗ್‌ವಾರ್‌ನಲ್ಲಿ ಹೊಸಬರ ಮಿಂಚು


Team Udayavani, Nov 12, 2022, 2:57 PM IST

‘ಯೆಲ್ಲೋ ಗ್ಯಾಂಗ್’ ಚಿತ್ರ ವಿಮರ್ಶೆ: ಗ್ಯಾಂಗ್‌ವಾರ್‌ನಲ್ಲಿ ಹೊಸಬರ ಮಿಂಚು

ಭೂಗತ ಪ್ರಪಂಚ ಮತ್ತು ಅದರಲ್ಲಿ ನಡೆಯುವ ಚಟುವಟಿಕೆಗಳು ಯಾವಾಗಲೂ ತನ್ನೊಂದಿಗೆ ಒಂದಷ್ಟು ಕೌತುಕ, ರಹಸ್ಯ ಮತ್ತು ರೋಚಕತೆಗಳನ್ನು ಹುದುಗಿಸಿಟ್ಟುಕೊಂಡಿರುತ್ತದೆ. ಅಂತಹ ಒಂದಷ್ಟು ವಿಷಯಗಳನ್ನು ಹೆಕ್ಕಿ ತೆಗೆದು ಪ್ರೇಕ್ಷಕರ ಮುಂದೆ ತಂದಿರುವ ಸಿನಿಮಾ “ಯೆಲ್ಲೋ ಗ್ಯಾಂಗ್‌’.

ಮೊದಲೇ ಹೇಳಿದಂತೆ, ಇದೊಂದು ಕಂಪ್ಲೀಟ್‌ ಅಂಡರ್‌ವರ್ಲ್ಡ್ ಸಬೆjಕ್ಟ್ ಸಿನಿಮಾ. ಹಾಗಂತ, ಬಹುತೇಕ ಭೂಗತ ಕಥಾಹಂದರದ ಸಿನಿಮಾಗಳಲ್ಲಿ ಇರುವಂತೆ, ಕೇವಲ ರಕ್ತಪಾತವೊಂದೇ ಸಿನಿಮಾದ ಉದ್ದಕ್ಕೂ ಆವರಿಸಿಕೊಂಡಿಲ್ಲ. ಒಂದಷ್ಟು ಹೊಡೆದಾಟ ಮತ್ತು ಬಡಿದಾಟಗಳ ಜೊತೆಗೆ ಮನುಷ್ಯನ ದುರಾಸೆ, ಡ್ರಗ್ಸ್‌ ಮಾಫಿಯಾ, ಬ್ಲಾಕ್‌ ಮನಿ, ತಣ್ಣಗಿನ ಕ್ರೌರ್ಯ ಎಲ್ಲವೂ “ಯೆಲ್ಲೋ ಗ್ಯಾಂಗ್‌’ನಲ್ಲಿ ಅನಾವರಣವಾಗುತ್ತದೆ.

ಇನ್ನೊಂದು ವಿಶೇಷವೆಂದರೆ, ಒಂದು ಡಜನ್‌ ಗೂ ಹೆಚ್ಚು ಪಾತ್ರಗಳು ಸಿನಿಮಾದಲ್ಲಿರೂ ಈ ಸಿನಿಮಾದಲ್ಲಿ ಯಾರೂ ಕೂಡ ಹೀರೋ ಅಂತಿಲ್ಲ. ಇಲ್ಲಿ ಎಲ್ಲವೂ ಪಾತಕ ಲೋಕದಲ್ಲಿ ಸಿಲುಕಿಕೊಂಡ ಪಾತ್ರಗಳೇ ಆಗಿವೆ. ಆದರೆ ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಅಡ್ಡ ಹೆಸರು, ಮ್ಯಾನರಿಸಂಗಳು ನೋಡುಗರಿಗೆ ಒಂದಷ್ಟು ಮನರಂಜಿಸುತ್ತವೆ. ಒಂದು ಹಳೆಯದಾದ ಕಾರು, ಒಂದಷ್ಟು ಹಣದ ಕೈಚೀಲಗಳು, ಅದರ ಹಿಂದೆ ಬಿದ್ದ ಮೂರು ಗ್ಯಾಂಗಗಳು, ಹೀಗೆ ಹಣದ ಹಿಂದೆ ಬಿದ್ದವರು ಒಂದು ಸನ್ನಿವೇಶದಲ್ಲಿ ಮುಖಾಮುಖೀಯಾಗುತ್ತಾರೆ. ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಕಥಾಹಂದರ.

ಕಥೆಗೆ ಅಗತ್ಯವಾದ ವಿಷಯಗಳನ್ನು ಹೊರತುಪಡಿಸಿ ಅನಗತ್ಯವಾಗಿ ಹಾಡು, ಫೈಟ್ಸು, ಐಟಂ ಸಾಂಗ್‌, ಡ್ಯಾನ್ಸ್‌ ಯಾವುದೂ ಇಲ್ಲದೆ. ಹೇಳಬೇಕಾಗಿರುವ ವಿಷಯವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ನಟಿ ಅರ್ಚನಾ ಕೊಟ್ಟಿಗೆ ತಮ್ಮ ಪಾತ್ರದಲ್ಲಿ ಇಷ್ಟವಾಗು ತ್ತಾರೆ. ಬಹುತೇಕ ಎಲ್ಲಾ ಕಲಾವಿದರು ತೆರೆಮೇಲೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಪಾತ್ರಪೋಷಣೆಯಲ್ಲೂ ಒಂದಷ್ಟು ಸಹಜತೆ ಕಾ ಬಹುದು. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ ಎನ್ನಬಹುದು. ಎಲ್ಲೂ ಅತಿರೇಕವಿಲ್ಲದ ಡಾರ್ಕ್‌ಶೇಡಿನ ಸಿನಿಮಾದಂತೆ ಕಾಣುವ “ಯೆಲ್ಲೋ ಗ್ಯಾಂಗ್‌’ ಥ್ರಿಲ್ಲರ್‌ ಸಿನಿಮಾಗಳ ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ನೀಡಿ, ಇಷ್ಟವಾಗುವಂತಿದೆ.

ಜಿಎಸ್‌ಕೆ

ಟಾಪ್ ನ್ಯೂಸ್

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

1-sadsdsad

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

1-fwwewewqe

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ

b-l-santhosh

ಬಿ. ಎಲ್‌ ಸಂತೋಷ್‌ ಭಾಷಣಕ್ಕೆ ಅಧಿಕಾರಿಗಳ ಆಕ್ಷೇಪ… ಬಿಜೆಪಿ ಸಭೆಯಲ್ಲಿ ಆಗಿದ್ದೇನು?



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurudev hoysala

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್‌ ಅಬ್ಬರ

kabzaa

ಕಬ್ಜ ಚಿತ್ರ ವಿಮರ್ಶೆ; ಮಾಸ್ ಮನತಣಿಸುವ ಅರ್ಕೇಶ್ವರ ವೈಭವ

‘ಚೌಕಾಬಾರ’ ಮೆಚ್ಚುಗೆ

‘ಚೌಕಾಬಾರ’ ಮೆಚ್ಚುಗೆ

kannada movie mary review

ಚಿತ್ರ ವಿಮರ್ಶೆ; ಥ್ರಿಲ್ಲರ್ ‘ಮೇರಿ’ಯ ಜಾಡು ಹಿಡಿದು..

dddooradarshana kannada movie

ದೂರದರ್ಶನ ಚಿತ್ರ ವಿಮರ್ಶೆ; ಟಿವಿಯ ಸದ್ದು, ಅಹಂಗೊಂದು ಗುದ್ದು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

1-saddsadsad

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ 22 ಪ್ರಯಾಣಿಕರಿದ್ದ ಬಸ್

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

Salim Durani

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ