ಚಿತ್ರ ವಿಮರ್ಶೆ: ‘ಬನಾರಸ್‌’ ಪಯಣದಲ್ಲಿ ಹೊಸ ಅನುಭವ


Team Udayavani, Nov 5, 2022, 11:00 AM IST

ಚಿತ್ರ ವಿಮರ್ಶೆ: ‘ಬನಾರಸ್‌’ ಪಯಣದಲ್ಲಿ ಹೊಸ ಅನುಭವ

ಅತಿಯಾದ ಬಿಲ್ಡಪ್‌ಗಳಿಲ್ಲದ, ಹೊಸ ನಟನ ಮ್ಯಾನರೀಸಂ, ಆತನ ಪರ್ಸನಾಲಿಟಿಗೆ ಒಪ್ಪುವ, ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗುವ ಒಂದೊಳ್ಳೆಯ ಕಥೆ ಸಿಕ್ಕರೆ ಅದು “ಬನಾರಸ್‌’ ಆಗುತ್ತದೆ. ಝೈದ್‌ ಖಾನ್‌ ನಟನೆಯ “ಬನಾರಸ್‌’ ಸಿನಿಮಾ ನೋಡಿದವರಿಗೆ ಈ ತರಹದ ಒಂದು ಭಾವನೆ ಬಂದರೆ ತಪ್ಪಲ್ಲ. ಆ ಮಟ್ಟಿಗೆ ಇದೊಂದು ನೀಟಾದ, ಗಟ್ಟಿ ಕಥೆ ಇರುವ ಸಿನಿಮಾವಾಗಿ “ಬನಾರಸ್‌’ ಗಮನ ಸೆಳೆಯುತ್ತದೆ.

ಇದು ಪಕ್ಕಾ ನಿರ್ದೇಶಕರ ಸಿನಿಮಾ. ನಿರ್ದೇಶಕ ಜಯತೀರ್ಥ ಸಿನಿಮಾದಿಂದ ಸಿನಿಮಾಕ್ಕೆ ಹೊಸದನ್ನು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅದು “ಬನಾರಸ್‌’ನಲ್ಲೂ ಮುಂದುವರೆದಿದೆ. “ಬನಾರಸ್‌’ನಲ್ಲಿ ಜಯತೀರ್ಥ ಆಯ್ಕೆ ಮಾಡಿಕೊಂಡಿರುವ ಕಥೆ ಕನ್ನಡದ ಮಟ್ಟಿಗೆ ಹೊಸದು. ಟೈಮ್‌ ಲೂಪ್‌ ಕುರಿತಾದ ಕಥೆಯನ್ನು ಜಯತೀರ್ಥ ಆಯ್ಕೆ ಮಾಡಿಕೊಂಡಿದ್ದಾರೆ. ಈ ಟೈಮ್‌ ಲೂಪ್‌ನಲ್ಲಿ ಸಿಲುಕಿದಾಗ ಎದುರಾಗುವ ಸಮಸ್ಯೆ, ಮನಸ್ಥಿತಿ ಸೇರಿದಂತೆ ಹಲವು ಅಂಶಗಳ ಸುತ್ತ ಈ ಸಿನಿಮಾ ಸಾಗುತ್ತದೆ.

ಸಾಮಾನ್ಯವಾಗಿ ಒಬ್ಬ ಹೊಸ ಹುಡುಗ ಹೀರೋ ಆಗಿ ಲಾಂಚ್‌ ಆಗುತ್ತಾನೆ ಎಂದಾಗ ಭರ್ಜರಿ ಫೈಟ್‌, ಇಂಟ್ರೋಡಕ್ಷನ್‌, ಪಂಚಿಂಗ್‌ ಡೈಲಾಗ್‌… ಇದ್ದೇ ಇರಬೇಕೆಂದು ಪಟ್ಟು ಹಿಡಿಯುವ ನಾಯಕ ನಟರು, ನಿರ್ಮಾಪಕರು ಇದ್ದಾರೆ. ಆದರೆ, ಆ ವಿಷಯದಲ್ಲಿ ನಾಯಕ ಝೈದ್‌ ಖಾನ್‌ ತುಂಬಾ ಭಿನ್ನವಾಗಿ ನಿಲ್ಲುತ್ತಾರೆ. ಅವರ ಪರ್ಸನಾಲಿಟಿಗೆ ಹೊಂದುವ ಒಂದು ಕಥೆಯನ್ನು ಒಪ್ಪಿಕೊಂಡು ಅದಕ್ಕೆ ಎಷ್ಟು ನ್ಯಾಯ ಕೊಡಲು ಸಾಧ್ಯವೋ ಅಷ್ಟರ ಮಟ್ಟಿಗೆ ಕೊಟ್ಟಿದ್ದಾರೆ.

ಇದನ್ನೂ ಓದಿ:ನಾಳಿನ ಪಂದ್ಯಕ್ಕೆ ಮಳೆ ಬಂದರೆ? ಒಂದು ವೇಳೆ ದ.ಆಫ್ರಿಕಾ ಸೋತರೆ? ಹೇಗಿದೆ ‘ಸೆಮಿ’ ಲೆಕ್ಕಾಚಾರ

ಮೊದಲೇ ಹೇಳಿದಂತೆ ಇಲ್ಲೊಂದು ಗಟ್ಟಿಕಥೆ ಇದೆ. ತಂದೆಯ ಮಾತನ್ನು ಚಾಚೂತಪ್ಪದೇ ಪಾಲಿಸುವ ಮಗ, ಹುಡುಗಿಯೊಬ್ಬಳಿಗಾಗಿ ಬನಾರಸ್‌ಗೆ ಹೋಗುತ್ತಾನೆ. ಆ ಹುಡುಗಿ ಹಾಗೂ ಈತನ ನಡುವಿನ ಘಟನೆಯೊಂದು ಬನಾರಸ್‌ಗೆ ತೆರಳಲು ಮೂಲವಾಗುತ್ತದೆ. ಅಲ್ಲಿಂದ ಸಿನಿಮಾದ ನಿಜವಾದ ಜರ್ನಿ ಆರಂಭವಾಗುತ್ತದೆ. ನಿರ್ದೇಶಕ ಜಯತೀರ್ಥ ಈ ಬಾರಿ ಪ್ರೇಕ್ಷಕರಿಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡುತ್ತಾ ಹೋಗಿದ್ದಾರೆ. ಕೆಲವು ಕಡೆ ಸಿನಿಮಾ ಇನ್ನಷ್ಟು ವೇಗವಾಗಿರಬೇಕಿತ್ತು ಎನಿಸದೇ ಇರದು. ಆದರೆ, ಚಿತ್ರದ ದ್ವಿತೀಯಾರ್ಧ ಸಿನಿಮಾದ ಹೊಸ ವಿಷಯಗಳೊಂದಿಗೆ ವೇಗ ಪಡೆದುಕೊಂಡು ಸಾಗಿದೆ. ಮೊದಲೇ ಹೇಳಿದಂತೆ ಇದು ಟೈಮ್‌ ಲೂಪ್‌ ಸಿನಿಮಾವಾದ್ದರಿಂದ ಇಲ್ಲಿ ಸತ್ಯ, ಸುಳ್ಳು, ಭ್ರಮೆ… ಇಂತಹ ಸನ್ನಿವೇಶಗಳು ಬರುತ್ತವೆ. ಇದನ್ನು ಪ್ರೇಕ್ಷಕ ಬೇಗನೇ ಅರ್ಥಮಾಡಿಕೊಂಡು, ಮುಂದಿನ ದೃಶ್ಯಕ್ಕೆ ಅಣಿಯಾಗುವ ಸವಾಲನ್ನು ನೀಡಿದ್ದಾರೆ.

ನಾಯಕ ಝೈದ್‌ ಖಾನ್‌ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಇದು ಅವರ ಮೊದಲ ಚಿತ್ರ ಎನ್ನುವ ಭಾವನೆ ಬರದಂತೆ ನಟಿಸುವ ಮೂಲಕ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಸೋನಾಲ್‌ ಮೊಂತೆರೋ ದನಿ ಪಾತ್ರದ ಮೂಲಕ ಮಿಂಚಿದ್ದಾರೆ. ಉಳಿದಂತೆ ದೇವರಾಜ್‌, ಸುಜಯ್‌ ಶಾಸ್ತ್ರಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ “ಮಾಯಗಂಗೆ..’, “ಬೆಳಕಿನೆಡೆಗೆ …’ ಹಾಡುಗಳು ಇಂಪಾಗಿವೆ. ಅದ್ವೈತ್‌ ಗುರುಮೂರ್ತಿ ಛಾಯಾಗ್ರಹಣದಲ್ಲಿ “ಬನಾರಸ್‌’ ಕಂಗೊಳಿಸಿದೆ

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lineman movie review

Lineman movie review; ಜಾಲಿರೈಡ್‌ ನ‌ಲ್ಲಿ ‘ಲೈನ್‌ಮ್ಯಾನ್‌’

Dilkush Movie Review

Dilkush Movie Review; ತ್ರಿಕೋನ ಪ್ರೇಮದಲ್ಲಿ ಹೊಸಬರ ಆಟ

Mehabooba-Movie-Review

Mehabooba Movie Review; ತಿರುವುಗಳ ಹಾದಿಯಲ್ಲಿ ಪ್ರೇಮಪಯಣ

chow chow bath movie review

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

jog 101 kannada movie review

JOG 101 movie review; ಸುಂದರ ಜೋಗದಲ್ಲಿ ನಿಗೂಢ ಹೆಜ್ಜೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.