ಅಣ್ಣಾತೆ ಶೂಟಿಂಗ್ ಮುಗಿಸಿ ಮನೆಗೆ ಬಂದ ತಲೈವಾ : ಪತ್ನಿ ಆರತಿ ಬೆಳಗಿ ಸ್ವಾಗತ
Team Udayavani, May 13, 2021, 8:44 AM IST
ನವದೆಹಲಿ : ಕಳೆದ ಕೆಲವು ತಿಂಗಳಿಂದ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಇದೀಗ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಟ ರಜಿನಿಕಾಂತ್ ಹೈದರಾಬಾದ್ ನಿಂದ ಚೆನ್ನೈಗೆ ಮರಳಿದ್ದಾರೆ. ವಿಶೇಷ ಏನಂದ್ರೆ ರಜನಿಕಾಂತ್ ಚೆನ್ನೈನ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಪತ್ನಿ ಲತಾ ಆರತಿ ಬೆಳಗುವುದರ ಮೂಲಕ ಸ್ವಾಗತ ಕೋರಿದ್ದಾರೆ. ನಂತರ ಮನೆ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಕೈ ಬೀಸಿದ ರಜನಿಕಾಂತ್ ಒಳಗೆ ನಡೆದರು.
ಚೆನ್ನೈಗೆ ಆಗಮಿಸುವ ಮುನ್ನ ತಲೈವಾ ಹೈದರಾಬಾದ್ ನ ಮೋಹನ್ ಬಾಬು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಮೋಹನ್ ಬಾಬು ಮತ್ತು ಮಗಳು ಲಕ್ಷ್ಮಿ ಮಂಚು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
#Annaatthe #Rajinikanth @rajinikanth pic.twitter.com/CQmGnUvrVm
— SRILANKAN RAJINI ? FANS CLUB (SRFC) (@SrilankaSrfc) May 12, 2021
ಇನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ಅಣ್ಣಾತ್ತೆ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿತ್ತು. ಕೂಡಲೇ ಶೂಟಿಂಗ್ ರದ್ದುಗೊಳಿಸಲಾಗಿತ್ತು. ಹೈದರಾಬಾದ್ಗೆ ಚೆನ್ನೈಗೆ ತೆರಳಿದ್ದ ರಜನಿಕಾಂತ್ ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?
Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್ ಹಕ್ಕನ್ನು ಖರೀದಿಸಿದ ನೆಟ್ಫ್ಲಿಕ್ಸ್
Jr NTR: ಶೂಟಿಂಗ್ ಹಂತದಲ್ಲೇ 400 ಕೋಟಿ ರೂ. ಪ್ರೀ ಬ್ಯುಸಿನೆಸ್ ಮಾಡಿದ ʼದೇವರ ಪಾರ್ಟ್ -1ʼ?
Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್ ಅಂತ್ಯಕ್ರಿಯೆ