BBK10: ಇವರೇ ಬಿಗ್‌ ಬಾಸ್‌ ವಿನ್ನರ್‌ – ರನ್ನರ್‌..? ಯಾರ ಪರ ವೋಟಿಂಗ್‌ ಟ್ರೆಂಡ್‌

ಸಮೀಕ್ಷೆ ಪ್ರಕಾರ ಇವರೇ ಟ್ರೆಂಡ್…

Team Udayavani, Jan 27, 2024, 3:31 PM IST

BBK10: ಇವರೇ ಬಿಗ್‌ ಬಾಸ್‌ ವಿನ್ನರ್‌ – ರನ್ನರ್‌..? ಯಾರ ಪರ ವೋಟಿಂಗ್‌ ಟ್ರೆಂಡ್‌

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ -10ರ ಫಿನಾಲೆ ಇನ್ನೇನು ಕೆಲವೇ ಕ್ಷಣಗಳು ಮಾತ್ರ ಬಾಕಿ ಉಳಿದಿದೆ. ಫಿನಾಲೆಯಲ್ಲಿ ತನ್ನ ಮೆಚ್ಚಿನ ಸ್ಪರ್ಧಿ ಗೆಲ್ಲಬೇಕೆನ್ನುವ ಕಾರಣ ವೀಕ್ಷಕರು ವೋಟ್‌ ಮಾಡುತ್ತಿದ್ದಾರೆ.

113 ದಿನಗಳ ದೊಡ್ಮನೆ ಜರ್ನಿ ಮುಗಿಸಿ ಅಂತಿಮವಾಗಿ 6 ಜನರು ಫಿನಾಲೆ ಸ್ಥಾನಿಯಾಗಿ ವೇದಿಕೆಗೆ ಬರಲಿದ್ದಾರೆ. ಕಿಚ್ಚ ಸುದೀಪ್‌ ಯಾರ ಕೈ ಎತ್ತಿ ಇವರೇ ವಿನ್ನರ್‌ ಎಂದು ಘೋಷಿಸುವವರೆಗೂ ವೀಕ್ಷಕರಲ್ಲಿ ಕುತೂಹಲ ಹಾಗೆಯೇ ಮನೆ ಮಾಡಿರುತ್ತದೆ.

ಸಂಗೀತಾ, ಕಾರ್ತಿಕ್‌, ವಿನಯ್‌, ಪ್ರತಾಪ್‌, ತುಕಾಲಿ ಸಂತೋಷ್‌ ಹಾಗೂ ವರ್ತೂರು ಸಂತೋಷ್‌ ಅವರು ಫಿನಾಲೆಗೆ ಕಾಲಿಟ್ಟಿದ್ದಾರೆ. ಇವರಲ್ಲಿ ಒಬ್ಬರು ಬಿಗ್‌ ಬಾಸ್‌ ಟ್ರೋಫಿ ಗೆಲ್ಲಲಿದ್ದಾರೆ.

ಸಮೀಕ್ಷೆ ಪ್ರಕಾರ ಇವರೇ ಟ್ರೆಂಡ್…

ಬಿಗ್‌ ಬಾಸ್‌ ನೋಡುವ ವೀಕ್ಷಕರ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ‘ಸ್ಟಡಿ ಬಜ್‌ʼ ಎನ್ನುವ ವೆಬ್‌ ಸೈಟ್‌ ವೊಂದು ಸಮೀಕ್ಷೆ ಮಾಡಿದ್ದು, ಈ ವೆಬ್‌ ಸೈಟ್‌ ನಲ್ಲಿ ಬಂದ ಟ್ರೆಂಡ್‌ ಪ್ರಕಾರ ಡ್ರೋನ್‌ ಪ್ರತಾಪ್‌ ಅವರು ಅತೀ ಹೆಚ್ಚು ಮತ ಪಡೆದು ಮುಂಚೂಣಿಯಲ್ಲಿದ್ದಾರೆ ಎಂದು ತೋರಿಸಿರುವುದನ್ನು ʼಒನ್‌ ಇಂಡಿಯಾʼ ವರದಿ ಮಾಡಿದೆ.

ಈ ವೆಬ್‌ ಸೈಟ್‌ ಸಮೀಕ್ಷೆಯಲ್ಲಿ ಬಂದ ಪ್ರಕಾರ, ಪ್ರತಾಪ್ ಅವರು ಶೇ. 40ರಷ್ಟು ಮತ (1,55,922 ಮತಗಳು) ಗಳಿಸಿದ್ದಾರೆ. ಅವರ ಹತ್ತಿರದ ಸ್ಪರ್ಧಿ ಕಾರ್ತಿಕ್ ಅವರು, ಶೇ.31ರಷ್ಟು ಮತ (1,20,847 ಮತ) ಗಳಿಸಿದ್ದಾರೆ. ಇನ್ನು ಸಂಗೀತಾ ಶೇ.12 (49,482 ಮತ) ಮತ ಪಡೆದು ಮೂರನೇ ಸ್ಥಾನದಲ್ಲಿದ್ದರೆ, ವರ್ತೂರು ಸಂತೋಷ್ ಶೇ.8 ಮತ (31,713 ಮತ) ಪಡೆದಿದ್ದಾರೆ.

ವಿನಯ್ ಕೇವಲ ಶೇ.6ರಷ್ಟು (22,953 ಮತ) ಗಳಿಸಿದ್ದಾರೆ. ಇದರರ್ಥ ಅವರು ಐದನೇ ಸ್ಥಾನಕ್ಕೆ ಬರುತ್ತಾರೆ ಮತ್ತು ಅಂತಿಮ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ಅವರು ಕನಿಷ್ಠ ಮತಗಳನ್ನು ಪಡೆದಿದ್ದಾರೆ.

ಇದು ಅಧಿಕೃತ ಸಮೀಕ್ಷೆಯಲ್ಲ ಮತ್ತು ಮತದಾನವು ಇನ್ನೂ ಪ್ರಗತಿಯಲ್ಲಿರುವ ಕಾರಣ ಫಲಿತಾಂಶದ ಲೆಕ್ಕಚಾರ ಬದಲಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಇವರೇ ವಿನ್ನರ್‌, ರನ್ನರ್‌ ಅಪ್..?:‌ ಫಿನಾಲೆಯಲ್ಲಿರುವ ಆರು ಜನರ ಪೈಕಿ ಇಂದಿನ ಸಂಚಿಕೆಯಲ್ಲಿ ಮೂವರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ವಿನ್ನರ್‌ , ರನ್ನರ್‌ ಅಪ್‌ ಗಳ ನಾನಾ ಊಹಾಪೋಹಾಗಳು ಹರಿದಾಡುತ್ತಿದೆ.

ಸಂಗೀತಾ ಶೃಂಗೇರಿ ಬಿಗ್‌ ಬಾಸ್‌ ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಕೇಳಿ ಬರುತ್ತಿರುವ ಮೊದಲ ಹೆಸರು. ಸದ್ಯದ ಸೋಶಿಯಲ್‌ ಮೀಡಿಯಾ ಟ್ರೆಂಡ್‌ ಗಳ ಪ್ರಕಾರ ಸಂಗೀತಾ ಬಿಗ್‌ ಬಾಸ್‌ ವಿಜೇತರಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಾರ್ತಿಕ್‌ ಮಹೇಶ್‌ ರನ್ನರ್‌ ಅಪ್‌ ಆಗಲಿದ್ದಾರೆ. ಡ್ರೋನ್‌ ಪ್ರತಾಪ್‌ ಫಸ್ಟ್‌ ರನ್ನರ್‌ ಅಪ್‌ ಆಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ಯಾವುದಕ್ಕೂ ಫಿನಾಲೆ ಎಪಿಸೋಡ್‌ ಮುಕ್ತಾಯದವರೆಗೂ ಕಾದು ನೋಡಬೇಕಿದೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Karthik Mahesh: ಬಿಗ್‌ ಬಾಸ್‌ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್‌ ಮಹೇಶ್

Karthik Mahesh: ಬಿಗ್‌ ಬಾಸ್‌ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್‌ ಮಹೇಶ್

15

Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಜನಪ್ರಿಯ ಯೂಟ್ಯೂಬರ್‌; ನೆಟ್ಟಿಗರು ಶಾಕ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.