ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಬಂದ ಯೂಟ್ಯೂಬರ್:‌ ಯಾರು ಈ ಅರ್ಮಾನ್ ಮಲಿಕ್?

ಮೊದಲ ಪತ್ನಿಯ ಸ್ನೇಹಿತೆಯೇ ಎರಡನೇ ಪತ್ನಿ.!

Team Udayavani, Jun 22, 2024, 3:16 PM IST

4

ಮುಂಬಯಿ: ಹಿಂದಿ ಬಿಗ್‌ ಬಾಸ್‌ ಓಟಿಟಿಯ ಮೂರನೇ ಸೀಸನ್‌ ಆರಂಭವಾಗಿದೆ. ವಿವಿಧ ಕ್ಷೇತ್ರದಿಂದ ಬಂದಿರುವ ಸ್ಪರ್ಧಿಗಳು ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.

ಹೈದರಾಬಾದ್‌ ಮೂಲದ ಖ್ಯಾತ ಯೂಟ್ಯೂಬರ್‌ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಿದ್ದಾರೆ. ಇಬ್ಬರು ಪತ್ನಿಯರನ್ನು ಹೊಂದಿರುವ ಅರ್ಮಾನ್‌ ಮಲಿಕ್‌ ಯಾರು ಅವರ ಹಿನ್ನೆಲೆ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಅರ್ಮಾನ್‌ ಮಲಿಕ್‌ ಒಬ್ಬ ಯೂಟ್ಯೂಬರ್‌ ಅವರು, ಫ್ಯಾಮಿಲಿ ಫಿಟ್ನೆಸ್‌ ಎಂಬ ಯೂಟ್ಯೂಬ್‌ ಚಾನೆಲ್‌ ಮೂಲಕ ಲಕ್ಷಂತಾರ ಸಬ್‌ ಸ್ಕ್ರೈಬರ್ಸ್‌ ಗಳನ್ನು ಹೊಂದಿದ್ದಾರೆ. ಇಬ್ಬರೊಂದಿಗೂ ಅನೋನ್ಯವಾಗಿಯೇ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ.

2022ರ ಡಿಸೆಂಬರ್‌ನಲ್ಲಿ ತನ್ನ ಇಬ್ಬರು ಪತ್ನಿಯರು ಗರ್ಭಿಣಿ ಆಗಿದ್ದಾರೆ ಎನ್ನುವ ಪೋಸ್ಟ್‌ ಹಂಚಿಕೊಂಡ ಬಳಿಕ ಅರ್ಮಾನ್‌ ಟ್ರೋಲ್‌ ಆಗಿದ್ದರು. ಅನೇಕರು ಅವರ ಸಂಬಂಧದ ಬಗ್ಗೆ ಕೀಳಾಗಿ ಮಾತನಾಡಿದ್ದರು. ಆದರೆ ಅದ್ಯಾವುದಕ್ಕೂ ಅರ್ಮಾನ್‌ ತೆಲೆಕೆಡಿಸಿಕೊಂಡಿರಲಿಲ್ಲ.

ಇದನ್ನೂ ಓದಿ: Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅರ್ಮಾನ್‌, ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಅವರೊಂದಿಗೆ ಪರಿಚಯವಾಗಿ ಪ್ರೀತಿಸಲು ಶುರು ಮಾಡುತ್ತಾರೆ.  ಕೆಲ ಸಮಯದ ಬಳಿಕ ಕೋರ್ಟಿನಲ್ಲಿ ಅರ್ಮಾನ್‌ – ಪಾಯಲ್‌ ಮದುವೆ ಆಗುತ್ತಾರೆ. ಈ ದಂಪತಿಗೆ ಚಿರಾಯ್‌ ಎಂಬ ಮಗ ಹುಟ್ಟುತ್ತಾನೆ.

2018 ರಲ್ಲಿ ಅರ್ಮಾನ್‌ ಗೆ ಪಾಯಲ್‌ ಅವರ ಸ್ನೇಹಿತೆಯಾಗಿದ್ದ ಕೃತಿಕಾ ಎನ್ನುವಾಕೆಯ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗುತ್ತದೆ. ಈ ವಿಚಾರವನ್ನು ಅರ್ಮಾನ್‌ ಪಾಯಲ್‌ ಗೆ ಹೇಳುತ್ತಾರೆ. ಮೊದಲ ಪತ್ನಿಯ ಸಮ್ಮುಖದಲ್ಲೇ ಅರ್ಮಾನ್‌ ಖುಷಿಯಿಂದಲೇ ಕೃತಿಕಾ ಅವರನ್ನು ವಿವಾಹವಾಗುತ್ತಾರೆ. ಆದರೆ ಪಾಯಲ್‌ ಅವರನ್ನು ಆಕೆಯ ಕುಟುಂಬ ಅರ್ಮಾನ್‌ ಅವರಿಂದ ಬಲವಂತವಾಗಿ ದೂರ ಮಾಡುತ್ತಾರೆ.

ಇದಾದ ಕೆಲ ಸಮಯದಲ್ಲಿ ಅರ್ಮಾನ್‌ ಖಿನ್ನತೆಗೆ ಜಾರುತ್ತಾರೆ. ಅತ್ತ ಪಾಯಲ್‌ಗೆ ಆಕೆಯ ಮನೆಯವರು ಸಣ್ಣ ಕೋಣೆಯಲ್ಲಿ ಕೂಡಿಟ್ಟು ಹಿಂಸೆ ನೀಡಲು ಶುರು ಮಾಡುತ್ತಾರೆ. ಬೇರೆ ಮದುವೆ ಆಗುವಂತೆ ಬಲವಂತ ಮಾಡುತ್ತಾರೆ. ಆದರೆ ಪಾಯಲ್‌ ಅರ್ಮಾನ್‌ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟು ಜಾಸ್ತಿ ಸಮಯ ಇರಲು ಸಾಧ್ಯವಾಗುವುದಿಲ್ಲ. ಪಾಯಲ್‌ ತನ್ನ ಮನೆಯವರನ್ನು ಬಿಟ್ಟು ಅರ್ಮಾನ್‌ ಜೊತೆ ಬರುತ್ತಾಳೆ. ಅರ್ಮಾನ್‌ ಪಾಯಲ್‌, ಕೃತಿಕಾ ಅವರೊಂದಿಗೆ ಖುಷಿಯಲ್ಲೇ ಜೀವನ ನಡೆಸುತ್ತಾರೆ.

ಅರ್ಮಾನ್‌ ತನ್ನ ಪತ್ನಿಯರಾದ ಪಾಯಲ್‌ ಹಾಗೂ ಕೃತಿಕಾ ಇಬ್ಬರು ತಾಯಿಯಾಗುತ್ತಿದ್ದಾರೆ ಎನ್ನುವ ಫೋಟೋವನ್ನು ಹಂಚಿಕೊಂಡು ʼಮೈ ಫ್ಯಾಮಿಲಿʼ ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದರು. ಆ ಫೋಟೋ ವೈರಲ್‌ ಆಗುವುದರ ಜೊತೆ ಅರ್ಮಾನ್‌ ಲವ್‌ ಸ್ಟೋರಿ ಕೂಡ ಹೊರ ಜಗತ್ತಿಗೆ ತಿಳಿಯುತ್ತದೆ.

ಯೂಟ್ಯೂಬರ್‌ ಹಾಗೂ ವ್ಲಾಗರ್ ಆಗಿರುವ ಅರ್ಮಾನ್‌ 14 ಮಿಲಿಯನ್‌ ಗೂ ಅಧಿಕ ಸಬ್‌ ಸ್ಕ್ರೈಬರ್ಸ್‌ನ್ನು ಹೊಂದಿದ್ದಾರೆ. ಯೂಟ್ಯೂಬ್‌ ನಿಂದಲೇ ಇವರು ಕೋಟಿಗಟ್ಟಲೆ ಆದಾಯವನ್ನು ಗಳಿಸುತ್ತಿದ್ದಾರೆ.

Ad

ಟಾಪ್ ನ್ಯೂಸ್

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

10-

Madikeri: ಹಸು, ಎಮ್ಮೆಗಳ ಕಳ್ಳತನ : ನಾಲ್ವರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

BIGG BOSS: ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼಬಿಗ್‌ ಬಾಸ್‌ʼ

ಟಿವಿಗಿಂತ ಒಟಿಟಿಯಲ್ಲಿ ಮೊದಲು ಪ್ರಸಾರ ಕಾಣಲಿದೆ ʼBigg Bossʼ: ಈ ಬಾರಿ ಮೂವರು ನಿರೂಪಕರು?

11

Smriti Irani: ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ʼತುಳಸಿʼ ಪಾತ್ರದ ಫಸ್ಟ್‌ ಲುಕ್‌ ಔಟ್

4

Bigg Boss: ಸಾಮಾನ್ಯರಿಗೆ ಬಿಗ್‌ ಬಾಸ್‌ ಮನೆಗೆ ಅವಕಾಶ: ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ

Zee Kannada: ‘ವಿಧಿ’ಯಾಟದ ವಿರುದ್ಧ ‘ಪ್ರೀತಿ’ಯ ಹೋರಾಟ; ಬರ್ತಿದೆ ಹೊಸ ಧಾರಾವಾಹಿ ‘ಕರ್ಣ

Zee Kannada: ‘ವಿಧಿ’ಯಾಟದ ವಿರುದ್ಧ ‘ಪ್ರೀತಿ’ಯ ಹೋರಾಟ; ಬರ್ತಿದೆ ಹೊಸ ಧಾರಾವಾಹಿ ‘ಕರ್ಣ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

death

Bantwal: ಪಾಣೆಮಂಗಳೂರು; ಮಹಿಳೆ ಆತ್ಮಹ*ತ್ಯೆ

POlice

Punjalkatte: ಸಿದ್ದಕಟ್ಟೆ; ಅಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ

2

Mangaluru: ದಾವಣಗೆರೆ ಮೂಲದ ಯುವತಿ ನಾಪತ್ತೆ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

hun-Arrest

ರಸ್ತೆಯಲ್ಲಿ ವ್ಹೀಲಿಂಗ್‌, ಲಾಂಗ್‌ ಹಿಡಿದು ರೀಲ್ಸ್‌: ಯುವಕ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.