‘ದಿ ಕಾಶ್ಮೀರ್ ಫೈಲ್ಸ್”..ಕಾಶ್ಮೀರಿ ಪಂಡಿತರ ನೋವಿನ ನೈಜ ಕಥಾನಕ ಅನಾವರಣ
ಸೂಪರ್ ಹಿಟ್ ಚಿತ್ರದಲ್ಲಿ ಅಂತಹದ್ದೇನಿದೆ ?
Team Udayavani, Mar 14, 2022, 8:21 PM IST
ದೇಶದ ಮುಕುಟ ಮಣಿಯಾಗಿರುವ ಕಾಶ್ಮೀರದಲ್ಲಿ ನಡೆದ ನೈಜ ಘಟನೆ ಆಧಾರಿತ ‘ಕಾಶ್ಮೀರ್ ಫೈಲ್ಸ್’ ಚಿತ್ರ ಸದ್ಯ ಎಲ್ಲಾ ಬಿಗ್ ಬಜೆಟ್, ಸೂಪರ್ ಸ್ಟಾರ್ ಗಳ ಚಿತ್ರಗಳಿಗಿಂತ ಜನಪ್ರಿಯತೆ ಪಡೆಯುತ್ತಿದೆ. ಚಿತ್ರಕ್ಕೆ ಈಗಾಗಲೇ ಕರ್ನಾಟಕ ಸೇರಿ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ನೀಡಿವೆ.
ಹಾಸ್ಯವೋ , ಭರ್ಜರಿ ಸಾಹಸವೋ , ಸೂಪರ್ ಹಿಟ್ ಹಾಡುಗಳು ಯಾವುದೂ ಇಲ್ಲದೆ ಕೇವಲ ಕಥಾ ವಸ್ತು ಹಲವರನ್ನು ಚಿತ್ರಮಂದಿರದತ್ತ ಸೆಳೆದ ಇತ್ತೀಚಿಗಿನ ಚಿತ್ರ ಇದಾಗಿದೆ. ಬಿಜೆಪಿ ನಾಯಕರು ಸೇರಿ ಹಲವಾರು ಮಂದಿ ಚಿತ್ರ ವೀಕ್ಷಿಸಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ. ಇನ್ನೊಂದೆಡೆ ಚಿತ್ರದ ಕುರಿತು ಟೀಕೆಗಳು ಕೇಳಿ ಬಂದಿದ್ದು, ಮಾಧ್ಯಮಗಳಲ್ಲಿ ಮತ್ತು ಚಿತ್ರ ಮಂದಿರಗಳಲ್ಲಿ ಸಣ್ಣ ಮಟ್ಟಿಗಿನ ಸಂಘರ್ಷಕ್ಕೂ ಕಾರಣವಾಗಿಸಲು ಪ್ರಯತ್ನಗಳು ನಡೆಯುತ್ತಿವೆ.
ರಾಷ್ಟ್ರೀಯತೆಯನ್ನು ಮೂಲ ಉದ್ದೇಶವಾಗಿಟ್ಟುಕೊಂಡು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಕಥೆಯನ್ನು ಸಿದ್ದಪಡಿಸಿ, ಚಿತ್ರವನ್ನು ಜನರ ಮುಂದಿಟ್ಟು ಯಶಸ್ಸು ಕಂಡು ಕೊಂಡಿದ್ದಾರೆ. 1990 ರಲ್ಲಿ ಕಾಶ್ಮೀರ ಕಣಿವೆಯಲ್ಲಿದ್ದ ಎಲ್ಲವನ್ನೂ ಬಿಟ್ಟು ಹೋದ ಐದು ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ದುಸ್ಥಿತಿಯನ್ನು ಹೊರತಂದಿರುವ ಪ್ರಯತ್ನಕ್ಕಾಗಿ ಚಲನಚಿತ್ರವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.
ಚಿತ್ರದ ತಾರಾಗಣದ ಕುರಿತು ಗಮನಿಸುವುದಾದರೆ, ಹಿರಿಯ ನಟ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪಲ್ಲವಿ ಜೋಶಿ , ದರ್ಶನ್ ಕುಮಾರ್ , ಪ್ರಕಾಶ್ ಬೆಳವಾಡಿ, ಪುನೀತ್ ಇಸಾರ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಅಂತಹದ್ದೇನಿದೆ ?
ಬಿಡುಗಡೆಗೂ ಮುನ್ನ ಕಥೆಯ ಮೂಲಕವೇ ಭಾರಿ ಕುತೂಹಲ ಕೆರಳಿಸಿದ್ದ ಚಿತ್ರ ಆರಂಭವಾಗುವುದು ಮುಸ್ಲಿಂ ಹುಡುಗನ ಜತೆ ಹಿಂದೂ ಬಾಲಕ ನೊಬ್ಬ ಕ್ರಿಕೆಟ್ ಆಡುವ ಮೂಲಕ, ರೇಡಿಯೋದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆ ಕೇಳಿ ಹಿಂದೂ ಬಾಲಕ ಘೋಷಣೆ ಕೂಗಿ ಸಂಭ್ರಮಿಸುತ್ತಾನೆ, ಅದಾಗುತ್ತಲೇ ಸುತ್ತಲಿದ್ದ ಮುಸ್ಲಿಂ ಯುವಕರು ಬಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಗುಂಡಿನ ಮೊರೆತ ಕೇಳಿಬರುತ್ತದೆ.
ಒಂದೋ ಮತಾಂತರಗೊಳ್ಳಿ, ಇಲ್ಲವಾದಲ್ಲಿ ಓಡಿಹೋಗಿ ಎಂದು ದೊಂಬಿಗಳನ್ನು ಎಬ್ಬಿಸಿ ಜನರನ್ನು ಭಯಭೀತರನ್ನಾಗಿಸಲಾಗುತ್ತದೆ. ಕಾಶ್ಮೀರಿ ಪಂಡಿತರ ಮೇಲೆ ದ್ವೇಷ ಸಾಧಿಸಿದ್ದಾದರೂ ಯಾಕೆ ? ಪರಿಸ್ಥಿತಿ ಎದುರಿಸುವಲ್ಲಿ ಸರಕಾರ ಎಡವಿದ್ದು ಎಲ್ಲಿ? ಹಲವು ಪ್ರಶ್ನೆಗಳಿಗೆ ಚಿತ್ರದ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಸಿನಿಮಾದಲ್ಲಿ ರಂಜನೆಯ ಉದ್ದೇಶ ಕಂಡು ಬರುವುದಿಲ್ಲ.ನೋಡುಗರಿಗೆ ಮೂರು ದಶಕದ ಹಿಂದಿನ ಘೋರ ದೃಶ್ಯಗಳನ್ನು ಕಾಣಿಸುವಲ್ಲಿ ಹೆಚ್ಚು ಮಹತ್ವ ನೀಡಲಾಗಿದ್ದು, ಆಗಿನ ಕರಾಳತೆಯನ್ನು ಅನುಭವಿಸಿದ ಯಾತನೆಯ ಬದುಕನ್ನು ಮನಮುಟ್ಟುವಂತೆ ತೋರಿಸಲಾಗಿದೆ.
ಚಿತ್ರದಲ್ಲಿ ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಮತ್ತು ಅವರ ಕುಟುಂಬ ಮತ್ತು ಅವರು ಹೇಗೆ ನಿರಾಶ್ರಿತರಾಗಿದ್ದರು ಎಂಬುದನ್ನು ವಿವರಿಸಲಾಗಿದೆ. ಮೊದಲಾರ್ಧದಲ್ಲಿ ಹಿನ್ನೆಲೆಯನ್ನು ತೋರಿಸಿದರೆ, ದ್ವಿತೀಯಾರ್ಧದಲ್ಲಿ ಇಂದಿನ ಯುವ ಪೀಳಿಗೆ ಹೇಗೆ ಮತ್ತು ಏಕೆ ತಮ್ಮ ಹಿಂದಿನದನ್ನು ಮರೆಯಬಾರದು ಮತ್ತು ಯಾಕೆ ನೆನಪಿಸಿಕೊಳ್ಳಬೇಕು ಎನ್ನುವುದನ್ನು ಸಾರಿದೆ.
ಮುಗ್ಧ ಜೀವಗಳ ಮೇಲೆ ನಡೆದ ಹಿಂಸಾಚಾರ, ಕ್ರೌರ್ಯ, ಹತ್ಯಾಕಾಂಡ, ಶಾಂತಿ, ಮಾನವ ಹಕ್ಕುಗಳು ಮತ್ತು ರಾಜಕೀಯ ಕಾರ್ಯಸೂಚಿಗಳು ಸಂಘರ್ಷದ ಸಿದ್ಧಾಂತಗಳು ಚಲನಚಿತ್ರವನ್ನು ಹೆಚ್ಚು ಚಿಂತನಶೀಲವಾಗಿಸಿವೆ. ಕಾಶ್ಮೀರಿ ಪಂಡಿತರ ಮೇಲಿನ ಶ್ರಮದಾಯಕ ಸಂಶೋಧನೆ ಮತ್ತು ಹಿಂದಿನ ಆರು ನರಮೇಧಗಳ ನಂತರ ಅವರ ಬದುಕುಳಿಯುವಿಕೆಯ ಕುರಿತು ಚಿತ್ರ ಮಹತ್ವಿಕೆ ತೋರಿದೆ.
ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಅವರ ಪಾತ್ರಗಳು ಪರಕಾಯ ಪ್ರವೇಶ ಮಾಡಿ, ಎಲ್ಲರನ್ನೂ ಬೆರಗು ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ