ಮಲೇರಿಯಾ ಔಷಧ ಶೋಧಕ ಪಿ.ಸಿ.ರಾಯ್
Team Udayavani, Apr 12, 2020, 7:15 AM IST
ಕೋವಿಡ್ 19 ವೈರಸ್ ಸೋಂಕನ್ನು ಹಿಮ್ಮೆಟ್ಟಿಸುವ ಪ್ರಬಲ ಅಸ್ತ್ರ ಎಂದೇ ನಂಬಲಾಗಿರುವ, ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್ಸಿಕ್ಯು) ನಿಂದಾಗಿ ಭಾರತೀಯ ರಸಾಯನಶಾಸ್ತ್ರದ ಪಿತಾಮಹ ಪ್ರಫುಲ್ಲ ಚಂದ್ರ ರಾಯ್ ಅವರು ಹಾಗೂ ಅವರು ಸ್ಥಾಪಿಸಿದ್ದ ಕಂಪನಿಯೊಂದು ಬೆಳಕಿಗೆ ಬಂದಿದೆ. ಅವರು ಶ್ರಮ ವಹಿಸಿ ಸಂಶೋಧಿಸಿದ ಔಷಧವನ್ನು ಅಮೆರಿಕ, ಇಸ್ರೇಲ್, ಬ್ರೆಜಿಲ್ ಸೇರಿದಂತೆ ಹಲವಾರು ರಾಷ್ಟ್ರಗಳು ಭಾರತದಿಂದ ತರಿಸಿಕೊಂಡಿವೆ.
ಪ್ರಫುಲ್ಲ ಚಂದ್ರ ರಾಯ್ ಅವರು 1892ರಲ್ಲಿ ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಲೇರಿಯಾ ನಿರೋಧಕ ಔಷಧ ಉತ್ಪಾಧಿಸುತ್ತಿದ್ದ ಸಾರ್ವಜನಿಕ ಕ್ಷೇತ್ರದ ಏಕೈಕ ಕಂಪನಿ ಎಂಬ ಹೆಗ್ಗಳಿಕೆ ಕೋಲ್ಕತಾ ಮೂಲದ ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ನದ್ದಾಗಿದೆ. ಆದರೆ ಕಂಪನಿಯು ಎಚ್ಸಿಕ್ಯು ಉತ್ಪಾದನೆಯನ್ನು ದಶಕದ ಹಿಂದೆಯೇ ನಿಲ್ಲಿಸಿದ್ದು, ಶೀಘ್ರವೇ ಔಷಧ ಉತ್ಪಾದನೆ ಪುನರಾರಂಭಕ್ಕೆ ಅನುಮತಿ ಪಡೆಯುವುದಾಗಿ ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ.
ರಾಯ್ ಅವರು ಏಕಾಂಗಿಯಾಗಿ ಕಂಪನಿ ಸ್ಥಾಪಿಸಿ ಮುನ್ನಡೆಸುವ ಮೂಲಕ ಬೆಂಗಾಲದಲ್ಲಿ ಯುವಜನರಿಗೆ ಪ್ರೇರಣೆಯಾಗಿದ್ದರು. 1887ರಲ್ಲಿ ಎಡಿನ್ ಬರ್ಗ್ ವಿವಿಯಿಂದ ಡಿಎಸ್ಸಿ ಪದವಿ ಪಡೆದ ರಾಯ್ ಅವರು, ಪ್ರಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಬೋಧನೆ ಮಾಡುತ್ತಿದ್ದರು.
ಬಳಿಕ 700 ರೂ. ಬಂಡವಾಳ ಹೂಡುವ ಮೂಲಕ ಬೆಂಗಾಲ್ ಕೆಮಿಕಲ್ ವರ್ಕ್ಸ್ ಸ್ಥಾಪಿಸಿ, ಅಲ್ಲಿ ಉತ್ಪಾದಿಸಿದ ಆಯುರ್ವೇದ ಉತ್ಪನ್ನಗಳನ್ನು 1893ರ ಭಾರತೀಯ ವೈದ್ಯಕೀಯ ಸಮ್ಮೇಳನದಲ್ಲಿ ಪ್ರಸ್ತುತಪಡಿಸಿದ್ದರು. ಬಳಿಕ 1901ರಲ್ಲಿ ಪ್ರಫುಲ್ಲ ಚಂದ್ರ ರಾಯ್ ಅವರು 2 ಲಕ್ಷ ರೂ. ಹೂಡಿಕೆಯೊಂದಿಗೆ ಬೆಂಗಾಲ್ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಸಂಸ್ಥೆ ಸ್ಥಾಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ