Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ


Team Udayavani, Jun 8, 2024, 1:26 PM IST

Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ

ದುಬೈ: ಕರ್ನಾಟಕ ಸಂಘ ದುಬೈಯ ವರ್ಷದ ನೃತ್ಯ ಸಂಭ್ರಮ ಕಾರ್ಯಕ್ರಮ ಯುಎಇ ಮಟ್ಟದ ದುಬೈ ಡ್ಯಾನ್ಸ್‌ ಕಪ್‌-2024 ಸ್ಪರ್ಧೆಯನ್ನು, 2024 ಮೇ 26ರಂದು ಇಂಡಿಯನ್‌ ಅಕಾಡೆಮಿ ಸ್ಕೂಲ್‌ ದುಬೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ದುಬೈ ಡ್ಯಾನ್ಸ್‌ ಕಪ್‌ 2024ರ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಡಾ| ಸಂಜಯ್‌ ಶಾಂತಾರಾಮ್, ಶಿಲ್ಪಾ ನಾಯರ್‌, ಯತೀಶ್‌ ಅಮೀನ್‌ ಮತ್ತು ದೇವಾಂಶಿ ನೃತ್ಯ, ಡ್ರಾಯಿಂಗ್‌ ಮತ್ತು ರಂಗೋಲಿ ತೀರ್ಪುಗಾರರಾಗಿ ಗಣೇಶ್‌ ರೈ, ಸುಸ್ಮಿತಾ ಧ್ರುವ , ಏಕವ್ಯಕ್ತಿ ನಟನೆಗೆ ವಿಶ್ವನಾಥ ಶೆಟ್ಟಿ, ಪಿಂಕಿ ರಾಣಿ, ಕಾರ್ಯಕ್ರಮದ ಟ್ರೇಡ್‌ಮಾರ್ಕ್‌ ಎಂದು ಬಿಂಬಿಸಲಾದ ವಿಶೇಷವಾದ ಲಿಮೋಸಿನ್ನಲ್ಲಿ ಪ್ರಭಾವಶಾಲಿ ತೀರ್ಪುಗಾರರನ್ನು ಸ್ಥಳಕ್ಕೆ ಕರೆತರಲಾಯಿತು.‌

ದುಬೈ ಡ್ಯಾನ್ಸ್‌ ಕಪ್‌ನ್ನು ಖ್ಯಾತ ತೀರ್ಪುಗಾರ ಡಾ| ಸಂಜಯ್‌ ಶಾಂತಾರಾಮ್‌ ಮತ್ತು ಅವರ ಶಿಷ್ಯ ಕೌಶಿಕ್‌ ಗಂಗಾಧರ್‌ ಉದ್ಘಾಟಿಸಿದರು, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್‌, ಪ್ರಧಾನ ಕಾರ್ಯದರ್ಶಿ ಮನೋಹರ್‌ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ್‌ ರಾವ್‌, ಪೋಷಕ ರೊನಾಲ್ಡ್‌ ಮಾರ್ಟಿಸ್‌, ಸಲಹೆಗಾರ ಜಯಂತ್‌ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಒಟ್ಟು ಏಳು ತೀರ್ಪುಗಾರರು ಅತ್ಯುತ್ತಮ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥಾಪಕ ಸದಸ್ಯ ಸುಧಾಕರ ರಾವ್‌ ಪೇಜಾವರ ಅವರು ಕರ್ನಾಟಕ ಸಂಘ ದುಬೈಯ ಸಂಸ್ಥಾಪನ ದಿನಗಳು ಮತ್ತು 39 ವರ್ಷಗಳ ಸಂಘ ಪರಂಪರೆಯ ಸಂಕ್ಷಿಪ್ತ ಪರಿಚಯವನ್ನು ನೀಡಿದರು.

ನೃತ್ಯ ಸ್ಪರ್ಧೆಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ದಿನಪೂರ್ತಿ ನಡೆದ ಕಾರ್ಯಕ್ರಮ ಎಲ್ಲ ವಯಸ್ಸಿನ ವಿಭಾಗಗಳಲ್ಲಿ ರೋಮಾಂಚಕಾರಿ ಪ್ರದರ್ಶನಗಳಿಂದ ತುಂಬಿತು. ಪ್ರತಿಷ್ಠಿತ ದುಬೈ ಡ್ಯಾನ್ಸ್‌ ಕಪ್‌ನ ಎಲ್ಲ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಿದ್ದು, 240ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡರು. ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯೂ ಬಿರುಸಿನಿಂದ ನಡೆದಿದ್ದು, 100ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸಭಾಂಗಣದಲ್ಲಿ 1,300 ಕ್ಕೂ ಹೆಚ್ಚು ಜನರ ಉತ್ಸಾಹಭರಿತ ಪ್ರೇಕ್ಷಕರ ಸಮಾವೇಶಗೊಂಡಿದ್ದರು. ಎಲ್ಲ ಆಹ್ವಾನಿತರಿಗೆ ಕರ್ನಾಟಕ ಸಂಘ ದುಬೈ ವತಿಯಿಂದ ಉಚಿತ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ವಿವಿಧ ಪ್ರದರ್ಶನಗಳ ಮಾರಾಟ ಮತ್ತು ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು.

ಈವೆಂಟ್‌ ಅನ್ನು ಅದರ ಶೀರ್ಷಿಕೆ ಪ್ರಾಯೋಜಕರು, ಬೆಂಗಳೂರಿನಲ್ಲಿರುವ ರಿಯಲ್‌ ಎಸ್ಟೇಟ್‌ ಡೆವಲಪರ್‌ ದಿ ಫ್ಯೂಚರ್‌ ಅರ್ಥ್ ಗ್ರೂಪ್‌ ಉತ್ತಮವಾಗಿ ಬೆಂಬಲಿಸಿದರು, ಮೋನಿಕಾ ಮಂದಣ್ಣ ಇನ್ನೋವರ್‌ ಪ್ಲಾಟಿನಂ ಪ್ರಾಯೋಜಕರಾದ ಪುರವಂಕರ ಅವರನ್ನು ಪ್ರತಿನಿಧಿಸಿದ್ದು ವಿಪಿ ಪವನ್‌ ಕುಮಾರ್‌ ಮತ್ತು ಅವರ ಸಲಹೆಗಾರರಾದ ನಾಗೇಶ್‌ ಉಡುಪಿ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲ ಪ್ರಾಯೋಜಕರುಗಳನ್ನು ಹಾಗೂ ಯುಎಇಯಲ್ಲಿರುವ ಎಲ್ಲ ಕರ್ನಾಟಕ ಪರ ಸಂಘಟನೆಗಳ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘ ದುಬೈಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಧಿಕಾ ಸತೀಶ್‌, ಹರೀಶ್‌ ಕೋಡಿ, ಸಿದ್ದಲಿಂಗೇಶ್‌ ಬಿ. ಆರ್‌., ಯುವರಾಜ್‌ ದೇವಾಡಿಗ, ಸುನೀಲ್‌ ಗವಾಸ್ಕರ್‌, ಲಾರೆನ್ಸ್‌ ನಜರೆತ್‌, ವಿನುತ ಕೆ.ಎಸ್‌., ಬೃಂದಾ ಮಂಜುನಾಥ್‌, ಶ್ವೇತಾ ಹಾಗೂ ಕಾರ್ಯಕಾರಿ ಸದಸ್ಯರ ತಂಡದವರು ಪೂರ್ವಭಾವಿ ತಯಾರಿಯೊಂದಿಗೆ ಗಲ್ಫ್ ಗೆಳೆಯರು ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವಲ್ಲಿ ಸಹಕರಿಸಿದರು.

ಕಾವ್ಯ ಯುವರಾಜ್‌ ಮತ್ತು ನವೀನ್‌ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ರೂಪ ಶಶಿಧರ್‌, ಜ್ಯೋತಿ ಮಲ್ಲಿಕಾರ್ಜುನ್‌, ಶಿಲ್ಪಾ ಸಿದ್ದಲಿಂಗೇಶ್‌, ಮಮತಾ ರಜಾಕ್‌, ಕಾವ್ಯ ಜೋಗಿ, ಬಿಂದು ಮಹದೇವ್‌, ವಿನುತಾ ಸುರೇಶ್‌, ಚೇತನಾ ಗವಾಸ್ಕರ್‌ ಮತ್ತು ಸಂಧ್ಯಾ ಇವರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಕಲಾ ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ನೀಡಲಾಯಿತು.

ಡಾ| ಸಂಜಯ್‌ ಶಾಂತರಾಂ ಮತ್ತು ಅವರ ಶಿಷ್ಯ ಕೌಶಿಕ್‌ ಅವರು ಜೋಡಿಯ ನೃತ್ಯ ಕಾರ್ಯಕ್ರಮ ನೀಡಿದರು. ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದಿನಪೂರ್ತಿ ನಡೆದ ವಿವಿಧ ಸ್ಪರ್ಧೆಗಳ ತೀರ್ಪುಗಾರರಿಗೆ ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ವಿವಿಧ ವಿಭಾಗಗಳ ಜಾನಪದ ನೃತ್ಯ, ಸಿನೆಮ್ಯಾಟಿಕ್‌ ನೃತ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನವಾಗಿ ಟ್ರೋಫಿಯನ್ನು ನೀಡಲಾಯಿತು. ಹರ್ಷೋದ್ಘಾರಗಳೊಂದಿಗೆ ಕರ್ನಾಟಕ ಸಂಘ ದುಬೈಯ ಡ್ಯಾನ್ಸ್‌ ಕಪ್‌ ಮತ್ತು ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆ ಯಶಸ್ವಿಯಾಯಿತು.

ವರದಿ: ಬಿ. ಕೆ. ಗಣೇಶ್‌ ರೈ, ದುಬೈ

Ad

ಟಾಪ್ ನ್ಯೂಸ್

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Indonesia: ಇಂಡೋನೇಷ್ಯಾದ ತನಿಂಬಾರ್‌ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?

Toxic Movie: ಯಶ್‌ ʼಟಾಕ್ಸಿಕ್‌ʼಗೆ ಮ್ಯೂಸಿಕ್‌ ನೀಡಲು ದೊಡ್ಡ ಸಂಭಾವನೆ ಕೇಳಿದ ಅನಿರುದ್ಧ್?

San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್‌ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು

San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್‌ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು

4

SarojaDevi;ಯಶಸ್ಸಿನ ಉತ್ತುಂಗದಲ್ಲೇ ಮದುವೆ..ಪತಿ ನಿಧನ,ಕಷ್ಟದಲ್ಲೇ ದಿನ ಕಳೆದ ಗಟ್ಟಿಗಿತ್ತಿ

Mangaluru: ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ

Mangaluru: ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ

Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು

Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

10

Karkala ಪೇಟೆ ರಸ್ತೆ: ಗುಂಡಿಗಳದ್ದೇ ಕಾರುಬಾರು

Kannada Movies: ಟ್ರೇಲರ್‌ನಲ್ಲಿ ʼಜೂನಿಯರ್‌ʼ, ʼಎಕ್ಕʼ ಮಿಂಚು

Kannada Movies: ಟ್ರೇಲರ್‌ನಲ್ಲಿ ʼಜೂನಿಯರ್‌ʼ, ʼಎಕ್ಕʼ ಮಿಂಚು

8

Mangaluru: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ; ಅಕ್ಟೋಬರ್‌ಗೆ ಗಡುವು

7

Surathkal: ನಿಂತಿದ್ದ ನರ್ಮ್ ಬಸ್‌ಗಳ ಮರು ಸಂಚಾರ

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.