ಆನ್‌ಲೈನ್‌ ಗಣೇಶನ ಆರಾಧನೆ….!


Team Udayavani, Sep 23, 2023, 5:44 PM IST

ಆನ್‌ಲೈನ್‌ ಗಣೇಶನ ಆರಾಧನೆ….!

ಗಣೇಶನ ಹಬ್ಬ ಚತುರ್ಥಿಯನ್ನು ಭಾರತದಲ್ಲಿ ಮಾತ್ರವಲ್ಲದೇ ಇಂದು ಬೇರೆ ಬೇರೆ ದೇಶಗಳಲ್ಲೂ ಆಚರಿಸಲಾಗುತ್ತಿದೆ. ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಬ್ಬಗಳನ್ನು ಆಚರಿಸುವುದು ಸಹಜವೇ. ಭಾರತದ ಆಚರಣೆ, ಸಂಪ್ರದಾಯದಿಂದ ಆಕರ್ಷಿತರಾದ ವಿದೇಶಿಗರು ಈಗೀಗ ಆಚರಣೆಗಳನ್ನು ಮಾಡುತ್ತಾರೆ. ಅದರಲ್ಲೂ ಇದು ಆನ್‌ಲೈನ್‌ ಯುಗ. ಪೂಜೆ, ಮದುವೆಗಳೇ ಆನ್‌ಲೈನ್‌ನಲ್ಲಿ ಆಗುತ್ತವಂತೆ, ಇನ್ನು ಹಬ್ಬ ಯಾವ ಲೆಕ್ಕ ಹೇಳಿ.

ಹೀಗೆ ಇತ್ತೀಚೆಗೆ ಬ್ರಹ್ಮಮುಹೂರ್ತದಲ್ಲಿ ಇಟಲಿಯಲ್ಲಿ ಗಣೇಶನ ಹಬ್ಬ ನಡೆಯಿತು. ಅದು ಝೂಮ್‌ ಮೀಟಿಂಗ್‌ನ ವೀಡಿಯೋ ಕಾಲ್‌ನ ಮೂಲಕ. ಕಂಪ್ಯೂಟರ್‌ ತೆರೆಯ ಮೇಲೆ ಗಣೇಶನ ಚಿತ್ರ ಮೂಡಿತ್ತು! ವೀಡಿಯೋ ಕಾಲ್‌ನಲ್ಲೇ ಎಲ್ಲರೂ ಸೇರಿ ತಾವಿದ್ದ ಸ್ಥಳಗಳಿಂದಲೇ ತಯಾರಿಸಿದ್ದ ತಿಂಡಿ, ಹಣ್ಣುಗಳನ್ನು ತೆರೆಯ ಮೇಲಿನ ದೇವರಿಗೆ ಅರ್ಪಿಸಿದ್ದರು.

ಮೂಡಲದಲ್ಲಿ ರವಿ ಬರಲು ಕಾದಿದ್ದ ವಾತಾವರಣ. ಹಕ್ಕಿಗಳ ಚಿಲಿಪಿಲಿ , ಮನಸ್ಸಿನಲ್ಲೇ ಭಕ್ತಿಯ ಗಂಗೆ ಹರಿಯುವ ಶಬ್ದ , ಹೊರಟಿತ್ತು ಓಂಕಾರ ಸಮುದ್ರ ತೀರದ ಊರಿಂದ. ಇಟಲಿಯ ಅನೇಕ ಭಾಗಗಳಿಂದ ಮೂವತ್ತಕ್ಕೂ ಮೇಲ್ಪಟ್ಟ ಇಟಾಲಿಯನ್‌ ಭಕ್ತರು ಝೂಮ್‌ ಮಂಟಪದಲ್ಲಿ ಸೇರಿ ಮಾನಸಿಕವಾಗಿ ವಿನಾಯಕ ಚೌತಿ ಆಚರಿಸಿದ್ದರು . ಗಣೇಶನಿಗೆ ಪ್ರಥಮ ಪ್ರಾರ್ಥನೆ ಗಾಯತ್ರಿ ಮಂತ್ರ ಜಪಿಸಿದ ಅನಂತರ ಪಿಯ ಅವರು ಹಬ್ಬದ ಆಚರಣೆಯ ವಿವರಣೆ ನೀಡಿದರು. ಬಳಿಕ ಕೋರಿನ್ನ ಅನ್ನುವವರು ಮಧುರ ಕಂಠದಿಂದ “ಗಣಾನಾಂತ್ವ ಗಣಪತಿಗಮ್‌ ‘ ಹಾಡಿದರು.

ಗಣೇಶನ ಸಂದೇಶ ಪವಾಡಗಳ ಮೂಲಕ ಮಾನವನಿಗೆ , ಮಾತನಾಡುವ ಭಾಗ್ಯ ನನ್ನದಾಗಿತ್ತು. ಗಣೇಶನ ಮಹಿಮೆ ಅವನರೂಪದ ಸಂಕೇತಗಳು ಎಲ್ಲವನ್ನು ವಿವರಿಸಿದವರು ರೊಬೆತೋರ್‌, ಆಧ್ಯಾತ್ಮಿಕದ ಸಂಶೋಧನೆ ನಡೆಸುವ ಬ್ರೂನ ಅವರ ಮಾತಿನ ಲಹರಿ ಎಲ್ಲರನ್ನು ಭಕ್ತಿಮಾರ್ಗಕ್ಕೆ ಮುನ್ನಡೆಯಲು ಹುರಿದುಂಬಿಸಿತ್ತು.

ಗಣೇಶನಿಗೆ ಪೂಜೆ, ಮಂಗಳಾರತಿ ಎಲ್ಲವೂ ವರ್ಚುವಲ್‌ ಆಗಿ ನಡೆಯುತ್ತಿತ್ತು. ಪೇ ಸರೋ ಅನ್ನುವ ಸಮುದ್ರ ತೀರದಲ್ಲಿರುವ ಊರಿನಿಂದ ಹಬ್ಬದಾಚರಣೆ ಆಯೋಜಿಸಿದ್ದವರು ಅಮಿಲ್ಕರೆ ಎನ್ನುವವರು. ಆನ್‌ಲೈನ್‌ ಫ್ಲಾಟ್‌ಫಾರ್ಮ್ ಮೂಲಕ ಎಲ್ಲರೂ ಹಬ್ಬದ ಆಚರಣೆಯುಲ್ಲಿ ಒಂದಾಗುವಂತೆ ಮಾಡಿದ್ದರು. ಶಾಂತಿ ಎನ್ನುವವರು ಸುಮಧುರ ಕಂಠದಿಂದ ಹಾಡಿ ನಮನ ಸಲ್ಲಿಸಿದರು. ಎಲ್ಲವನ್ನೂ ಗಮನಿಸಿದ್ದಾಗ ಈ ಇಂಟರ್‌ನೆಟ್‌ನ ಸಾಧ್ಯತೆಗಳ ಬಗ್ಗೆ ಅಚ್ಚರಿ ಅನಿಸಿತ್ತು.

*ಜಯಮೂರ್ತಿ, ಇಟಲಿ

ಟಾಪ್ ನ್ಯೂಸ್

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.