ಪಿಕ್ನಿಕ್ ಗೆ ತೆರಳಿದ್ದ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದ ಬಾಲಕ ಸಾವು
Team Udayavani, Jul 22, 2022, 9:48 PM IST
ರಬಕವಿ-ಬನಹಟ್ಟಿ : ಪಿಕ್ನಿಕ್ಗೆಂದು ತೆರಳಿದ ಏಳೆಂಟು ಜನರ ಪಾಠಶಾಲಾ ಗೆಳೆಯರ ಗುಂಪೊಂದರಲ್ಲಿನ ಬಾಲಕ ಕಾಲು ಜಾರಿ ಹಳ್ಳದಲ್ಲಿ ಮುಳುಗಿ ಸಾವಿಗೀಡಾದ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಕಳೆದ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಮೀಪದ ಯಲ್ಲಟ್ಟಿ ಗ್ರಾಮದ ಹಳ್ಳಕ್ಕೆ ಗುಳ್ಳವನ ಪಿಕ್ನಿಕ್ಗೆಂದು ಶಾಲಾ ವಿದ್ಯಾರ್ಥಿಗಳ ಏಳೆಂಟು ಬಾಲಕರ ಗುಂಪಿನಲ್ಲಿ ಬನಹಟ್ಟಿಯ ಹರಿಜನಕೇರಿ ನಿವಾಸಿ ಪರಶುರಾಮ ಸಿದ್ದಪ್ಪ ನಡುವಿನಮನಿ(16) ಓಡಾಡುತ್ತಿರುವಾಗ ಆಯತಪ್ಪಿ ಕಾಲು ಜಾರಿದ ಪರಿಣಾಮ ಹಳ್ಳದ ಕಿನಾರೆಯಲ್ಲಿ ಬಿದ್ದ ಪರಿಣಾಮ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಅಗ್ನಿಶಾಮಕ ಹಾಗು ಪರಿಣಿತ ಈಜುಗಾರರ ತಂಡವು ಸತತ 24 ಗಂಟೆಗಳ ಕಾಲ ಶೋಧ ನಡೆಸಿ ಕೊನೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಹಳ್ಳದಲ್ಲಿನ ಶವ ಹೊರತೆಗೆಯುವಲ್ಲಿ ಯಶಸ್ವಿಯಾದರು. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ರಾಕೇಶ ಬಗಲಿ ಮತ್ತು ಪುರಂದರ ಪೂಜಾರಿ ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು