ಮತ್ತೆ ಕೃಷ್ಣಾ ಮೇಲ್ದಂಡೆ ಪೂರ್ಣ ಆಶಯ

ಹೀಗೆ ಹಲವು ಕಾಮಗಾರಿಗೆ ಒಟ್ಟಾರೆ, 1.36 ಲಕ್ಷ ಎಕರೆ ಭೂಮಿ ಕಳೆದುಕೊಳ್ಳಲಿದ್ದೇವೆ.

Team Udayavani, Oct 1, 2022, 5:45 PM IST

ಮತ್ತೆ ಕೃಷ್ಣಾ ಮೇಲ್ದಂಡೆ ಪೂರ್ಣ ಆಶಯ

ಬಾಗಲಕೋಟೆ: ದೇಶದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಮತ್ತು ಅಂತಿಮ ಹಂತದ ನೀರಾವರಿ, ಜಲಾಶಯ ಎತ್ತರ, ಪುನರ್‌ವಸತಿ, ಪುನರ್‌ ನಿರ್ಮಾಣ ಹೀಗೆ ಹಲವು ಕಾರ್ಯಗಳು ಕೈಗೊಳ್ಳುವ ವಿಷಯದಲ್ಲಿ ನಾಡದೊರೆ ಬಸವರಾಜ ಬೊಮ್ಮಾಯಿ, ಶುಕ್ರವಾರ ಆಲಮಟ್ಟಿಯಲ್ಲಿ ಆಡಿದ ಮಾತುಗಳು, ಈ ಭಾಗದ ಜನರಲ್ಲಿ ಒಂದಷ್ಟು ಭರವಸೆ ಮೂಡಿಸಿವೆ.

ಹೌದು, ಕೃಷ್ಣಾ ಮೇಲ್ದಂಡೆ ಯೋಜನೆ ಎಂಬುದು ಸುಮಾರು ಅರ್ಧ ಶತಕಕ್ಕೂ ಹೆಚ್ಚು ಅವಧಿಯಿಂದ ನಡೆಯುತ್ತಲೇ ಇದೆ. 1962 ಮತ್ತು 1963ರಲ್ಲಿ ಎರಡು ಬಾರಿ ಭೂಮಿಪೂಜೆಗೊಂಡ ಆಲಮಟ್ಟಿ ಜಲಾಶಯ ನಿರ್ಮಾಣ ಕಾಮಗಾರಿ, ಪೂರ್ಣಗೊಂಡು, ನೀರು ನಿಲ್ಲಿಸಲು ಆರಂಭಿಸಿದ್ದು 1999-2000ನೇ ಅವಧಿಯಲ್ಲಿ. 2005ರಲ್ಲಿ ಈ ಜಲಾಶಯ ಲೋಕಾರ್ಪಣೆಗೊಂಡಿದೆ.

ಚುನಾವಣೆಯ ತಂತ್ರವಾಗದಿರಲಿ: ಪ್ರತಿ ಬಾರಿ ವಿಧಾನಸಭೆ ಚುನಾವಣೆ ಬಂದಾಗೊಮ್ಮೆ, ಆಡಳಿತದಲ್ಲಿರುವ ಪಕ್ಷದ ಮುಖ್ಯಮಂತ್ರಿಗಳು, ಸಚಿವರು, ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು, ಕೃಷ್ಣೆಗೆ ತೋರುವ ಅತೀವ ಕಾಳಜಿ-ಪ್ರೀತಿ ಕಂಡರೆ, ವರ್ಷದಲ್ಲೇ ಎಲ್ಲಾ ಕಾಮಗಾರಿ ಪೂರ್ಣಗೊಳ್ಳುತ್ತವೆಯೇನೋ ಎಂಬ ಭರವಸೆ ಮೂಡುತ್ತದೆ. ಆದರೆ, ಅಧಿಕಾರಕ್ಕೆ ಬಂದ ಬಳಿಕ, ಬರೊಬ್ಬರಿ ನಾಲ್ಕು ವರ್ಷ, ಆಡಿದ ಮಾತುಗಳ ಭರವಸೆಗಳು, ಕುಟುಂತ್ತ ಅನುಷ್ಠಾನಗೊಳ್ಳುತ್ತವೆ. ಇದು ಹಿಂದೆ 2013ರಿಂದ 2018ರಲ್ಲಿ ಈ ಭಾಗದ ಜನರು ಕಣ್ಣಾರೆ ಕಂಡಿದ್ದಾರೆ. ಹಾಗೆಯೇ ಸದ್ಯ ಬೊಮ್ಮಾಯಿ ಅವರು ಹೇಳಿದ ಮಾತುಗಳೂ ಕೇವಲ, ಮುಂಬರುವ ಚುನಾವಣೆಗೆ ರಾಜಕೀಯ ಭರವಸೆಗಳಾಗಿ ಉಳಿಯದಿರಲಿ ಎಂಬುದು ಈ ಭಾಗದ ಹೋರಾಟಗಾರರ ಬಲವಾದ ಒತ್ತಾಯ.

ಭರವಸೆ ಇಮ್ಮಡಿ: ಶುಕ್ರವಾರ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಬೊಮ್ಮಾಯಿ, ಕೃಷ್ಣಾ ನದಿ ನೀರು ಹಂಚಿಕೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವುದು, ಮಹಾರಾಷ್ಟ್ರ ಮತ್ತು ಕರ್ನಾಟಕದ ಇಬ್ಬರು ನ್ಯಾಯಮೂರ್ತಿಗಳು, ಹಿಂದಕ್ಕೆ ಸರಿದಿರುವುದು, ಹೊಸ ನ್ಯಾಯಮೂರ್ತಿಗಳ ನೇಮಕ ಹಾಗೂ ಯುಕೆಪಿಗೆ ಸರ್ಕಾರ ಕೈಗೊಳ್ಳಲಿರುವ ಮುಂದಿನ ಯೋಜನೆಗಳ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ. ಅವರ ಮಾತು, ಈ ಭಾಗದ ರೈತರು, ನೀರಾವರಿ ಹೋರಾಟಗಾರರಿಗೆ ಭರವಸೆ ಇಮ್ಮಡಿಗೊಳಿಸಿದೆ. ಆದರೆ, ಇದು ಆಡಿದ ಮಾತುಗಳಂತೆ ಅನುಷ್ಠಾನಕ್ಕೆ ಬರಲಿ ಎಂಬುದು ಅವರೆಲ್ಲರ ಆಗ್ರಹ.

ಮುಖ್ಯಮಂತ್ರಿಗಳಾದವರಲ್ಲಿ ಯುಕೆಪಿ ಕುರಿತು ಆಳವಾದ ಮಾಹಿತಿ ಇರುವವರಲ್ಲಿ ಬೊಮ್ಮಾಯಿ ಮೊದಲಿಗರೆಂದರೆ ತಪ್ಪಲ್ಲ. ಇಂದಿಗೂ ಅವರು ಈ ಭಾಗದ ಪ್ರತಿಯೊಂದು ಯೋಜನೆ, ಅಂಕಿ-ಸಂಖ್ಯೆಗಳನ್ನು ಯಾವ ಕೈಪಿಡಿ ನೋಡದೇ ಹೇಳುತ್ತಾರೆ. ಅವರೇ ಜಲಸಂಪನ್ಮೂಲ ಸಚಿವರಾಗಿದ್ದಾಗ ಈ ಬಗ್ಗೆ ಸಾಕಷ್ಟು ಅಧ್ಯಯನ ಕೂಡ ಮಾಡಿದ್ದಾರೆ. ಕಳೆದ 2010ರಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಬಂದಾಗ, ಸ್ವತಃ ಬೊಮ್ಮಾಯಿ ಅವರೇ ಜಲ ಸಂಪನ್ಮೂಲ ಸಚಿವರೂ ಆಗಿದ್ದರು. ಹೀಗಾಗಿ ಈ ಯೋಜನೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.

ಈಗ ಅವರೇ ಸಿಎಂ ಆಗಿರುವುದು, ಈ ಭಾಗಕ್ಕೆ ದೊಡ್ಡ ವರದಾನವಾಗಿ ಪರಿಣಿಸಬೇಕು. ಚುನಾವಣೆ ವರ್ಷವಾದರೂ ನೀತಿ ಸಂಹಿತೆ ಹೊರ ಬೀಳುವ ಮೊದಲೇ, ಕೃಷ್ಣೆಯ ವಿಷಯದಲ್ಲಿ ಅಧಿಸೂಚನೆ, ರಾಷ್ಟ್ರೀಯ ಯೋಜನೆಗೆ ಪ್ರಸ್ತಾವನೆ, ಮುಕ್ಕಾಲು ಭಾಗದಷ್ಟು ಅಗತ್ಯ ಅನುದಾನವೂ ಒದಗಲಿ ಎಂಬುದು ಹಲವರ ಆಶಯ. ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ ಎತ್ತರಿಸಿದಾಗ ನೀರಾವರಿ, ಪುನರ್‌ವಸತಿ, ಪುನರ್‌ ನಿರ್ಮಾಣ, ಕಾಲುವೆ ನಿರ್ಮಾಣ ಹೀಗೆ ಹಲವು ಕಾಮಗಾರಿಗೆ ಒಟ್ಟಾರೆ, 1.36 ಲಕ್ಷ ಎಕರೆ ಭೂಮಿ ಕಳೆದುಕೊಳ್ಳಲಿದ್ದೇವೆ. ಮುಖ್ಯವಾಗಿ 20 ಹಳ್ಳಿಗಳು, ಸಂಪೂರ್ಣ ಮುಳುಗಡೆಗೊಳ್ಳಲಿವೆ.

ಮುಳುಗಡೆ ಹಳ್ಳಿ, ಭೂಸ್ವಾಧೀನಕ್ಕಾಗಿ ಹೊರಡಿಸಿದ್ದ ಅಧಿಸೂಚನೆಗಳು, ಅವಧಿ ಮೀರಿದ ಹಿನ್ನೆಲೆಯಲ್ಲಿ ರದ್ದಾಗಿವೆ. ಹೊಸದಾಗಿ ಅಧಿಸೂಚನೆ ಹೊರಡಿಸಿ, 10 ಹಳ್ಳಿಗಳ ಪರಿಹಾರ ವಿತರಣೆಗೆ ಅಂತಿಮ ಹಂತ ತಲುಪಿದೆ. ಇದಕ್ಕಾಗಿ ತಕ್ಷಣವೇ 3900 ಕೋಟಿ ಹಣ ಬೇಕಿದೆ. ಅದನ್ನು ಕೊಡುವುದಾಗಿ ಸ್ವತಃ ಸಿಎಂ ಹೇಳಿದ್ದಾರೆ. ಆದರೆ, ಮುಳುಗಡೆಗೊಳ್ಳುವ 20 ಹಳ್ಳಿಗಳಲ್ಲಿ ಇನ್ನೂ ಆರು ಹಳ್ಳಿಗಳ ಸರ್ವೆ ಕಾರ್ಯ ಪುನಃ ನಡೆಸುವುದಾಗಿ ಹೇಳಿದ್ದು, ಅದರ ಅಗತ್ಯವೇನಿಲ್ಲ ಎಂಬ ಮಾತು ಕೇಳಿ ಬಂದಿದೆ.

ಜಲಾಶಯ ಎತ್ತರದಿಂದ ಮುಳುಗಡೆ ಗೊಳ್ಳುವ ಸುಮಾರು 96 ಸಾವಿರ ಎಕರೆ ಭೂಮಿಗೆ ಪರಿಹಾರ ಸಿಗಬೇಕು. 20 ಹಳ್ಳಿ ಸ್ಥಳಾಂತರಗೊಳ್ಳಬೇಕು. 9 ಉಪ ಯೋಜನೆಗಳ ಎಲ್ಲಾ ಹಂತದ ಕಾಲುವೆ ನಿರ್ಮಾಣವೂ ಆಗಬೇಕು. ಇತ್ತ ನೀರು ನಿಲ್ಲಿಸುತ್ತಿದ್ದಂತೆ, ಅತ್ತ ರೈತರ ಭೂಮಿಗೂ ನೀರು ತಲುಪಬೇಕು. ಸರ್ಕಾರ ಭರವಸೆಯ ಮಾತುಗಳನ್ನಾಡದೇ, ಬದ್ಧತೆಯ ಕೆಲಸ ಮಾಡಬೇಕು ಎಂಬುದು ರೈತರ ಒಕ್ಕೊರಲ ಒತ್ತಾಯವಾಗಿದೆ.
ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.