ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

ಇಂಜನೀಯರ್ ಗಳನ್ನು ನಾಚಿಸುವಂತಿದೆ ಗೀಜಗ ಹಕ್ಕಿಯ ಗೂಡು ಹೆಣೆಯುವ ಶೈಲಿ..!

Team Udayavani, May 29, 2023, 6:51 PM IST

ಅಳಿವಿನಂಚಿನಲ್ಲಿರುವ ಗೀಜಗನ ಹಕ್ಕಿ ಗೂಡುಗಳು… 

ರಬಕವಿಬನಹಟ್ಟಿ : ಹೆಣಿಕೆ ಎಂದಾಕ್ಷಣ ನೆನಪಿಗೆ  ಬರುವುದು ಮೊದಲು ಮಹಿಳೆಯರು. ಈ ವೃತ್ತಿ ಅವರಿಗೆ ದೇವರು ಕೊಟ್ಟ ವರವಿರಬಹುದು. ಅವರು ತಮ್ಮ ಕೈಚಳಕ ತೋರಿಸುವುದರಲ್ಲಿ ಪ್ರವೀಣರು.ಆದರೆ ಹಕ್ಕಿಗಳಲ್ಲಿ  ಇದು ವ್ಯತಿರಿತಕ್ತವಾಗಿದ್ದನ್ನು ಕಾಣಬಹುದು. ನೇಯ್ಗೆ ಹಕ್ಕಿ ಎಂದೆ ಕರೆಯಿಸಿಕೊಳ್ಳುವ ಗಂಡು ಗೀಜಗ ಗೂಡು ಹೆಣೆಯುವುದರಲ್ಲಿ ಎತ್ತಿದ ಕೈ. ಈ ಗಂಡು ಹಕ್ಕಿಗೆ ದೇವರು ನೀಡಿದ ವರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಸುಂದರ ಕಟ್ಟಡ ನಿರ್ಮಾಣಕ್ಕೆ ಇಂಜನೀಯರನ ಅವಶ್ಯವಿದೆ. ಗಿಜಗ ಹಕ್ಕಿ ತನ್ನ ಮನೆಗೆ ತಾನೆ ಇಂಜನೀಯರ. ಇದು ಯಾರಿಗೂ ನಿಲುಕದ ಹಾಗೆ  ಬಾವಿ ಹಾಗೂ ದೊಡ್ಡದೊಡ್ಡ ಕಾಲುವೆಗಳಲ್ಲಿ ನಿರಂತರ ಹರಿಯುವ ನೀರಿನ ಪಕ್ಕ, ಬಾಗಿದ ಗಿಡಗಂಟಿಗಳ ತುತ್ತ ತುದಿಗಳಲ್ಲಿ ಗಟ್ಟಿಮುಟ್ಟಾಗಿರುವ ಸುಂದರವಾದ ಗೂಡು ಕಟ್ಟುತ್ತದೆ. ಯಾವ ಬಿರುಗಾಳಿ ಮಳೆಗೂ ಜಗ್ಗದೆ, ಹನಿ ನೀರು ಕೂಡಾ ಗೂಡಿನ ಒಳಕ್ಕೆ ನುಸುಳದಂತೆ ನಿರ್ಮಿಸುವ ಕಲೆ ಇಂಜನೀಯರನ್ನು ನಾಚಿಸುವಂತಿದೆ.

ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ: ಗೂಡು ಹೆಣೆಯುವುದರಲ್ಲಿ ಗೀಜಗನಿಗೆ ಎಷ್ಟೊಂದು ಆಸಕ್ತಿ, ಶೃದ್ಧೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಷಿಸಲು ತನ್ನದಾದ ಒಂದು ಪುಟ್ಟ ಸಂಸಾರ ಹೂಡಲು ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ. ಈ ಸುಂದರ ಹಕ್ಕಿಗೆ ಇಕ್ಕಳದಂತಹ ತನ್ನ ಚುಂಚಿನಲ್ಲಿ ಸಟಪಟನೆ ನೇಯುವ ಇದರ ಕಸೂತಿ ಕೆಲಸದ ಮುಂದೆ ಯಾವುದೇ ತಂತ್ರಜ್ಞಾನ ಸರಸಟಿಯಾಗದು.

ಹುಲ್ಲು ಕಡ್ಡಿಗೆ ಮುಂಗಾರು ಸಹಕಾರ : ಮುಂಗಾರು  ಬೆಳೆಯ ಮಧ್ಯೆ ಹಿಂಗಾರು ಮಳೆ ಆರಂಭದ ಹಂತದಲ್ಲಿ ಈ ಗೀಜಗಗಳು ಗೂಡು ಕಟ್ಟಲು ಆರಂಬಿಸುತ್ತ್ತಿರುವುದು ನಿಸರ್ಗದ ಕೊಡುಗೆ. ಏಕೆಂದರೆ ಮುಂಗಾರು ಮಳೆಯಿಂದ ಹುಲ್ಲುಕಡ್ಡಿಗಳೆಲ್ಲ ಹುಲುಸಾಗಿ ಬೆಳೆದಿರುತ್ತವೆ. ಗೂಡು ಕಟ್ಟಲು ಹುಲ್ಲುಕಡ್ಡಿ  ಹೇರಳವಾಗಿ ಬೇಕು ಉದ್ದನೇಯ ಹುಲ್ಲು ಹುಡುಕಲು ಗೀಜಗಕ್ಕೆ ಹೆಣಗಾಟವಾದರೂ ಕೂಡ ಮುಂಗಾರು ಮಳೆ ಅದಕ್ಕೆ ಸಹಕಾರ ನೀಡಿದಂತಾಗುತ್ತದೆ.

ಗೂಡುಕಟ್ಟುವ ವಿಧಾನ : ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತು ಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಿಸಬೇಕು. ಗೀಜಗ ಗೂಡನ್ನು ಹಸಿರಾದ  ಎಳೆಗಳಿಂದ ನಿರ್ಮಾಣ ಮಾಡುತ್ತದೆ.ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿತಂದು ಪರೀಕ್ಷೀಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡು ಹಕ್ಕಿ ಗೂಡನ್ನು ಅರ್ಧ ನಿರ್ಮಿಸಿದ ನಂತರಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ  ಇಷ್ಟವಾದರೆ ಮುಂದುವರೆಸುತ್ತದೆ ಇಲ್ಲದಿದ್ದರೆ ಮರಳಿ ಕಟ್ಟುತ್ತದೆ. ಗೂಡ ಅಪೂರ್ಣವಾಗಿರುವಾಗಲೆ ಹೆಣ್ಣು ಹಕ್ಕಿ ಪ್ರವೇಶಿಸಿ ಮೊಟ್ಟೆ ಇಡುತ್ತದೆ. ನಂತರ ಗಂಡು ಹಕ್ಕಿ ಇತರರು ಪ್ರವೇಶಿಸದಂತೆ ಕೆಳಗಿನ ಬಾಯಿಯವರೆಗೂ  ಮುಚ್ಚಿಬಿಡುತ್ತದೆ. ಗಂಡು ಹಕ್ಕಿ ತಾನು ಹೆಣೆದ ಗೂಡನ್ನು ಮರಿಗಳ ಪೋಷಣೆಗೆ ಬಿಟ್ಟು ಇನ್ನೊಂದು ಗೂಡನ್ನು ಕಟ್ಟಿಕೊಳ್ಳುತ್ತದೆ. ತಾಯಿ ಮತ್ತು ಮರಿಗಳಿಗೆ ಆಹಾರ ಚುಂಚಲ್ಲಿ ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಇದು ಗೂಡು ಕಟ್ಟುವುದು ಸರ್ವೆ ಸಾಮಾನ್ಯ.

ಉದರ ಪೋಷಣೆಗೆ ಹಿಂಗಾರಿ ಹಿತಕರ : ಹಿಂಗಾರಿ ಮಳೆ ಆರಂಭವಾಗುವಷ್ಟರಲ್ಲಿ ರೈತರ ಹೊಲದಲ್ಲಿನ ಸಜ್ಜಿ, ಮುಂಗಾರು ಜೋಳ ಹೀಗೆ ತೆನೆತೆನೆಗಳಲ್ಲಿ ಕಾಳು ಬೆಳೆಗಳು ಕಾಳಿನ ಹಂತದಲ್ಲಿರುವಾಗಲೇ ಈ ಗೀಜಗ ತನ್ನ ಮರಿಗಳನ್ನು ಬೆಳೆಸುವುದರೊಂದಿಗೆ ಸಂಸಾರವನ್ನು ವೃದ್ಧಿಸಿಕೊಳ್ಳುತ್ತದೆ.

ಇಕ್ಕೆಲಗಳಲ್ಲಿ ಗಡುಸಾದ ಗಿಡಗಂಟಿಗಳು ಇರುವುದನ್ನು ಗಮನಿಸಿ ಗೂಡು ನಿರ್ಮಿಸುತ್ತದೆ. ಮರಿಗಳು ಬೆಳದು ಬಲಿಷ್ಟವಾಗುವವರೆಗೂ ಆಹಾರ ತರುತ್ತದೆ. ಜಮೀನುಗಳಲ್ಲಿನ ಕೀಟಗಳನ್ನು ತಿನ್ನುವ ಪಕ್ಷಿ ಇದೀಗ ಆಧುನೀಕತೆಯಿಂದ ಮರೆಯಾಗುತ್ತಿವೆ. ಅವುಗಳ ಗೂಡುಗಳನ್ನು ಈಗ ಕಾಣುವುದು ತುಂಬಾ ವಿರಳ. ಅಪರೂಪದ ಈ ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ.

ಗೀಜುಗ ವಿಶೇಷವಾಗಿ ಗೂಡು ನಿರ್ಮಾಣ ಮಾಡುತ್ತವೆ. ಅವು ನೋಡಲು ತುಂಬಾ ವೈಶಿಷ್ಟö್ಯವಾಗಿವೆ. ಆಧುನಿಕತೆಯಿಂದಾಗಿ ಬಾವಿ, ಹಳ್ಳ, ಕೆರೆ ಸಮೀಪದ ಗಿಡಗಂಟಿಗಳಲ್ಲಿ ಕಾಣಸಿಗುತ್ತಿದ್ದ ಗೀಜುಗ ಈಗ ಕಣ್ಮರೆಯಾಗುತ್ತಿರುವುದು ನಿಜವಾಗಿಯೂ ದುಖಃದ ಸಂಗತಿ.

ರಾಜಕುಮಾರ ಪಿಟಗಿ, ಪಕ್ಷಿ ಪ್ರೇಮಿ ಹಾಗೂ ಪಕ್ಷಿಗಳ ಛಾಯಾಗ್ರಾಹಕರು

ಕಿರಣ ಶ್ರೀಶೈಲ ಆಳಗಿ

 

ಟಾಪ್ ನ್ಯೂಸ್

Karwar ಟುಪಲೇವ್ ಯುದ್ಧ ವಿಮಾನ ಜೋಡಣೆ ಪ್ರಾರಂಭ

Karwar ಟುಪಲೇವ್ ಯುದ್ಧ ವಿಮಾನ ಜೋಡಣೆ ಪ್ರಾರಂಭ

ವಿಚಾರಣೆಗಾಗಿ ಅಭಿನವ ಹಾಲಶ್ರೀ ಮುಂಡರಗಿ ಪಟ್ಟಣಕ್ಕೆ: 2 ದಿನ ಪೊಲೀಸ್ ಕಸ್ಟಡಿಗೆ

Gadag; ವಿಚಾರಣೆಗಾಗಿ ಅಭಿನವ ಹಾಲಶ್ರೀ ಮುಂಡರಗಿ ಪಟ್ಟಣಕ್ಕೆ: 2 ದಿನ ಪೊಲೀಸ್ ಕಸ್ಟಡಿಗೆ

Raj Kundra: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಜೈಲಿನ ದಿನಗಳ ಸುತ್ತ ಬರಲಿದೆ ಸಿನಿಮಾ

Raj Kundra: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಜೈಲಿನ ದಿನಗಳ ಸುತ್ತ ಬರಲಿದೆ ಸಿನಿಮಾ

ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮಾಜದ ಋಣಭಾರದಲ್ಲಿದೆ: ಜಯ ಮೃತ್ಯುಂಜಯ ಸ್ವಾಮೀಜಿ

Congress ಸರ್ಕಾರ ಲಿಂಗಾಯತ ಸಮಾಜದ ಋಣಭಾರದಲ್ಲಿದೆ: ಜಯ ಮೃತ್ಯುಂಜಯ ಸ್ವಾಮೀಜಿ

TDY-16

‘Thalaivar 170’: 32 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ರಜಿನಿ – ಬಿಗ್‌ ಬಿ ನಟನೆ

Asian Games: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಬೇಟೆ

Asian Games: 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ ಚಿನ್ನದ ಬೇಟೆ; Video

tdy-15

Homework ಮಾಡದಕ್ಕೆ ತಲೆಗೆ ಹೊಡೆದ ಶಿಕ್ಷಕಿ; ಕುಸಿದು ಬಿದ್ದು 5 ವರ್ಷದ ವಿದ್ಯಾರ್ಥಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಮನವಿ

Eid Procession: ಈದ್ ಮೆರವಣಿಗೆ ವೇಳೆ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

madhu-bangarappa

Shimoga incident; ಕಾನೂನುಬದ್ಧ ಬಂಟಿಂಗ್ಸ್, ಬ್ಯಾನರ್ ಅಳವಡಿಸಲು ಅವಕಾಶವಿದೆ: ಮಧುಬಂಗಾರಪ್ಪ

Shimoga ಗಲಾಟೆಗೆ ಸಿಎಂ, ಗೃಹ ಸಚಿವರ ಕುಮ್ಮಕ್ಕು ಕಾರಣ: ಶೋಭಾ ಕರಾಂದ್ಲಾಜೆ

Shimoga ಗಲಾಟೆಗೆ ಸಿಎಂ, ಗೃಹ ಸಚಿವರ ಕುಮ್ಮಕ್ಕು ಕಾರಣ: ಶೋಭಾ ಕರಾಂದ್ಲಾಜೆ

BJP- JDS Alliance”ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು

Congress Vs JDS “ಈ ಹಿಂದೆ ನೀವೂ ಫುಟ್ ಬಾಲ್ ಆಡಿಲ್ಲವೇ?’ಎಚ್‌ಡಿಡಿಗೆ ಡಿಕೆಶಿ ತಿರುಗೇಟು

BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗ ಪಿತೃಪಕ್ಷದ ನೆವ

BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗ ಪಿತೃಪಕ್ಷದ ನೆವ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Karwar ಟುಪಲೇವ್ ಯುದ್ಧ ವಿಮಾನ ಜೋಡಣೆ ಪ್ರಾರಂಭ

Karwar ಟುಪಲೇವ್ ಯುದ್ಧ ವಿಮಾನ ಜೋಡಣೆ ಪ್ರಾರಂಭ

ವಿಚಾರಣೆಗಾಗಿ ಅಭಿನವ ಹಾಲಶ್ರೀ ಮುಂಡರಗಿ ಪಟ್ಟಣಕ್ಕೆ: 2 ದಿನ ಪೊಲೀಸ್ ಕಸ್ಟಡಿಗೆ

Gadag; ವಿಚಾರಣೆಗಾಗಿ ಅಭಿನವ ಹಾಲಶ್ರೀ ಮುಂಡರಗಿ ಪಟ್ಟಣಕ್ಕೆ: 2 ದಿನ ಪೊಲೀಸ್ ಕಸ್ಟಡಿಗೆ

Raj Kundra: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಜೈಲಿನ ದಿನಗಳ ಸುತ್ತ ಬರಲಿದೆ ಸಿನಿಮಾ

Raj Kundra: ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಜೈಲಿನ ದಿನಗಳ ಸುತ್ತ ಬರಲಿದೆ ಸಿನಿಮಾ

ಕಾಂಗ್ರೆಸ್ ಸರ್ಕಾರ ಲಿಂಗಾಯತ ಸಮಾಜದ ಋಣಭಾರದಲ್ಲಿದೆ: ಜಯ ಮೃತ್ಯುಂಜಯ ಸ್ವಾಮೀಜಿ

Congress ಸರ್ಕಾರ ಲಿಂಗಾಯತ ಸಮಾಜದ ಋಣಭಾರದಲ್ಲಿದೆ: ಜಯ ಮೃತ್ಯುಂಜಯ ಸ್ವಾಮೀಜಿ

Karwar: ಕೊನೆಗೂ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

Karwar: ಕೊನೆಗೂ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.