ಮಹಾಲಿಂಗಪುರ: ಕೋಣನಿಗೂ ಬಂತು ಬರ್ತ್ ಡೇ ಭಾಗ್ಯ : ಊಟ,ಕೇಕ್,ಫೋಟೋ ಶೂಟ್.. ಸಂಭ್ರಮ ಬಲು ಜೋರು
Team Udayavani, Aug 3, 2022, 2:11 PM IST
ಮಹಾಲಿಂಗಪುರ: ಪಟ್ಟಣದ ಹೊರವಲಯದಲ್ಲಿ ರನ್ನಬೆಳಗಲಿ ಸರಹದ್ದಿನಲ್ಲಿರುವ ರೈತ ಸಿದ್ದು ಮಹಾದೇವ ಧರಿಗೌಡರ ಅವರು ಸಾಕಿದ ಕೋಣಕ್ಕೆ ಒಂದು ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಮನೆಯ ಎಮ್ಮೆ ಹಾಕಿದ ಗಂಡು ಕರುವನ್ನು ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿದ್ದಾರೆ. ಅದಕ್ಕೆ ಬುಜ್ಜಿ ಮತ್ತು ಭೀಮ ಎಂದು ಹೆಸರಿಟ್ಟಿದ್ದಾರೆ. ಒಂದು ವರ್ಷ ತುಂಬಿದ ಬುಜ್ಜಿ ಗೆ ಸಂಭ್ರಮದಿಂದ ಬರ್ತಡೇ ಮಾಡಿದರು.
ಆ ದಿನ ಅದರ ಮೈ ತೊಳೆದು, ಬಣ್ಣದ ಹಗ್ಗ ಮತ್ತು ಹೂಮಾಲೆಯೊಂದಿಗೆ ಅಲಂಕರಿಸಿ ಕೋಣದ ಭಾವಚಿತ್ರವಿರುವ ಬ್ಯಾನರ್ ತಯಾರಿಸಿ, ಪೆಂಡಾಲ್ ಹಾಕಿಸಿ, ಕೇಕ್ ಕತ್ತರಿ ನೂರಾರು ಬಂಧುಗಳನ್ನು ಆಹ್ವಾನಿಸಿ ಊಟ ಮಾಡಿಸುವ ಮೂಲಕ ಬುಜ್ಜಿ ಬರ್ತಡೇ ಮಾಡಿ ಗಮನ ಸೆಳೆದರು. ಫೋಟೋ ಗ್ರಾಫರ್ನ ಕರೆಸಿ ಎಲ್ಲ ಗೆಳೆಯರು ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಬುಜ್ಜಿ ಜೊತೆ ಫೋಟೋ ತೆಗೆಸಿಕೊಂಡರು.
ಆನೆಯಲ್ಲ, ಆಜಾನುಬಾಹು ಕೋಣ:
ಕರುವಿಗೆ ಮೇವಿನೊಂದಿಗೆ 4 ಕೆಜಿ ಮುಸುರೆ( ಪಶು ಆಹಾರ) ತಿನ್ನಿಸಿದ್ದಾರೆ. ನಿತ್ಯ 5 ಲೀ ಹಾಲು ಖರೀದಿಸಿ ಉಣಿಸಿದ್ದು ವಿಶೇಷ. ಯಾವುದಕ್ಕೂ ಕಡಿಮೆ ಮಾಡದೇ ಕಾಳಜಿಯಿಂದ ಮೇಯಿಸಿದ ಪರಿಣಾಮ ಕರು ದಷ್ಟಪುಷ್ಟವಾಗಿ ಚಿಕ್ಕ ಆನೆಯಂತೆ ಕಾಣುತ್ತಿದೆ. ಸಾಮಾನ್ಯ ಕರು 3 ವರ್ಷದ ನಂತರ ಯಾವ ಗಾತ್ರ ಬೆಳೆಯುತ್ತದೆಯೋ ಆ ಗಾತ್ರದಷ್ಟು ಒಂದೇ ವರ್ಷದ ಕರು ಬೆಳೆದಿರುವುದು ವಿಶೇಷ. ಇದರ ಗಾತ್ರ, ಅಂದ ಚೆಂದ ನೋಡಿದವರು ಸೆಲಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ. ಕೆಲವರು ಈಗಾಗಲೇ 1.50 ಲಕ್ಷ ರೂ. ಬೆಲೆ ಕಟ್ಟಿ ಖರೀದಿಸಲು ಕೇಳಿದ್ದಾರೆ. ಆದರೂ ಸಿದ್ದು ಇದನ್ನು ಮಾರಿಲ್ಲ.
ಕೋಣ ಎಂಬುದು ದಡ್ಡನಿಗೆ ಬಳಸುವ ಬೈಗುಳ ಮತ್ತು ಯಮನ ವಾಹನ ಎಂಬ ನಕಾರಾತ್ಮಕ ಸಂಬೋಧನೆ ಎಂಬ ಅಭಿಪ್ರಾಯವಿದೆ. ಎಮ್ಮೆ ಸಾಕಿದರೆ ಹೈನು, ಕೋಣ ಸಾಕಿದರೆ ಏನು? ಎಂಬ ತಾತ್ಸಾರವೂ ಜನರಲ್ಲಿದೆ. ಎಮ್ಮೆ ಗಂಡು ಕರುವಿಗೆ ಜನ್ಮವಿತ್ತರೆ ಅಯ್ಯೋ ಕೋಣ ಹುಟ್ಟಿತು ಎಂದು ಮೂಗು ಮುರಿಯುವವರೂ ಇದ್ದಾರೆ. ಈ ಎಲ್ಲ ಉದ್ಗಾರಗಳ ಮಧ್ಯೆ ಕೋಣವನ್ನು ಪ್ರೀತಿಯಿಂದ ಸಾಕಿ, ಮಮತೆಯಿಂದ ಮೇಯಿಸಿ ಕುಟುಂಬ ಸದಸ್ಯರಂತೆ ಆರೈಕೆ ಮಾಡುತ್ತಿರುವ ರೈತನ ಕಾರ್ಯ ಇತರರಿಗೆ ಮಾದರಿಯಾಗಿದೆ. – ಶಿವಲಿಂಗ ಸಿದ್ನಾಳ, ಉಪನ್ಯಾಸಕ ಮಹಾಲಿಂಗಪುರ
ಮೊದಲಿನಿಂದಲೂ ಜಾನುವಾರುಗಳೆಂದರೆ ಹೆಚ್ಚು ಪ್ರೀತಿ, ನಾವು ಅವುಗಳನ್ನು ಸಾಕುತ್ತೇವೆ ಎನ್ನುವುದಕ್ಕಿಂತ ಅವುಗಳೇ ನಮಗೆ ಲಾಭದಾಯಕ ಜೀವಿಗಳು. ಆದ್ದರಿಂದ ಈ ಕರುವಿಗೆ ಸಾತ್ವಿಕ ಆಹಾರ ತಿನ್ನಿಸಿ ಆಜಾನುಬಾಹುವಾಗಿ ಬೆಳೆಸಿದ್ದೇನೆ. ನೋಡಲು ದೊಡ್ಡ ಗಾತ್ರವಿದ್ದರೂ ಯಾರನ್ನೂ ಹಾಯಿವುದಿಲ್ಲ, ಮಕ್ಕಳಾದಿಯಾಗಿ ಎಲ್ಲರೊಂದಿಗೆ ಆಪ್ತವಾಗಿ ಸ್ಪಂದಿಸುತ್ತದೆ. ಅದರ ಮಾನವೀಯ ಗುಣ ನೋಡಿ ನಮಗೂ ಪ್ರೀತಿ ಹೆಚ್ಚಾಗಿ ನಮ್ಮಂತೆ ಅದಕ್ಕೂ ಬರ್ತಡೇ ಮಾಡಿ ಕೇಕ್ ತಿನ್ನಿಸಿದೆವು. – ಸಿದ್ದು ಮಹಾದೇವ ಧರಿಗೌಡರ ಕೋಣದ ಮಾಲೀಕ, ರನ್ನಬೆಳಗಲಿ-ಮಹಾಲಿಂಗಪುರ
– ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
MUST WATCH
ಹೊಸ ಸೇರ್ಪಡೆ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…