ಅಪಾಯಕ್ಕೆ ಆಹ್ವಾನಿಸುವ ರಸ್ತೆ ತಗ್ಗು-ಗುಂಡಿಗಳು


Team Udayavani, Mar 7, 2020, 1:01 PM IST

ಅಪಾಯಕ್ಕೆ ಆಹ್ವಾನಿಸುವ ರಸ್ತೆ ತಗ್ಗು-ಗುಂಡಿಗಳು

ಸಾಂದರ್ಭಿಕ ಚಿತ್ರ

ಮಹಾಲಿಂಗಪುರ: ಮುಧೋಳ-ನಿಪ್ಪಾಣಿ ರಾಜ್ಯಹೆದ್ದಾರಿಯ ಪಟ್ಟಣದ ಅಸ್ಟಗಿ ಟಾಕೀಜಿನಿಂದ ಬಸ್‌ ನಿಲ್ದಾಣದ ಕಡೆಗೆ ಹೋಗುವ ಬಲಗಡೆ ರಸ್ತೆಯಲ್ಲಿ ತಗ್ಗು ಬಿದ್ದು ಗುಂಡಿಯು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಸ್ಥಳೀಯ ರಾಜ್ಯ ಹೆದ್ದಾರಿಯಲ್ಲಿ ನೀರಿನ ಪೈಪ್‌ ಒಡೆದಿದೆ ಎಂದು ಪುರಸಭೆಯವರು ರಸ್ತೆ ಅಗೆದು ಪೈಪ್‌ ಜೋಡಿಸಿ ಸುಮಾರು 6 ತಿಂಗಳು ಕಳೆದರೂ ರಸ್ತೆ ರಿಪೇರಿ ಮಾಡದೇ ಹಾಗೆ ಬಿಟ್ಟಿರುವುದರಿಂದ ಅಲ್ಲಿ ತಗ್ಗು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪ್ರತಿದಿನ ನಾಲ್ಕೈದು ವಾಹನಗಳು ಸಂಚರಿಸುತ್ತವೆ. ಇಲ್ಲಿ ಸಂಚರಿಸುವ ವಾಹನದಾರರಿಗೆ ಇಲ್ಲಿರುವ ತಗ್ಗಿನಿಂದ ತಮ್ಮ ವಾಹನ ಎಲ್ಲ ಬೀಳುತ್ತದೋ ಎನ್ನುವ ಭಯದಲ್ಲಿಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಗರದ ಪ್ರಮುಖ ರಸ್ತೆ ಮತ್ತು ಜನನಿಬಿಡ ಪ್ರದೇಶವಾದ ಕಾರಣ ನಿತ್ಯ, ಸಾವಿರಾರು ಜನ ಪಾದಚಾರಿಗಳು ಕೂಡ ಸಂಚರಿಸುತ್ತಾರೆ. ಪುರಸಭೆಯವರು ಪೈಪ್‌ಲೈನ್‌ ರಿಪೇರಿಗೆಂದು ಅಗೆದು ಸುಮಾರು 6 ತಿಂಗಳುಗಳೆ ಕಳೆದರೂ ರಿಪೇರಿ ಮಾಡುವ ಮನಸ್ಸು ಮಾತ್ರ ಯಾರಿಗೂ ಇಲ್ಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಜ್ಯ ಹೆದ್ದಾರಿ ಇಂಜಿನಿಯರ್‌ಗಳು ಮತ್ತು ಪುರಸಭೆ ಮುಖ್ಯಾ ಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹಾಕಿ ರಸ್ತೆ ದುಸ್ಥಿಯು ವಿಳಂಬವಾಗುತ್ತಿದೆ. ಹೆದ್ದಾರಿ ಇಂಜಿನಿಯರನ್ನು ಕೇಳಿದರೆ ಅವರು ನಾವುಪುರಸಭೆಯವರಿಗೆ ಮೊದಲೇ ಹೇಳಿದ್ದೇವೆ. ಪೈಪ್‌ ಒಡೆದಿರುವುದರಿಂದ ರಸ್ತೆ ಅಗೆದಿದ್ದಾರೆ. ಅದನ್ನು ಪುರಸಭೆಯವರೇ ರಿಪೇರಿ ಮಾಡಿಕೊಳ್ಳಬೇಕು. ಇಲ್ಲವಾದರೆ ಅದರ ದುರಸ್ತಿ ಹಣವನ್ನು ನಮಗೆ ಕೊಟ್ಟರೆ ನಾವೇ ರಿಪೇರಿ ಮಾಡಿಕೊಡುತ್ತೇವೆ ಎನ್ನುತ್ತಾರೆ.

ಆದರೆ ಪುರಸಭೆ ಮುಖ್ಯಾಧಿಕಾರಿಗಳು ಮಾತ್ರ ಅದನ್ನು ತಾವು ರಿಪೇರಿ ಮಾಡಿಸುತ್ತಿಲ್ಲ. ಹೆದ್ದಾರಿಯವರಿಗೆ ರಿಪೇರಿ ಹಣವನ್ನು ಕಟ್ಟದೇ ಮಂದಗತಿಯಲ್ಲಿ ತಮ್ಮ ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಟ್ರ್ಯಾಕ್ಟರ್‌ ಸಂಚಾರ ಹೆಚ್ಚು: ಕಬ್ಬು ತುಂಬಿದ ಟ್ರ್ಯಾಕ್ಟರ್‌ ಗಳ ಸಂಚಾರ ಪಟ್ಟಣದಲ್ಲಿ ಹೆಚ್ಚು ಇದೆ. ಟ್ರ್ಯಾಕ್ಟರ್‌ ಗಳು ರಸ್ತೆ ಸರಿಯಾಗಿ ಇರುವ ಕಡೆಗಳಲ್ಲಿಯೇ ಸರಿಯಾಗಿ ಸಂಚರಿಸುವುದಿಲ್ಲ. ಇನ್ನು ಇಂತಹ ತಗ್ಗು ದಿನ್ನೆಗಳಲ್ಲಿ ಕೇಳುತ್ತಿರಾ. ಆಕಡೆ ಈಕಡೆ ತಿರುಗಾಡುತ್ತ ಹೊರಟರೆ ಸಾಕು ಅಲ್ಲಿರುವ ಸಾರ್ವಜನಿಕರು ಎಲ್ಲಿ ತಮ್ಮ ಮೇಲೆ ಟ್ರ್ಯಾಕ್ಟರ್‌ ಬಿದ್ದೆ ಬಿಡುವುದೇನೊ ಎಂಬ ಭಾಷವಾಗುತ್ತದೆ. ಸಂಜೆಯಾದರೆ ಸಾಕು ಈ ರಸ್ತೆಯಿಂದ ಸ್ವಲ್ಪ ದೂರ ಸಂಚರಿಸಬೇಕಾದರೂ ಜೀವವನ್ನು ಕೈಯಲ್ಲಿಯೇ ಇಟ್ಟುಕೊಂಡು ಸಂಚರಿಸಬೇಕಾಗಿದೆ ಎನ್ನುತಾರೆ ವಾಹನ ಸವಾರರು.

ಇಕ್ಕಟ್ಟಾದ ರಸ್ತೆ : ಸ್ಥಳೀಯ ಗಾಂಧಿ  ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಎರಡು ಬದಿಗಳಲ್ಲಿ ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದೆ. ಮುಧೋಳ, ಬಾಗಲಕೋಟೆ, ಹುಬ್ಬಳ್ಳಿ, ಜಮಖಂಡಿ, ವಿಜಯಪುರಗಳಿಗೆ ಹೋಗುವ ವಾಹನಗಳು ಇದೆ ರಸ್ತೆಯಲ್ಲಿ ಹಾದು ಸಂಚರಿಸುವುದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ.

ಈ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದರು ಮೌನಕ್ಕೆ ಶರಣಾಗಿರುವ ಪುರಸಭೆಯ ಮುಖ್ಯಾಧಿಕಾರಿಗಳು, ಸಾರ್ವಜನಿಕರು ರೊಚ್ಚಿಗೆದ್ದು ಉಗ್ರ ಹೋರಾಟ ಮಾಡುವ ಮುನ್ನ ಈ ರಸ್ತೆ ರಿಪೇರಿಗೆ ಮುಂದಾಗಬೇಕು. ಇಲ್ಲದೆ ಹೋದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಯಾರು ಬೆಲೆ ಕಟ್ಟುವವರಾರು ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.

ನಾವು ರಸ್ತೆಯನ್ನು ಅಗೆಯುವ ಮೊದಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ಹೇಳಿದ್ದೇವೆ. ರಸ್ತೆ ಅಗೆದು ಕೆಲಸ ಮುಗಿದ ತಕ್ಷಣ ನೀವೆ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲವಾದಲ್ಲಿ ನಮಗೆ ಅದಕ್ಕೆ ತಗಲುವಷ್ಟು ಹಣ ನೀಡಿದರೆ ನಾವು ರಿಪೇರಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದೇವೆ. ಆದರೆ ಅವರು ಇಲ್ಲಿಯವರೆಗೂ ಯಾವುದನ್ನು ಮಾಡಿಲ್ಲ. ಇದರಲ್ಲಿ ನಮ್ಮದು ಯಾವುದೇ ತಪ್ಪಿಲ್ಲ. -ಎಂ.ಆರ್‌.ಕುಲಕರ್ಣಿ, ರಾಜ್ಯ ಹೆದ್ದಾರಿ ಎ.ಇ.

ತಗ್ಗು ಗುಂಡಿ ಬಿದ್ದ ರಸ್ತೆ ದುರಸ್ತಿಯನ್ನು ನಾವೇ ಮಾಡಬೇಕು. ತಾಂತ್ರೀಕ ಕಾರಣದಿಂದ ವಿಳಂಬವಾಗಿದೆ. ಸದ್ಯ ಪಟ್ಟಣದಲ್ಲಿ ಡಾಂಬರೀಕರಣ ಕಾಮಗಾರಿಗಳು ಪ್ರಾರಂಭವಾಗಿವೆ. ಎರಡು-ಮೂರು ದಿನಗಳಲ್ಲಿ ಹೆದ್ದಾರಿ ಮಧ್ಯೆಯ ಗುಂಡಿಗಳಿಗೆ ಡಾಂಬರೀಕರಣ ಮಾಡುತ್ತೇವೆ. –ಬಿ.ಆರ್‌.ಕಮತಗಿ. ಮುಖ್ಯಾಧಿಕಾರಿಗಳು ಪುರಸಭೆ.

 

-ಚಂದ್ರಶೇಖರ ಮೋರೆ

ಟಾಪ್ ನ್ಯೂಸ್

1-csasd

Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

1-sdasd

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!

Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Squid Game ಪ್ರೇರಿತ ಗೇಮ್‌ ಆಡಿ ಸಿಂಗಾಪುರದಲ್ಲಿ 11 ಲಕ್ಷ ರೂ.ಗೆದ್ದ ಭಾರತೀಯ ಮೂಲದ ಕಾರ್ಮಿಕ

Mumbai; ಮುಂಬೈ ವಿಮಾನ ನಿಲ್ದಾಣ-ಬ್ಯಾಗ್‌ ನಲ್ಲಿ ಬಾಂಬ್‌ ಇದೆ ಎಂದು ಭೀತಿ ಹುಟ್ಟಿಸಿದ ಮಹಿಳೆ!

Mumbai; ಮುಂಬೈ ವಿಮಾನ ನಿಲ್ದಾಣ-ಬ್ಯಾಗ್‌ ನಲ್ಲಿ ಬಾಂಬ್‌ ಇದೆ ಎಂದು ಭೀತಿ ಹುಟ್ಟಿಸಿದ ಮಹಿಳೆ!

Nalin kumar kateel

ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಬೀದಿಗಿಳಿದು ಹೋರಾಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್

2-sddsa

Karnataka-Tamilnadu ನೀರಿಗಾಗಿ ಕಚ್ಚಾಟ ಸಾಕು,ನಾವು ಬ್ರದರ್ಸ್: ಡಿಸಿಎಂ ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಖ್ಯ ವೈದ್ಯರು ರಜೆ; ಗರ್ಭಿಣಿಯರ ಪರದಾಟ; ಬಡಜನರಿಗೆ ವರವಾಗಿದ್ದಆಸ್ಪತ್ರೆ

ಮುಖ್ಯ ವೈದ್ಯರು ರಜೆ; ಗರ್ಭಿಣಿಯರ ಪರದಾಟ; ಬಡಜನರಿಗೆ ವರವಾಗಿದ್ದಆಸ್ಪತ್ರೆ

ಮುಂಡರಗಿ: ಸರ್ಕಾರಿ ಶಾಲಾ ಕೊಠಡಿಗಳಿಗೆ ಬೇಕು ಕಾಯಕಲ್ಪ!

ಮುಂಡರಗಿ: ಸರ್ಕಾರಿ ಶಾಲಾ ಕೊಠಡಿಗಳಿಗೆ ಬೇಕು ಕಾಯಕಲ್ಪ!

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್‌

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

kiccha sudeep

ಹೊಸ ಚಿತ್ರದ ಟೀಸರ್‌ ನಿರೀಕ್ಷೆಯಲ್ಲಿ ಸುದೀಪ್‌ ಫ್ಯಾನ್ಸ್‌

ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ

ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ

1-csasd

Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

ಹರಪನಹಳ್ಳಿ: ರೈಲು ಡಿಕ್ಕಿ ಹೊಡೆದು ನಾಲ್ಕು ಕುರಿಗಳು ಸಾವು

1-sdasd

Viral Video ಇದೆಂತಾ ಡಾಂಬರೀಕರಣ: ದೋಸೆಯಂತೆ ಎಬ್ಬಿಸಬಹುದು!!