9500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್
Team Udayavani, Apr 26, 2020, 4:19 PM IST
ಬಾದಾಮಿ: ಕೋವಿಡ್ 19 ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಸುಮಾರು 9500 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಹೇಳಿದರು.
ಇಲ್ಲಿನ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತವಾಗಿ ಮತಕ್ಷೇತ್ರದ ಎಲ್ಲ ಕುಟುಂಬಗಳಿಗೆ ಎರಡರಂತೆ ಸುಮಾರು 2,46,000 ಮಾಸ್ಕ್ಗಳನ್ನು ವಿತರಿಸಲಾಗಿದೆ. ಎರಡನೇ ಹಂತವಾಗಿ ಮತಕ್ಷೇತ್ರದ 114 ಗ್ರಾಮಗಳಿಗೆ ಪಲಾವ್ ವಿತರಿಸಲಾಗಿದೆ. ಮೂರನೇ ಹಂತದಲ್ಲಿ ಗೋವಾದಲ್ಲಿರುವ ಬಾದಾಮಿ ತಾಲೂಕಿನ ಸುಮಾರು 1000 ಕುಟುಂಬಗಳಿಗೆ ಉಚಿತ ಆಹಾರ ದಿನಸಿ ಕಿಟ್ ಗಳನ್ನು ಗೋವಾ ರಾಜ್ಯಕ್ಕೆ ಕಳುಹಿಸಲಾಗಿದೆ. ಈಗ ಗುಳೇದಗುಡ್ಡ, ಕೆರೂರ, ಬಾದಾಮಿ ನಗರದ ಎಲ್ಲ ಕುಟುಂಬಗಳಿಗೆ ಉಚಿತ ಆಹಾರ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಮುಖಂಡ ಹೊಳಬಸು ಶೆಟ್ಟರ, ಮುಖಂಡರಾದ ಮಹೇಶ ಹೊಸಗೌಡ್ರ, ಎಂ.ಬಿ. ಹಂಗರಗಿ, ಪಿ.ಆರ್.ಗೌಡರ, ರಾಜಮಹ್ಮದ ಬಾಗವಾನ, ಫಾರೂಖ ದೊಡಮನಿ, ಮಂಜು ಹೊಸಮನಿ, ಪಾಂಡು ಕಟ್ಟಿಮನಿ, ಡಾ| ಎಂ.ಎಚ್.ಚಲವಾದಿ, ಆರ್.ಡಿ.ದಳವಾಯಿ, ಎಂ.ಡಿ.ಯಲಿಗಾರ, ಸಂಜಯ ಬರಗುಂಡಿ, ಶೈಲಾ ಪಾಟೀಲ ಹಾಜರಿದ್ದರು.